ಭಾನುವಾರ, ಜನವರಿ 12, 2025
ಡಾ.ಮೀನಾಕುಮಾರಿ ಎಸ್.ಪಾಟೀಲ್
ಸಾಹಿತಿ ಡಾ.ಮೀನಾಕುಮಾರಿ ಎಸ್.ಪಾಟೀಲ್. ಇವರು ಬೀದರ ಜಿಲ್ಲೆ ಭಾಲ್ಕಿಯ ಶ್ರೀ ಸುಭಾಸ ಪಾಟೀಲ್ ಮತ್ತು ಶ್ರೀಮತಿ ಲಲಿತಾಬಾಯಿ ದಂಪತಿಗಳಿಗೆ ದಿನಾಂಕ ೩೦-೧೨-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ. ಫೀಲ್. ಪಿ.ಎಚ್.ಡಿ. ಪದವಿಧರರಾದ ಇವರು ೨೦೦೮ರಲ್ಲಿ ಕಲಬುರಗಿ ಜಿಲ್ಲೆ ಬಿಲಗುಂದಿಯ ಶ್ರೀ ರೇವಣಸಿದ್ದಪ್ಪಾ ಪಾಟೀಲ್ ರವರ ಧರ್ಮ ಪತ್ನಿಯಾಗಿದ್ದು, ೨೦೦೯ರಿಂದ ಭಾಲ್ಕಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು `ಚನ್ನಬಸವ ಪಟ್ಟದೇವರು’, `ಶಿವಶರಣ ಘಟ್ಟಿವಾಳಯ್ಯ’, `ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ದಂಪತಿಗಳು' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು ಇವರ ಬರಹ ಉಪನ್ಯಾಸ ಸಂದರ್ಶನಗಳು ಆಕಾಶವಾಣಿ, ದೂರದರ್ಶನಗಳಿಂದಲೂ ಪ್ರಸಾರವಾಗಿವೆ. ಅಷ್ಟೇಯಲ್ಲದೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಹಲವಾರು ವಿಚಾರ ಸಂಕಿರಣ ಹಾಗೂ ಕನ್ನಡ ಸಾಹಿತ್ಯ ಸಮ್ಮೇಳನಗಲ್ಲಿಯು ಪಾಲ್ಗೊಂಡು ಸಾಮಾಜಿಕ ಸಮಸ್ಯೆಗಳ ಕುರಿತು ಉಪನ್ಯಾಸಗಳು ಮಂಡಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ