ಭಾನುವಾರ, ಜನವರಿ 12, 2025
ಡಾ. ಎಂ.ಮಕ್ತುಂಬಿ
ಕವಯತ್ರಿ ಡಾ.ಎಂ.ಮಕ್ತುಂಬಿ. ಇವರು ಬೀದರ ಜಿಲ್ಲೆ ಭಾಲ್ಕಿಯ ಮಹಬೂಬ್ ಸಾಬ್ ಮತ್ತು ಮಹಬೂಬಿ ಎಂಬ ದಂಪತಿಗಳಿಗೆ ದಿನಾಂಕ ೨೦-೬-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವಿಧರರಾದ ಇವರು ೨೦೦೮ರಲ್ಲಿ `ಹೃತ್ಕಿರಣಗಳು' (ಕವನ ಸಂಕಲನ) `ನನ್ನ ಶಿವ' (ಆಧುನಿಕ ವಚನ) ೨೦೧೩ರಲ್ಲಿ `ಗೌರಿಯ ಕನಸು' (ಲೇಖನ) ೨೦೧೪ರಲ್ಲಿ `ಭಾಲ್ಕಿ ತಾಲೂಕಿನ ಚುಟುಕು ಸಾಹಿತ್ಯ ಸಿಂಚನ' ೨೦೧೫ರಲ್ಲಿ `ಭಾಲ್ಕಿ ಚಂದ್ರನ ಮಹಾ ಬೆಳಗು' `ಭಾಲ್ಕಿ ಮಠದ ದಿಕ್ಸೂಚಿ’ ಎಂಬ ಕೃತಿಗಳು ಪ್ರಕಟಿಸಿ `ಅಂತರAಗದಾಳ' `ಶಿವಗಾಂಗೇಯ' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲ ಗೀತೆಗಳು ಧ್ವನಿ ಸುರುಳಿಯಾಗಿಯು ಮುದ್ರಿತಗೊಂಡಿವೆ. ಇವರಿಗೆ ಬೀದರ ಧರಿನಾಡು ಕನ್ನಡ ಸಾಹಿತ್ಯ ಸಂಘದಿAದ `ಸುವರ್ಣ ಕನ್ನಡಿಗ’ ದೇಶಪಾಂಡೆ ಪ್ರತಿಷ್ಠಾನದಿಂದ `ಆಧುನಿಕ ವಚನ ವಿದ್ರುಮ’ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಿಂದ `ರಮಣಶ್ರೀ’ ಇಳಕಲ್ ಮಠದಿಂದ `ಬಸವ ಕಾರುಣ್ಯ’ ಬೆಂಗಳೂರು ಬಸವ ಸಮಿತಿಯಿಂದ `ಬಸವ ಸೇವಾ ರತ್ನ’ ಬೀದರ ಜಿಲ್ಲಾಡಳಿತದಿಂದ `ರಾಜ್ಯೋತ್ಸವ’ ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ಅಮರಾವತಿ ಶಿವಯ್ಯ ಹಿರೇಮಠ ಪ್ರತಿಷ್ಠಾನವನ್ನು ಸ್ಥಾಪಿಸಿ ಅದರ ಮೂಲಕ ೫ ವಷಗಳಿಂದ ರಾಜ್ಯಮಟ್ಟದ ಸಾಹಿತಿಗಳಿಗೆ ಬಸವಲಿಂಗ ಪಟ್ಟದ್ದೆವರ ಹೆಸರಿನ ಪ್ರಶಸ್ತಿ ಮತ್ತು ೧೦ ಸಾವಿರ ಗೌರವಧನವು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ