ಪುಟಗಳು

ಶನಿವಾರ, ಜನವರಿ 11, 2025

ಎಂ.ಬಿ. ಅಮರವಾಡಿ

ಉದಯೋನ್ಮುಖ ಬರಹಗಾರ ಬಿ.ಎಂ.ಅಮರವಾಡಿಯವರು ಬೀದರ ಜಿಲ್ಲೆ ಔರಾದ ತಾಲೂಕಿನ ಭೀಮಗೊಂಡ್ ಮತ್ತು ಅಂಜನಾಬಾಯಿ ದಂಪತಿಗಳಿಗೆ ದಿನಾಂಕ ೮-೬-೧೯೮೭ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ.ಬಿ.ಇಡಿ ಪದವಿಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಪ್ರಸ್ತುತ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. `ಸಂಪ್ರತಿ' (ಕವನ ಸಂಕಲನ) ಪ್ರಕಟಿಸಿದ ಇವರು ಚುಟುಕು, ಲೇಖನಗಳ ಕೃತಿಗಳು ಹೊರ ತರುತ್ತಿದ್ದಾರೆ. ಮತ್ತು ಇವರ ಕವನ, ಲೇಖನಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಕಟವಾಗಿವೆ. ಶಿಕ್ಷಣ ಕ್ಷೇತ್ರದೊಂದಿಗೆ ಸಾಹಿತ್ಯ ಕೃಷಿ ಮಾಡಿದ ಇವರಿಗೆ ರಾಜ್ಯ ಮಟ್ಟದ `ಕನಕ ಪ್ರಶಸ್ತಿ, ಮತ್ತು ರೇವಣಸಿದ್ದೇಶ್ವರ ಮಠ ಧಾರವಾಡದಿಂದ ಜಿಲ್ಲಾ ಮಟ್ಟದ `ಕನಕ ಶ್ರೀ ಪ್ರಶಸ್ತಿ, ಬೀದರ್ ಜಿಲ್ಲಾಡಳಿತದಿಂದ `ಹೈದ್ರಾಬಾದ್ ಕರ್ನಾಟಕ ಯುವ ಚೇತನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿಗಳು ಪಡೆದಿದ್ದಾರೆ. ೨೦೦೯ರಲ್ಲಿ ರಾಜ್ಯ ದಾಸ ಸಾಹಿತ್ಯ ಪರಿಷತ್ತು ಸ್ಥಾಪಿಸಿ ಅದರ ಮೂಲಕ ದಾಸ ಸಾಹಿತ್ಯದ ಪ್ರಸಾರ ಮತ್ತು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ೨೦೧೩ರಲ್ಲಿ ಸಾಹಿತಿ ಪ್ರೋ. ವಸಂತ ಕುಷ್ಟಗಿ ಮತ್ತು ೨೦೧೪ರಲ್ಲಿ ಡಾ.ಕೃಷ್ಣ ಕೋಲ್ಹಾರ್ ಕುಲಕರ್ಣಿಯವರ ಸರ್ವಾಧ್ಯಕ್ಷತೆಯಲ್ಲಿ ಅಖಿಲ ಕರ್ನಾಟಕ ಪ್ರಥಮ ಮತ್ತು ದ್ವೀತಿಯ ದಾಸ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿದ್ದ ಇವರು ಎರಡು ಅವಧಿಗೆ ಔರಾದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಕಾರದಿಂದ ಮಕ್ಕಳ ಕಾವ್ಯ ಕಮ್ಮಟವು ನಡೆಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ