ಭಾನುವಾರ, ಜನವರಿ 12, 2025
ಡಾ.ಪುಟ್ಟಮಣಿ ದೇವಿದಾಸ
ಪ್ರಮುಖ ಮಹಿಳಾ ಸಾಹಿತಿಗಳಲ್ಲಿ ಒಬ್ಬರಾಗಿ ಹಲವು ಪುಸ್ತಕಗಳು ಪ್ರಕಟಿಸಿದ ಲೇಖಕಿಯೆಂದರೆ ಡಾ.ಪುಟ್ಟಮಣಿ ದೇವಿದಾಸ. ಇವರು ಬೀದರ ಜಿಲ್ಲೆ ಭಾಲ್ಕಿಯ ದೇವಿದಾಸ ಪ್ಯಾಗೆ ಮತ್ತು ರತ್ನಮ್ಮ ಪ್ಯಾಗೆ ದಂಪತಿಗಳಿಗೆ ದಿನಾಂಕ ೭-೧೨-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್ . ಪಿ.ಎಚ್.ಡಿ. ಪದವಿಧರರಾದ ಇವರು ಕಲಬುರ್ಗಿಯ ಗೋದುತಾಯಿ ದೊಡ್ಡಪ್ಪ ಅಪ್ಪಾ ಮಹಿಳಾ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ವಿಚಾರ ವಾಹಿನಿ', `ವಿ.ಶಿವಾನಂದರ ಹೈದರಾಬಾದ್-ಕರ್ನಾಟಕದ ಕನ್ನಡ ಶಿಲಾ ಶಾಸನಗಳು', `ಹೈದರಾಬಾದ್-ಕರ್ನಾಟಕದ ಗಾದೆಗಳು', `ಸಾಹಿತ್ಯ ಸನ್ನಿಧಿ', 'ಉರಿಲಿಂಗ ಪೆದ್ದಿ', `ಬೆಂಕಿಯಲ್ಲಿ ಮಿಂದ ಮಿಸುನಿಯರು' ಎಂಬ ಕೃತಿಗಳು ರಚಿಸಿದ್ದಾರೆ. `ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮ ದಂಪತಿಗಳ ಜೀವನ ಸಾಧನೆ ಒಂದು ಅಧ್ಯಯನ' ಇದು ಇವರ ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ `ವಿ.ಶಿವಾನಂದರ ಹೈದರಾಬಾದ್-ಕರ್ನಾಟಕದ ಕನ್ನಡ ಶಿಲಾ ಶಾಸನಗಳು' ಎಂಬ ಕೃತಿಯು ಶರಣಬಸವ ವಿಶ್ವವಿದ್ಯಾಲಯದ ಎಂ.ಎ.ಕನ್ನಡ ಪ್ರಥಮ ವರ್ಷದ ಶಾಸನ ವಿಷಯಕ್ಕೆ ಪರಾಮರ್ಶನ ಗ್ರಂಥವಾಗಿ ಆಯ್ಕೆಯಾಗಿದೆ. ಇವರ ಬರಹಗಳು ರಾಷ್ಟಿçÃಯ ಅಂತರಾಷ್ಟಿçÃಯ ಜರ್ನಲ್ ಗಳಲ್ಲಿ ಹಾಗೂ ಪುಸ್ತಕಗಳಲ್ಲಿ ಸುಮಾರು ೪೦ ಲೇಖನಗಳು ಪ್ರಕಟಗೊಂಡು, ಆಕಾಶವಾಣಿಯಲ್ಲಿಯು ಪ್ರಸಾರವಾಗಿವೆ. ಹಾಗೂ ಎಫ್.ಎಂ.೯೦.೮ ರೇಡಿಯೋ ಕೇಂದ್ರ ಶರಣಬಸವೇಶ್ವರ ಸಂಸ್ಥಾನ ಕಲಬುರಗಿಯಿಂದ ಇವರ ಅನೇಕ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಸಾರವಾಗಿವೆ. ಇವರಿಗೆ ಹುಮನಾಬಾದ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಮತ್ತು ಇವರ `ವಿಚಾರ ವಾಹಿನಿ' ಎಂಬ ಕೃತಿಗೆ ಅಂಬೇಡ್ಕರ್ ಪುಸ್ತಕ ಪ್ರಶಸ್ತಿ ಲಭಿಸಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ