ಪುಟಗಳು

ಭಾನುವಾರ, ಜನವರಿ 12, 2025

ಡಾ. ಗಾಂಧಿಜಿ ಮೊಳಕೇರೆ

ಸಾಹಿತಿ ಡಾ.ಗಾಂಧಿಜಿ. ಸಿ.ಮೊಳಕೇರೆ. ಇವರು ಭಾಲ್ಕಿ ತಾಲೂಕಿನ ಕೊನಮೇಳಕುಂದಾ ಗ್ರಾಮದ ಚಂದ್ರಪಾ ಮತ್ತು ನೀಲಮ್ಮಾ ದಂಪತಿಗಳಿಗೆ ದಿನಾಂಕ ೨-೭-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರರಾದ ಇವರು ೨೦೦೫ರಿಂದ ಕಲಬುರಗಿಯ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಡಾ. ಬಿ. ಆರ್. ಅಂಬೇಡ್ಕರ್ ಆ್ಯಂಡ್ ವುಮೆನ್ ಎಂಪವರಮೆAಟ್', `ಸೋಶಿಯಲ್ ಆ್ಯಂಡ್ ಕಲ್ಚರಲ್ ಹಿಸ್ಟರಿ ಆಫ್ ಇಂಡಿಯಾ’, `ಯುಗಪುರುಷ ಮಲ್ಲಿಕಾರ್ಜುನ ಖರ್ಗೆಜಿ', `ಬೀದರ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕೃತಿ', `ಮಂಜುಶ್ರೀ', `ಡಾ.ಬಿ.ಆರ್.ಅಂಬೇಡ್ಕರ್ ಆ್ಯಂಡ್ ಸೋಶಿಯೋ ಪಾಲಿಟಿಕಲ್ ಎಂಪವರಮೆಂಟ್', `ಹೈದರಾಬಾದ್ ಕರ್ನಾಟಕ ಇತಿಹಾಸ ಕಥನ', `ಆಧುನಿಕ ವಚನ ಸಂಪುಟ-೨೧', `ಬಸವಶ್ರೀ ಸಿದ್ದರಾಮ ಬೆಲ್ದಾಳ ಶರಣರು ಮತ್ತು ವಚನ ಸಾಹಿತ್ಯ', `ಬಸವ ಬೆಳಗು' ಎಂಬ ಕೃತಿಗಳು ರಚಿಸಿದ್ದಾರೆ. ಇವರಿಗೆ ೨೦೦೫ರಲ್ಲಿ ಯುಜಿಸಿಯಿಂದ `ರಾಜೀವಗಾಂಧಿ ಫೀಲೊಶಿಪ್ ಪ್ರಶಸ್ತಿ. ೨೦೧೧ರಲ್ಲಿ `ಪೋಸ್ಟ್ ಡಾಕ್ಟರಲ್ ಫಿಲಾಸಫಿ' `ಕಾಯಕ ರತ್ನ' ಮತ್ತು ಕಲಬುರಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ. ಹಾಗೂ ೨೦೧೮ರಲ್ಲಿ ಅಖಿಲ ಭಾರತ ದಲಿತ ಸಾಹಿತ್ಯ ಅಕಾಡೆಮಿವತಿಯಿಂದ `ಡಾ.ಬಿ.ಆರ್.ಅಂಬೇಡ್ಕರ್ ನ್ಯಾಶನಲ್ ಫಿಲಾಸಫಿ ಪ್ರಶಸ್ತಿ’ ೨೦೨೦ರಲ್ಲಿ ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿಯು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ