ಔರಾಧ ತಾಲೂಕಿನ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಔರಾಧ ತಾಲೂಕಿನ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಭಾನುವಾರ, ಜನವರಿ 12, 2025
ದಿಲೀಪ ವಿ.ತರನಳ್ಳಿ
ಉದಯೋನ್ಮುಖ ಬರಹಗಾರ ದಿಲೀಪ ವಿ.ತರನಳ್ಳಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ವಿಜಯಕುಮಾರ ಮತ್ತು ಗಂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೯೦ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ. ಬಿ.ಇಡಿ. ಪದವೀಧರರಾದ ಇವರು ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೨೦ರಲ್ಲಿ `ಹಸಿದ ಹೊಟ್ಟೆ' ಎಂಬ ಕವನಸಂಕಲನ ಪ್ರಕಟಿಸಿದ್ದು, ಅದು ೨೦೧೯ನೇ ಸಾಲಿನ ಕರ್ನಾಟಕ ಸರ್ಕಾರ ಕನ್ನಡ ಪುಸ್ತಕ ಪ್ರಾಧಿಕಾರದ ಸಹಾಯ ಧನಕ್ಕೆ ಆಯ್ಕೆಯಾಗಿ ಪ್ರಕಟವಾಗಿದೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಶನಿವಾರ, ಜನವರಿ 11, 2025
ಅನಿಲ್ ಕುಮಾರ ಸೂರ್ಯವಂಶಿ
ವಾಲಿಬಾಲ್ ಕ್ರೀಡಾ ಪಟುವಾಗಿದ್ದುಕೊಂಡು ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಉದಯೋನ್ಮುಖ ಯುವ ಕವಿಯೆಂದರೆ ಅನೀಲ್ ಕುಮಾರ ಸೂರ್ಯವಂಶಿ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ 'ಮಸ್ಕಲ್' ಗ್ರಾಮದ ನರಸಿಂಗರಾವ ಮತ್ತು ಶಕುಂತಲಾ ದಂಪತಿಗಳಿಗೆ ದಿನಾಂಕ ೧-೭-೧೯೯೯ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಮುಧೋಳ್ ನಲ್ಲಿ ಮುಗಿಸಿ ನಂತರ ಬೆಂಗಳೂರ್ ನ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಯಪ್ರಕಾಶ್ ನಾರಾಯಣ್ ಕ್ರೀಡಾ ವಸತಿ ಕೇಂದ್ರದಲ್ಲಿ ಪ್ರೌಢ ಮತ್ತು ಪಿ.ಯು.ಶಿಕ್ಷಣ ಪಡೆದು ಸದ್ಯ ಬೆಂಗಳೂರಿನಲ್ಲಿ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ವಾಲಿಬಾಲ್ ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಹಿತ್ಯದಲ್ಲಿ ಆಸಕ್ತರಾಗಿ 'ಸೂಜಿ ಮಲ್ಲಿಗೆ' ಮತ್ತು `ಅಪ್ಪನ ಹೆಗಲು ' ಎಂಬ ಎರಡು ಕೃತಿಗಳು ೨೦೧೫ರಲ್ಲಿ ಪ್ರಕಟಿಸಿದ್ದ ಇವರು 'ಕರ್ನಾಟಕ ರಾಜ್ಯ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿ, ಗುಜರಾತ್ನಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯವಳಿಯಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಕಾವ್ಯ ರಚಿಸುವ ಆಸಕ್ತಿಯಿರುವುದರಿಂದ ಆಗಾಗ ಸಾಹಿತ್ಯ ರಚನೆಯು ಮಾಡುತ್ತಾರೆ. ಬೀದರನಲ್ಲಿ ನಡೆದ ವಚನ ಸಾಹಿತ್ಯ ಸಮ್ಮೇಳನ, ಹಾಗೂ ಬೆಂಗಳೂರ್ ಉತ್ತರದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.
ಸುರಬಿ
`ಸುರಬಿ' ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಿರುವ ಕವಯತ್ರಿಯೆಂದರೆ ಸುಧಾರಾಣಿ ಬಿರಾದಾರ. ಇವರ ವಚನಾಂಕಿತ `ಅಣ್ಣ ಬಸವಣ್ಣ' ಎಂದಾಗಿದೆ. `ಸುರಬಿ' ಎಂದರೆ ಸುಧಾರಾಣಿ ತಂದೆ ರಮೇಶ ಬಿರಾದಾರ.' ಎಂದಾಗಿದೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಮುಸ್ತಾಪೂರ ಗ್ರಾಮದ ರಮೇಶ ಮತ್ತು ಅನೀತಾ ದಂಪತಿಗಳಿಗೆ ದಿನಾಂಕ ೨-೧೦-೧೯೯೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ೨೦೧೮ರಲ್ಲಿ ಮಹಿಳಾ ಪೋಲಿಸ್ ಪೇದೆಯಾಗಿ ಕಮಲನಗರ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು ೨೦೧೪ರಲ್ಲಿ `ವಚನಾಂಜಲಿ' ಎಂಬ ಆಧುನಿಕ ವಚನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಿಂದಿ ಭಾಷೆಯಲ್ಲಿಯೂ ಕವನ, ಹಾಡು, ಶಾಹಿರಿ, ಲೇಖನಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಅಷ್ಟೇಯಲ್ಲದೆ ಇವರು ರಾಜ್ಯ ಮಟ್ಟದ ಕೆಲ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಇವರಿಗೆ ಕೆಲ ಕನ್ನಡಪರ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಬಾಲಾಜಿ ಕುಂಬಾರ
ಉದಯೋನ್ಮುಖ ಯುವ ಬರಹಗಾರರ ಬಾಲಾಜಿ ಕುಂಬಾರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಚಟ್ನಾಳ ಗ್ರಾಮದ ಅಮೃತ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೫-೭-೧೯೯೦ರಲ್ಲಿ ಜನಿಸಿದ್ದಾರೆ. ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ.ಕಂಪ್ಯೂಟರ್ ಪದವಿಧರರಾದ ಇವರ ಮಾತೃಭಾಷೆ ತೆಲುಗುವಾಗಿದ್ದು, ವ್ಯಾವಹಾರಿಕ ಭಾಷೆ ಕನ್ನಡವಾಗಿದೆ . ಆದರೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದ ಇವರು ಕಾಲೇಜು ದಿನಗಳಲ್ಲಿಯೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು `ಪ್ರೀತಿ ಹುಟ್ಟುವ ಹೊತ್ತು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಸುಮಾರು ೫೦ಕಿಂತಲೂ ಹೆಚ್ಚು ಶರಣರ ವಚನ ವಿಶ್ಲೇಷಣೆ ಮಾಡುತ್ತಿದ್ದು, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. `ಇವ ನಮ್ಮವ ಎಂದೇನಿಸಯ್ಯಾ' ಎಂಬ ಸಂಪಾದಿತ ಕೃತಿಯೊಂದಿಗೆ ಕೆಲ ಕವನÀಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕನ್ನೆಳ್ಳಿ ಗ್ರಾಮದಿಂದ `ಸಗರನಾಡು ಯುವ ಚೇತನ' ಪ್ರಶಸ್ತಿಯು ಪಡೆದಿರುವ ಇವರು `ಉದಯಕಾಲ, ವಿಜಯ ಕರ್ನಾಟಕ.ಉದಯವಾಣಿ, ಪ್ರಜಾವಾಣಿ. ವಿಶ್ವವಾಣಿ, ಬಿಂದಾಸ ಬೀದರ, ಕಣ್ಣಿದ್ದು ಕುರುಡ, ನ್ಯಾಯಪಥ, ಜಾಗೃತಿ ನ್ಯೂಜ್. ಮೊದಲಾದವುಗಳಲ್ಲಿ ಕವನ, ಲೇಖನ, ಬರಹಗಳು ಬರೆದು ಚಿರಪರಿಚಿತರಾಗಿದ್ದಾರೆ. ಮತ್ತು ಔರಾದ ತಾಲೂಕಿನ ಸಂತಪೂರ ವಲಯದ ಕಸಾಪ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕಲಬುರಗಿಯಲ್ಲಿ ಏರ್ಪಡಿಸಿದ ಕಾವ್ಯ ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ಹಾಗೂ ವಿವಿಧ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ, ಕವಿ ಗೊಷ್ಠಿಯಲ್ಲಿಯೂ ಪಾಲ್ಗೊಂಡಿದ್ದಾರೆ. ಹೀಗೆ ಇವರು ಕ್ರಿಯಾಶೀಲ ಸೃಜನಾತ್ಮಕ ಬರಹಗಳ ಮೂಲಕ ಗುರುತ್ತಿಸಿಕೊಂಡು ಗ್ರಾಮ ಪಂಚಾಯಿತ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಗೇಶ್ ಸ್ವಾಮಿ
`ನಾಸಾಕವಿ' ಎಂಬ ಕಾವ್ಯನಾಮ ಹೊಂದಿರುವ ನಾಗೇಶ ಸ್ವಾಮಿಯವರು. ಬೀದರ ಜಿಲ್ಲೆ ಔರಾದ ತಾಲೂಕಿನ ಮಸ್ಕಲ್ ಗ್ರಾಮದ ಮಹಾದಯ್ಯ ಸ್ವಾಮಿ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧೫-೭-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ .ಬಿ.ಎಡ್. ಪದವಿಧರರಾದ ಇವರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
`ಆದಿಬಸವ' ಎಂಬ ಅಂಕಿತನಾಮದಿAದ ಆಧುನಿಕ ವಚನಗಳು ಬರೆಯುತ್ತಿರುವ ಇವರು `ಸಂಜೀವಿನಿ' ಮತ್ತು `ಮನ ಮೆಚ್ಚಿದ ಹುಡುಗಿ' ಎಂಬ ಕವನ ಸಂಕಲನಗಳು, ಮತ್ತು ೨೦೨೦ರಲ್ಲಿ `ಕೃತಿ ಬಿಂಬ’ ಎಂಬ ವಿಮರ್ಶಾ ಕೃತಿಯು ಪ್ರಕಟಿಸಿದ್ದಾರೆ. `ಭಾರತೀಯ ಸಂಸ್ಕೃತಿಯಲ್ಲಿ ಗೋವು' (ಸಂಶೋಧನೆ) ಅಪ್ರಕಟಿತವಾಗಿದೆ. ಇವರ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಫೇಸ್ ಬುಕ್ ಮೂಲಕ ಹಲವಾರು ಸಾಹಿತಿಗಳ ಕೃತಿಗಳಿಗೆ ವಿಮರ್ಶೆಯು ಬರೆದಿದ್ದಾರೆ. ನೂರಾರು ಕವಿ ಗೋಷ್ಠಿ ಹಾಗೂ ಅನೇಕ ಸಾಹಿತ್ಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಅಷ್ಟೇಯಲ್ಲದೆ ಇವರು ವಿವೇಕ ಗ್ಲೋಬಲ್ ಟ್ರಸ್ಟ್ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿ, ಮಂದಾರ ಕಲಾವಿದರ ವೇದಿಕೆ ಬೀದರದ ಸಂಸ್ಥಾಪಕ ಸದಸ್ಯರಾಗಿ, ಸಿರಿಗನ್ನಡ ವೇದಿಕೆಯ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಕಾರ್ಯ ಸಾಧನೆಗೆ ವಿವಿಧ ಸಂಘ ಸಂಸ್ಥೆಗಳಿAದ `ಜನಸೇವಾ ರಾಜ್ಯ ಪ್ರಶಸ್ತಿ. ಕಾವ್ಯ ಚಂದ್ರಿಕೆ, `ಕನ್ನಡ ರತ್ನ' ಪ್ರಶಸ್ತಿ ಪುರಸ್ಕಾರಗಳು ಪಡೆದು ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಎಂ.ಬಿ. ಅಮರವಾಡಿ
ಉದಯೋನ್ಮುಖ ಬರಹಗಾರ ಬಿ.ಎಂ.ಅಮರವಾಡಿಯವರು ಬೀದರ ಜಿಲ್ಲೆ ಔರಾದ ತಾಲೂಕಿನ ಭೀಮಗೊಂಡ್ ಮತ್ತು ಅಂಜನಾಬಾಯಿ ದಂಪತಿಗಳಿಗೆ ದಿನಾಂಕ ೮-೬-೧೯೮೭ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ.ಬಿ.ಇಡಿ ಪದವಿಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಪ್ರಸ್ತುತ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
`ಸಂಪ್ರತಿ' (ಕವನ ಸಂಕಲನ) ಪ್ರಕಟಿಸಿದ ಇವರು ಚುಟುಕು, ಲೇಖನಗಳ ಕೃತಿಗಳು ಹೊರ ತರುತ್ತಿದ್ದಾರೆ. ಮತ್ತು ಇವರ ಕವನ, ಲೇಖನಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಕಟವಾಗಿವೆ. ಶಿಕ್ಷಣ ಕ್ಷೇತ್ರದೊಂದಿಗೆ ಸಾಹಿತ್ಯ ಕೃಷಿ ಮಾಡಿದ ಇವರಿಗೆ ರಾಜ್ಯ ಮಟ್ಟದ `ಕನಕ ಪ್ರಶಸ್ತಿ, ಮತ್ತು ರೇವಣಸಿದ್ದೇಶ್ವರ ಮಠ ಧಾರವಾಡದಿಂದ ಜಿಲ್ಲಾ ಮಟ್ಟದ `ಕನಕ ಶ್ರೀ ಪ್ರಶಸ್ತಿ, ಬೀದರ್ ಜಿಲ್ಲಾಡಳಿತದಿಂದ `ಹೈದ್ರಾಬಾದ್ ಕರ್ನಾಟಕ ಯುವ ಚೇತನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿಗಳು ಪಡೆದಿದ್ದಾರೆ. ೨೦೦೯ರಲ್ಲಿ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಅದರ ಮೂಲಕ ದಾಸ ಸಾಹಿತ್ಯದ ಪ್ರಸಾರ ಮತ್ತು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ೨೦೧೩ರಲ್ಲಿ ಸಾಹಿತಿ ಪ್ರೋ. ವಸಂತ ಕುಷ್ಟಗಿ ಮತ್ತು ೨೦೧೪ರಲ್ಲಿ ಡಾ.ಕೃಷ್ಣ ಕೋಲ್ಹಾರ್ ಕುಲಕರ್ಣಿಯವರ ಸರ್ವಾಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ಪ್ರಥಮ ಮತ್ತು ದ್ವೀತಿಯ ದಾಸ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದ ಇವರು ಎರಡು ಅವಧಿಗೆ ಔರಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದಿಂದ ಮಕ್ಕಳ ಕಾವ್ಯ ಕಮ್ಮಟವು ನಡೆಸಿದ್ದಾರೆ.
ಡಾ.ಶಿವಶರಣಯ್ಯಾ ಎಂ.ಮಠಪತಿ
`ವಚನ ವಾರಿದಿ' ಎಂಬ ಹಾರಕೂಡ ಶ್ರೀಗಳ ಕುರಿತು ವಚನಗಳು ಬರೆದು ಪುಸ್ತಕ ಪ್ರಕಟಿಸಿದ ಸಾಹಿತಿ ಡಾ.ಶಿವಶರಣಯ್ಯಾ ಎಂ.ಮಠಪತಿಯವರು ಬೀದರ ಜಿಲ್ಲೆ ಔರಾದ ತಾಲೂಕಿನ ಮಡಪಳ್ಳಿ ಗ್ರಾಮದಲ್ಲಿ ಕೌಠ (ಬಿ) ಗ್ರಾಮದ ಮಲ್ಲಯ್ಯ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೧-೯-೧೯೮೩ರಲ್ಲಿ ಜನಿಸಿದ್ದಾರೆ. ಇವರು ಹುಟ್ಟಿದ್ದು ಮಡಪಳ್ಳಿ ಗ್ರಾಮವಾದರು ಬೆಳೆದದ್ದು, ಓದಿದ್ದು ಕೌಠಾ (ಬಿ) ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿ ಪಿ.ಯು. ಶಿಕ್ಷಣ ಬೀದರನಲ್ಲಿ, ಹಾಗೂ ಬಿ.ಎ.ಎಂ.ಎಸ್ .ಪದವಿಯು ಕಲಬುರಗಿಯ ಹಿಂಗೂಲಾAಬಿಕಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದಾರೆ. ಮತ್ತು ಬೀದರದ ಎನ್.ಕೆ.ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಮತ್ತು ಸಂಶೋಧನಾ ಕೇಂದ್ರದಲ್ಲಿ ಸ್ನಾತಕೋತ್ತರ ಪದವಿಯಲ್ಲಿ `ಶರೀರ ರಚನೆ' ಎಂಬ ವಿಷಯದಲ್ಲಿ ಅಧ್ಯಯನ ಮಾಡಿ ಎಂ.ಡಿ.ಯಾಗಿದ್ದಾರೆ.
ಕೆಲವರ್ಷ ಕಲಬುರ್ಗಿಯ ಹಿಂಗೂಲಾAಬಿಕ ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಬೀದರದ ಅಕ್ಕ ಮಹಾದೇವಿ ವೈದ್ಯಕೀಯ ಮಹಾವಿದ್ಯಾಲಯದ ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದು, ಸದ್ಯ ಶ್ರೀ ಸಿದ್ದರಾಮೇಶ್ವರ ಆಯುರ್ವೆದಿಕ್ ಮೆಡಿಕಲ್ ಕಾಲೇಜ್ ಹಾಗೂ ಸಂಶೋಧನಾ ಕೇಂದ್ರ ನೌಬಾದಿನ `ಶರೀರ ರಚನೆ' ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುವುದರೊಂದಿಗೆ ಕಪಲಾಪುರ, ನೌಬಾದಿನಲ್ಲಿ ಹಾರಕೂಡ ಶ್ರೀಗಳ ಹೆಸರಿನಲ್ಲಿ ಕ್ಲಿನಿಕಲ್ ತೆರೆದು ವೈದ್ಯಕೀಯ ವೃತ್ತಿಯೊಂದಿಗೆ ಹಾರಕೂಡ ಶ್ರೀಗಳ ಕುರಿತು ಆಧುನಿಕ ವಚನಗಳು ಬರೆದು ಶ್ರೀಗಳಿಗೆ ಆಪ್ತರಾಗಿರುವುದರಿಂದ ಅವರ ಬಗ್ಗೆ ಅಪಾರ ಭಕ್ತಿಯನ್ನು ಹೊಂದಿದ್ದಾರೆ. ಇವರ ಭಕ್ತಿಯಿಂದ ಮೂಡಿ ಬಂದ `ವಚನ ವಾರಿದಿ' ಸಂಕಲನಕ್ಕೆ ೨೦೧೮ರಲ್ಲಿ `ಶ್ರೀ ಚೆನ್ನರತ್ನ' ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದ್ದುಕೊಂಡು ಅಧ್ಯಾತ್ಮೀಕ ವಚನ ಸಾಹಿತ್ಯ ರಚಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಷ್ಟೇಯಲ್ಲದೆ ಇವರು ಬರೆದ 'ಭಾರತ ದರ್ಶನ' ಎಂಬ ಕವನ ಸಂಕಲನ ಮತ್ತು `ಚೆನ್ನವೀರ' ಎಂಬ ತ್ರಿಪದಿ ಕೃತಿಗಳು ಮುದ್ರಣದ ಹಂತದಲ್ಲಿವೆ.
ಅನೀಲಕುಮಾರ ಪಾಟೀಲ್
ಸಾಹಿತಿ ಅನೀಲಕುಮಾರ ಪಾಟೀಲ್ ರವರು ಬೀದರ ಜಿಲ್ಲೆ ಔರಾದ ತಾಲೂಕಿನ ದುಪತಮಹಾಗಾಂವ ಗ್ರಾಮದ ಕಾಕಿನಾಥ ಮತ್ತು ಲಲಿತಾಬಾಯಿ ದಂಪತಿಗಳಿಗೆ ದಿನಾಂಕ ೫-೪-೧೯೭೯ರಲ್ಲಿ ಜನಿಸಿದ್ದಾರೆ. ಪದವೀಧರರಾದ ಇವರು ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಹಾಗೂ ೨೦೦೨ರಲ್ಲಿ `ಶಾಂತಿ ಭೋದಿತ'ಎಂಬ ಜೀವನ ಚರಿತ್ರೆ ಬರೆದು ಪ್ರಕಟಿಸಿದ್ದಾರೆ.
ಶಾಂತಮ್ಮಾ ಬಲ್ಲೂರ್
ಕವಯತ್ರಿ ಶಾಂತಮ್ಮಾ ಬಲ್ಲೂರ್. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾಗೂರ (ಬಿ) ಗ್ರಾಮದ ಸಂಗ್ರಾಮ್ ಮತ್ತು ತುಳಸಮ್ಮ ದಂಪತಿಗಳಿಗೆ ದಿನಾಂಕ ೫-೪-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಸ್ನಾತಕೋತ್ತರ ಪದವಿ ಹಾಗೂ `ಕನ್ನಡ ರತ್ನ’ ತತ್ಸಮಾನ ಪದವಿ ಪಡೆದ ಇವರು ಬೀದರದ ಸುದರ್ಶನಿ ಬಲ್ಲೂರ್ ಶಿಕ್ಷಣ ಸಂಸ್ಥೆಯ ಆರ್.ಆರ್.ಬಲ್ಲೂರ್ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ೨೦೦೮ರಲ್ಲಿ `ನೆರಳು’ (ಕವನಸಂಕಲನ) ೨೦೧೫ರಲ್ಲಿ `ವಚನ ಗೊಂಚಲು’ (ಆಧುನಿಕ ವಚನ ಸಂಕಲನ) ಪ್ರಕಟಿಸಿ ಕವಯತ್ರಿಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರು ತಮ್ಮ ತಾಯಿ ಹಾಡಿದ ೩೦೦ಕಿಂತಲೂ ಹೆಚ್ಚು ಜಾನಪದ ಹಾಡುಗಳು ಸಂಗ್ರಹಿಸಿದ್ದು, ಅವು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. ಮತ್ತು ಹಲವಾರು ಕವನ, ಲೇಖನಗಳು ಬರೆದಿದ್ದು ಅವು ಕೆಲ ಪ್ರಮುಖ ಪತ್ರಿಕೆಗಳಲ್ಲಿಯು ಪ್ರಕಟವಾಗಿವೆ. ಬೀದರ ಜಿಲ್ಲಾ ಕರ್ನಾಟಕ ಲೇಖಕಿಯರ ಸಂಘ ಮತ್ತು ಜಾನಪದ ಸಂಘದ ಕಾರ್ಯದರ್ಶಿಯಾಗಿ, ರಾಷ್ಟ್ರೀಯ ಸಂತೋಷ ಶಿಕ್ಷಣ ಸಂಸ್ಥೆಯ ಪದಾಧಿಕಾರಿಯಾಗಿ, ಸೇವೆ ಸಲ್ಲಿಸಿದ ಇವರು ಸದ್ಯ ಚರ್ಚಿನ ಮಹಿಳಾ ವಿಭಾಗದ ಏರಿಯಾ ಕಾರ್ಯದರ್ಶಿಯಾಗಿ ಕ್ರೈಸ್ತ ಧಾರ್ಮಿಕ ಚಟುವಟಿಕೆಯೊಂದಿಗೆ ಕನ್ನಡ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪಂಚಶೀಲ ಮಾಂಜ್ರೇಕರ್
ಕವಯತ್ರಿ ಪಂಚಶೀಲ ಮಾಂಜ್ರೇಕರ ರವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾಗೂರು (ಬಿ) ಗ್ರಾಮದ ನರಸಿಂಗ ಮತ್ತು ರುಕ್ಮಿಣಿಬಾಯಿ ದಂಪತಿಗಳಿಗೆ ದಿನಾಂಕ ೨೧-೨-೧೯೭೬ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರೆಯಾದ ಇವರು ಮದುವೆಯ ನಂತರ ಕೆಲಕಾಲ ಹೈದರಾಬಾದನಲ್ಲಿ ವಾಸವಾಗಿ, ೨೦೧೨ರಲ್ಲಿ ಆಕಸ್ಮಿಕ ನಿಧನ ಹೊಂದಿದ್ದಾರೆ. ಇವರ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಅನೇಕ ಕವನ, ಲೇಖನ, ಬರಹಗಳು ಬರೆದಿದ್ದಾರೆ. ಸ್ತ್ರೀ ಸಂವೇದನೆ, ಸಾಕ್ಷರತೆ, ನಾಡು-ನುಡಿ, ಪ್ರಕೃತಿ ವಿಕೋಪ, ಕಿಲ್ಲಾರಿ ಭೂಕಂದ ಸುನಾಮಿ ಮೊದಲಾದವುಗಳ ಕುರಿತು ಕವನ ರಚಿಸಿದ್ದಾರೆ. ಮತ್ತು `ಭಾವನೆಗಳ ಬಳ್ಳಿ' ಎಂಬ ಕವನಸಂಕಲನ ಪ್ರಕಟಿಸಿದ್ದಾರೆ. ಹಾಗೂ ಹಲವಾರು ಕವನ ಲೇಖನ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ.
ಪ್ರಭು ಮಾಲೆ
ಎಲೆ ಮರೆಯ ಕಾಯಿಯಂತೆ ಉಳಿದು ತಮ್ಮಷ್ಟಕ್ಕೆ ತಾವು ಸಾಹಿತ್ಯ ರಚಿಸುತ್ತಿರುವ ಲೇಖಕರೆಂದರೆ ಪ್ರಭು ಮಾಲೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ತುಳಜಾಪೂರ ಗ್ರಾಮದ ಗಣಪತಿ ಮಾಲೆ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೨ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೯೬ರಲ್ಲಿ ಪೋಲಿಸ್ ಪೇದೆ ಹುದ್ದೆಗೆ ಸೇರಿ ಸದ್ಯ ಬೀದರದ ಜನವಾಡ ಪೋಲಿಸ್ ಠಾಣೆಯ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೧೪ರಲ್ಲಿ `ಮಹಾತ್ಮ ಜ್ಯೋತಿಬಾ ಪುಲೆ' (ನಾಟಕ) ೨೦೧೬ರಲ್ಲಿ `ಮಕ್ಕಳಿಗಾಗಿ ಭೀಮವಾಣಿ' (ಸಂಪಾದನೆ) ಎಂಬ ಕೃತಿಗಳು ಹೊರತಂದಿದ್ದಾರೆ. ಮತ್ತು ಮೈಸೂರು ಪೋಲಿಸ್ ಎದೆಯಂತರಾಳದಿAದ ರಾಜ್ಯ ಮಟ್ಟದ ಕವಿಗೊಷ್ಠಿ, ೨೦೧೭ರಲ್ಲಿ ನಡೆದ ಬೀದರನಲ್ಲಿ ನಡೆದ `ಜನಪರ ಉತ್ಸವ’ ಕವಿಗೊಷ್ಠಿ, ಬೀದರ ಜಿಲ್ಲಾ ಬಹುಭಾಷಾ ಕವಿಗೊಷ್ಠಿ , ಕಲಬುರಗಿಯಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿ ಕವಿಗೊಷ್ಠಿ ಸೇರಿದಂತೆ ಮೊದಲಾದವುಗಳಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಬೀದರ ಜನಪರ ಉತ್ಸವ ಕಾರ್ಯಕ್ರಮದಲ್ಲಿ ೩ ಸಾವಿರ ಗೌರವಧನವು ಪಡೆದಿದ್ದಾರೆ.
ಇವರ ಸಾಹಿತ್ಯ ಸಾಧನೆಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ನಾಟಕ ರತ್ನ' ಪ್ರಶಸ್ತಿ, ನೀಡಿ ಗೌರವಿಸಿದ್ದರೆ, ಬಸವಕಲ್ಯಾಣ ಬೇಲೂರಿನ ಉರಿಲಿಂಗ ಪೆದ್ದಿ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಿ ಸನ್ಮಾಸಿದ್ದಾರೆ. ಇವರು ತಮ್ಮ ತಾಯಿ ಹಾಡುತ್ತಿದ್ದ ಜಾನಪದ ಗೀತೆಗಳಿಗೆ ಮಾರುಹೋಗಿ ಕೆಲ ಜಾನಪದ ಕೃತಿಗಳು ಸಂಪಾದಿಸುವುದರೊAದಿಗೆ ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದಾರೆ.
ಮಲ್ಲೇಶ್ವರಿ ಉದಯಗಿರಿ
ಭಾವ ತುಂಬಿ ಕಾವ್ಯ ರಚಿಸುವ ಕವಯತ್ರಿ ಮಲ್ಲೇಶ್ವರಿ ಉದಯಗಿರಿ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಮುಧೋಳ (ಬಿ) ಗ್ರಾಮದ ಧನರಾಜ ಮತ್ತು ಕಸ್ತೂರಿ ದಂಪತಿಗಳಿಗೆ ದಿನಾಂಕ ೧-೬-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರೆಯಾಗಿದ್ದು ಸದ್ಯ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಇವರು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಭಾವ ಕಾರಂಜಿ', `ಭಾವ ಸ್ಪರ್ಶ', `ಭಾವಂಕರ್ಷ' ಇವು ಅವರ ಪ್ರಕಟಿತ ಕವನ ಸಂಕಲನಗಳಾಗಿವೆ. ಮತ್ತು `ಭಾವದುನ್ಮಿಲನ', `ಗಜಲ್ಗಳು', `ಆಧುನಿಕ ವಚನಗಳು', `ಹನಿಗವನಗಳು', `ಹಿಂದಿ ಕವಿತೆಗಳು', `ಮಕ್ಕಳ ಹಾಡು' ಇವು ಇವರ ಅಪ್ರಕಟಿತ ಕೃತಿಗಳಾಗಿವೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ, ಪ್ರಕಟವಾಗಿವೆ. ಇವರಿಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕನ್ನಡ ರತ್ನ ಪ್ರಶಸ್ತಿ, ಹಾಗೂ ಹುಲಸೂರು ತಾಲೂಕಿನ ಬೇಲೂರಿನ `ಉರಿಲಿಂಗ ಪೆದ್ದಿ ಪ್ರಶಸ್ತಿ' ಗಳು ಲಭಿಸಿವೆ. ಇವರು ಬೀದರ ಜಿಲ್ಲಾ ಧರಿನಾಡು ಕನ್ನಡ ಸಾಹಿತ್ಯ ಸಂಘದ ಪದಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ
ಡಾ. ಬಸವರಾಜ ಬಲ್ಲೂರ
ಸಾಹಿತಿ ಡಾ.ಬಸವರಾಜ ಬಲ್ಲೂರ್. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಬಲ್ಲೂರ ಗ್ರಾಮದ ಮಲ್ಲಶೆಟ್ಟಿ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧೫-೧೧-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಫೀಲ್. ಪಿ.ಎಚ್.ಡಿ ಮತ್ತು ವಚನಾ ಡಿಪ್ಲೊಮಾ ಪದವಿ ಪಡೆದು ಕೆಲ ವರ್ಷ ಪದವಿ ಮಹಾವಿದ್ಯಾಲಯದಲ್ಲಿ ಅರೆಕಾಲಿಕ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಸದ್ಯ ೨೦೦೫ರಿಂದ ಬೀದರದ ಕರ್ನಾಟಕ ಪದವಿ ಮಹಾವಿದ್ಯಾಲಯದಲ್ಲಿ ಖಾಯಂ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, `ಶ್ರೀ ಗುರುಬಸವ ಪಟ್ಟದ್ದೆವರು' ಎಂಬುದು ಭಾಲ್ಕಿ ಶ್ರೀಗಳ ಜೀವನ ಚರಿತ್ರೆಯಾದರೆ, `ಅಕ್ಷರ ಕಲ್ಯಾಣ' ಇದು ಭಾಲ್ಕಿ ಮಠದ ಪರಿಚಯಾತ್ಮಕ ಕೃತಿಯಾಗಿದೆ. `ಅನುಭವ ಮಂಟಪದ ಚಾರಿತ್ರಿಕ ನೆಲೆಗಳು' ಎನ್ನುವುದು ಅವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ವೀರೆಂದ್ರ ಸಿಂಪಿ ಸಮಗ್ರ ಸಾಹಿತ್ಯ ಸಂಪುಟ', `ವೀರೆಂದ್ರ ಸಿಂಪಿಯವರ ಸಮಗ್ರ ಲಲಿತ ಪ್ರಬಂಧಗಳು', `ದಾಂಪತ್ಯ ಗೀತೆ', `ಸಮರಸ ದಾಂಪತ್ಯ', `ಪುಲಿಚೆರು ಸಂಸ್ಕೃತಿ', `ಸಮಷ್ಟಿ', `ಯುಗದ ಉಲ್ಲಾಸ', `ಭಾಹತ್ತರ' ಮೊದಲಾದ ಹದಿನೇಳು ಕೃತಿಗಳು ಸಂಪಾದಿಸಿದ್ದಾರೆ. ಮತ್ತು ೫೦ಕಿಂತ ಹೆಚ್ಚು ಲೇಖನಗಳು ಬರೆದಿದ್ದು ಅವು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ೪ ಪ್ರಕಟಣೆಯ ಸಂಚಾಲಕರಾಗಿ, ಬಸವಕಲ್ಯಾಣ ಕಸಾಪದ ಕಾರ್ಯದರ್ಶಿಯಾಗಿ, ಭಾಲ್ಕಿ ಶಾಂತಿ ಕಿರಣ ಪತ್ರಿಕೆಯ ಸಂಪಾದಕರಾಗಿ, ಎರಡು ಅವಧಿಗೆ ಬೀದರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಇವರಿಗೆ ಡಾ.ಜಯದೇವಿ ತಾಯಿ ಲಿಗಾಡೆ ರಾಷ್ಟ್ರೀಯ ಪ್ರಶಸ್ತಿ, ಭಾಲ್ಕಿ ಮಠದಿಂದ `ಉತ್ತಮ ಓದುಗ ಪ್ರಶಸ್ತಿ’ಗಳು ಲಭಿಸಿವೆ. ಮತ್ತು ಅಖಿಲ ಭಾರತ ಶರಣಸಾಹಿತ್ಯ ಪರಿಷತ್ತಿನಿಂದ ಔರಾದ ತಾಲೂಕಿನ ಖೇಡ ಸಂಗಮದಲ್ಲಿ ನಡೆದ ಪ್ರಥಮ ಶರಣಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.
ಸಂಜೀವಕುಮಾರ ಜುಮ್ಮಾ.
ಸಾಹಿತಿ ಸಂಜೀವಕುಮಾರ ಜುಮ್ಮಾ ರವರು ಔರಾಧ ತಾಲೂಕಿನ ಸಂತಪೂರ ಗ್ರಾಮದ ಮಡಿವಾಳಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧-೭-೧೦೭೧ ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್, ವಚನ ಸಾಹಿತ್ಯದಲ್ಲಿ ಡಿಪ್ಲೋಮಾ ಪದವಿಧರರಾದ ಇವರು ಠಾಣಾ ಕುಸನೂರಿನ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ `ಡಾ.ಚನ್ನಬಸವ ಪಟ್ಟದೇವರ ಜೀವನ ಮತ್ತು ಸಾಧನೆ’ ಎಂಬ ಕೃತಿ ರಚಿಸಿ ಪ್ರಕಟಿಸಿದರೆ, `ಗುರುಕುಲ ದರ್ಶನ, ಚನ್ನಬಸವ ಕಲ್ಯಾಣ, ಕನ್ನಡ ಜಂಗಮ, ಅನುಭವ ಮಂಟಪ ಸ್ಮರಣ ಸಂಚಿಕೆ, ಬಸವಣ್ಣನವರ ಆಯ್ದ ವಚನಗಳು’ ಎಂಬ ಕೃತಿಗಳು ಸಂಪಾದಿಸಿ ಪ್ರಕಟಿಸಿದ್ದಾರೆ. ಇವರು ಎರಡು ಅವಧಿ ಔರಾದ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾ ಅಧ್ಯಕ್ಷರಾಗಿ, ಮತ್ತು ಕರ್ನಾಟಕ ಬಯಲಾಟ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.
ಚನ್ನಮ್ಮಾ ವಲ್ಲೆಪೂರೆ
`ಚಿನ್ನಾ' ಎಂಬ ಕಾವ್ಯನಾಮ ಮತ್ತು `ಚನ್ನಬಸವ ಲಿಂಗೇಶ್ವರ’ ಎಂಬ ವಚನಾಂಕಿತದಲ್ಲಿ ಬರೆಯುತ್ತಿರುವ ಲೇಖಕಿಯೆಂದರೆ ಚನ್ನಮ್ಮಾ ವಲ್ಲೆಪೂರೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಕೋಟಗ್ಯಾಳ ಗ್ರಾಮದ ಕಾಶೆಪ್ಪ ಕಾಡೊದೆ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೦-೧೦-೧೯೭೦ರಲ್ಲಿ ಜನಿಸಿದ್ದಾರೆ.. ಬಿ.ಎ.ಬಿ.ಎಡ್.ಪದವಿಧರರಾಗಿರುವ ಇವರು ಸಾಹಿತಿ ಹಂಶಕವಿಯವರ ಧರ್ಮಪತ್ನಿಯಾಗಿದ್ದು, ಕಂಪ್ಯೂಟರ್ ಆಪರೇಟರ್ ಆಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ ೨೦೦೫ರಲ್ಲಿ `ಬೆಳಕು' ೨೦೧೬ರಲ್ಲಿ `ಬದುಕು ಬೆಳಕು’ (ಕವನ ಸಂಕಲನಗಳು) ೨೦೦೮ರಲ್ಲಿ `ಸಿದ್ದೇಶ್ವರ ಉವಾಚ' ಎಂಬ ಸಿದ್ದೇಶ್ವರ ಶ್ರೀಗಳ ಸಂದೇಶ ಕೃತಿ, ೨೦೧೫ರಲ್ಲಿ `ಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯರು' (ಚರಿತ್ರೆ) ೨೦೧೬ರಲ್ಲಿ `ಚಂದ್ರಬಿAಬ' ಎಂಬ ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ರ ಜೀವನ ಚರಿತ್ರೆಯನ್ನು ಬರೆದು, `ಸಮಕಾಲೀನ ಹಿರಿಯ ಸಾಹಿತಿಗಳು' ಎಂಬ ಸಂಪಾದಿತ ಕೃತಿಯೊಂದು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ `ಆಧುನಿಕ ವಚನಗಳು' ಕೂಡ ಬರೆದಿದ್ದು ಅವು ಕೆಲ ಸಂಪುಟಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೦೮ರಲ್ಲಿ ಹುಮನಾಬಾದಿನ ಧರಿನಾಡು ಕನ್ನಡ ಸಾಹಿತ್ಯ ಸಂಘದಿAದ ಸುವರ್ಣ ಕನ್ನಡಿಗ, ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಬೆಳಕು ಶ್ರೀ ' ೨೦೧೧ರಲ್ಲಿ ಭಾಲ್ಕಿ ಶ್ರೀಗಳಿಂದ `ಸಾಹಿತ್ಯ ಜ್ಯೋತಿ' ೨೦೧೭ರಲ್ಲಿ ಪಂಜಾಬಿನ ಚಂಡಿಗಡದಲ್ಲಿ ನಡೆದ ಅಖಿಲ ಭಾರತ ಕವಯತ್ರಿ ಸಮ್ಮೇಳನದಲ್ಲಿ `ಮೈತ್ರೇಯಿ ಪ್ರಶಸ್ತಿ, ೨೦೧೯ರಲ್ಲಿ ನಡೆದ ಅಖಿಲ ಭಾರತೀಯ ಕವಯತ್ರಿ ಸಮ್ಮೇಳನದಲ್ಲಿ `ಲಾಲದೇನ್ ' ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಬೀದರ ಮಹಿಳಾ ಲೇಖಕಿಯರ ಸಂಘದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮರಣದ ನಂತರ ತಮ್ಮ ದೇಹದಾನ ಮಾಡಿರುವುದು ನೋಡಿದರೆ, `ಪರೋಪಕಾರಂ ಇದಂ ಶರೀರಂ’ ಎನ್ನುವಂತ ಇವರ ತ್ಯಾಗ ಮೆಚ್ಚುವಂತಹದ್ದು.
ಸುನೀತಾ ಬಿರಾದಾರ
ಕವಯತ್ರಿ ಸುನೀತಾ ಬಿರಾದಾರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಚಾಂದೊರಿ ಗ್ರಾಮದ ಉದಯಭಾನು ಮತ್ತು ಸುಶಿಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಟಿ.ಸಿ.ಎಚ್ ವರೆಗೆ ಅಧ್ಯಯನ ಮಾಡಿದ ಇವರು ೧೯೯೩ರಲ್ಲಿ ಮಹಿಳಾ ಪೋಲಿಸ್ ಪೇದೆಯಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ ನಂತರ ೧೯೯೭ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನೇಮಕಗೊಂಡು ಔರಾದ ತಾಲೂಕಿನ ಠಾಣಾ ಕುಸನೂರಿನ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಸಿದ ಇವರು ಸದ್ಯ ಬೀದರ ತಾಲೂಕಿನ ಆನಂದನಗರ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ `ಒಲಿದ ಜೀವ' (ಕಾದಂಬರಿ) `ಹೂದೋಟ' (ಮಕ್ಕಳ ಕವನ ಸಂಕಲನ) ಪ್ರಕಟಿಸಿದ್ದಾರೆ. ಇವರ ಕತೆ ಕವನ ಲೇಖನಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ೨೦೦೫ರಲ್ಲಿ ಠಾಣಾ ಕುಸನೂರು ಗ್ರಾಮಸ್ಥರಿಂದ ನಿಂದ `ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ' ಔರಾದ ತಾಲೂಕಿನ `ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೨ರಲ್ಲಿ ಉತ್ತಮ ಮಹಿಳಾ ಬರಹಗಾರ್ತಿಯರಿಗೆ ನೀಡುವ `ಸುರಬಿ’ü ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ರಮೇಶ ಬಿರಾದಾರ
ಅನೇಕ ಹೋರಾಟಗಳ ಮೂಲಕ ಬರೆವಣಿಗೆಯಲ್ಲಿ ತೊಡಗಿಸಿಕೊಂಡ ಸಾಹಿತಿಯೆಂದರೆ ರಮೇಶ ಬಿರಾದಾರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಗಡಿಕುಶನೂರು ಗ್ರಾಮದ ವೀರಬಸಪ್ಪ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೮೪ರಿಂದ ಪೋಟೊಗ್ರಾಫರ್ ಆಗಿ, ಪತ್ರಕರ್ತ, ಸಾಹಿತಿಯಾಗಿ ಗುರ್ತಿಸಿಕೊಂಡು ೨೦೦೯ರಲ್ಲಿ `ಜೀವನದಿ ಬತ್ತಿದಾಗ' (ಕವನಸಂಕಲನ) ೨೦೧೬ರಲ್ಲಿ `ನೀಲಮ್ಮನ ಬಳಗದ ವಚನಗಳು' (ಸಂಪಾದನೆ) ಎಂಬ ಕೃತಿಗಳು ಹೊರತಂದಿದ್ದಾರೆ. ಮತ್ತು `ಪಾಪನಾಶ ಲಿಂಗದೇವನ ವಚನಗಳು', `ಗವೀರನ ತತ್ವಗಳು', 'ಮುಂಜಾವಿಗೆ ಮಂಜು ಕವಿದಾಗ', `ಬಾಬಾಸಾಹೆಬ ಅಂಬೇಡ್ಕರ್, ಹಿಂದು ಕೊಡ್ ಬಿಲ್ (ಹಿಂದಿ ಅನುವಾದ) `ಬೀದರ ತಾಲೂಕು ದರ್ಶನ' ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ದೂರದರ್ಶನ, ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಹಾಗೂ `ಬಿರಾದಾರ' ಎಂಬ ವಾರಪತ್ರಿಕೆಯು ಸ್ಥಾಪಿಸಿದ ಇವರು ಅದರ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಇತ್ತಿಚಿಗೆ ಬಿ.ಜೆ.ವಿಷ್ಣುಕಾಂತ ನಿರ್ದೇಶನದ ಚಲನಚಿತ್ರವೊಂದರಲ್ಲಿ ನಟಿಸಿದ್ದಾರೆ. ಬೀದರ ಜಿಲ್ಲಾ ವಿಕಾಸ ವೇದಿಕೆಯ ವತಿಯಿಂದ ಅನೇಕ ಹೋರಾಟಗಳನ್ನು ಮಾಡಿ ಅಕ್ರಮವಾದ ಭೂ ಕಬಳಿಕೆಯನ್ನು ತಡೆದಿದ್ದಾರೆ. ಇವರಿಗೆ ೧೯೯೩ರಲ್ಲಿ `ಜಿಲ್ಲಾ ಸಾಮಾಜಿಕ ಸೇವಾ ಪ್ರಶಸ್ತಿ, ಮತ್ತು ೧೯೯೭ರಲ್ಲಿ `ಕನ್ನಡ ಯುವ ಹೋರಾಟಗಾರ ಪ್ರಶಸ್ತಿ, ಭಾಲ್ಕಿ ಮಠದಿಂದ ೧೯೯೭ರಲ್ಲಿ 'ಕನ್ನಡ ಸೇವಕ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ೨೦೧೫ರಲ್ಲಿ ಬೀದರದ ೩ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರು ರಾಜ್ಯ ಮಟ್ಟದ ಅನೇಕ ಕವಿಗೊಷ್ಠಿ, ಕಮ್ಮಟ, ಸಮ್ಮೇಳನಗಳಲ್ಲಿಯೂ ಭಾಗವಹಿಸಿದ್ದಾರೆ.
ವಿದ್ಯಾವತಿ ಬಿ.ಬಲ್ಲೂರ್
ಕವಯತ್ರಿಯಾದ ವಿದ್ಯಾವತಿ ಬಿ.ಬಲ್ಲೂರ್. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಠಾಣಾಕುಸನೂರು ಗ್ರಾಮದ ಚಂದ್ರಪ್ಪಾ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜ£ಸಿದ್ದಾರೆ. ಎಂ.ಎ.ಎA.ಇಡಿ.ಸ್ನಾತಕೋತ್ತರ ಪದವಿಧರರಾದ ಇವರು ಸಾಹಿತಿ ಡಾ.ಬಸವರಾಜ ಬಲ್ಲೂರ್ ಅವರ ಧರ್ಮ ಪತ್ನಿಯಾಗಿದ್ದು, ೧೯೯೬ರಿಂದ ಉಪನ್ಯಾಸಕ ವೃತ್ತಿಯಲ್ಲಿ ತೊಡಗಿಕೊಂಡು ಕಲಬುರ್ಗಿಯ ಮೊಹಮ್ಮದಿ ಬಿ.ಇಡಿ ಮತ್ತು ಆಶಾಜ್ಯೋತಿ ಟಿ.ಸಿ.ಹೆಚ್ ಹಾಗೂ ಬಸವಕಲ್ಯಾಣದ ಖೂಬಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಇವರು ಸದ್ಯ ಬೀದರದ ಎಂ.ಎಸ್.ಮುದ್ದಣ್ಣ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಬಾಲ್ಯದಿಂದಲೂ ಓದು ಬರಹಗಳ ಕಡೆಗೆ ಹೆಚ್ಚು ಆಸಕ್ತಿ ತೋರಿ ಅಧ್ಯಾತ್ಮಿಕ ತಳಹದಿಯ ಶರಣರ ಕಾಯಕ ಜೀವನ, ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸುವುದರೊಂದಿಗೆ, ಕವನ ಲೇಖನ, ಚಿಂತನ, ವಿಮರ್ಶೆ ಮೊದಲಾದವು ಬರೆಯುತ್ತಿದ್ದಾರೆ. ಮತ್ತು ‘ಅಕ್ಷರ ಕಲ್ಯಾಣ’ ಎಂಬ ಪುಸ್ತಕ ಪ್ರಕಟಿಸಿ, ನಾಗಶೆಟ್ಟಿ ಪಾಟೀಲರ ‘ಪವಾಡಗಳು ನಿಜವೆ ?’ ಎಂಬ ಕೃತಿಗೆ ವಿಮರ್ಶೆಯು ಬರೆದಿದ್ದಾರೆ. ಇವರಿಗೆ ೨೦೧೮ರಲ್ಲಿ ಬೀದರನಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಾಹಿತ್ಯ ಸಮ್ಮೇಳನದಲ್ಲಿ ‘ಅಮೃತ ಪ್ರಿತಮ್’ ಪ್ರಶಸ್ತಿ , ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ‘ಕಾವ್ಯ ರತ್ನಾಂಜಲಿ’ ಪ್ರಶಸ್ತಿಗಳು ಲಭೀಸಿವೆ. ಸದ್ಯ ಇವರು ತಮ್ಮ ವೃತ್ತಿಯೊಂದಿಗೆ ಬೀದರ ಜಿಲ್ಲಾ ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಮನ್ಮಥ ಎಚ್.ಡೊಲೆ.
ಸಾಹಿತಿ ಡಾ.ಮನ್ಮಥ ಎಚ್.ಡೊಲೆಯವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾರಾಯಣಪುರ ಗ್ರಾಮದ ಹುಲ್ಲಪ್ಪಾ ಡೊಳೆ ಮತ್ತು ಜೀಜಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ ಪದವೀಧರರಾದ ಇವರು ಎಂ.ಎ, ಪಿ.ಎಚ್.ಡಿ ಪದವಿ ಪದವಿಧರರಾಗಿದ್ದು, `ಬಸವೇಶ್ವರ ಅಂಬೇಡ್ಕರ್ ಒಂದು ತೌಲನಿಕ ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಬಾಲ್ಯದಲ್ಲಿಯೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು `ಮಿಡಿ ಮಾವು' ಎಂಬ ಹನಿಗವನ ಸಂಕಲನ ಪ್ರಕಟಿಸಿ ನಂತರ `ಬಸವೇಶ್ವರ, ಅಂಬೇಡ್ಕರ್ ಚಿಂತನೆಯ ನೆಲೆ ಮತ್ತು ನಿಲುವು' ಎಂಬ ಚಿಂತನಾತ್ಮಕ ಸಂಶೋಧನಾ ಕೃತಿಯೊಂದು ಹೊರ ತಂದಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಂಡಾಯ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಇವರು ಬೀದರ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೯ರಲ್ಲಿ ಅರವಿಂದ ಮಾಲಗತ್ತಿಯವರ ಸರ್ವಾಧ್ಯಕ್ಷತೆಯಲ್ಲಿ ಬೀದರನಲ್ಲಿ ನಡೆದ ೨ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆಯಲು ಶ್ರಮಿಸಿದ್ದಾರೆ. ಮತ್ತು ಇವರ ಸಾಹಿತ್ಯ ಸಾಧನೆಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಸದ್ಯ ಇವರು ಔರಾದನಲ್ಲಿ ವಾಸವಾಗಿದ್ದು ಅಲ್ಲಿಯ ನಳಂದಾ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶಿವರಾಜ ಪಾಟೀಲ್
ಕವಿ ಸಾಹಿತಿಯಾದ ಶಿವರಾಜ ಪಾಟೀಲ್ ಇವರು ಔರಾದ ತಾಲೂಕಿನ ಭೀಮರಾವ ಮತ್ತು ರತ್ನಮ್ಮಾ ದಂಪತಿಗಳಿಗೆ ದಿನಾಂಕ ೨೫-೮-೧೯೬೮ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪದವೀಧರರಾದ ಇವರು ಔಷಧ ಅಂಗಡಿಯ ವ್ಯಾಪಾರಸ್ಥರಾಗಿ ಸೇವೆ ಸಲ್ಲಿಸುವುದರೊಂದಿಗೆ ೨೦೦೧ರಲ್ಲಿ `ಮನಸ್ಸು' ಎಂಬ ಕವನಸಂಕಲನ ಪ್ರಕಟಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)