ಪುಟಗಳು

ಶನಿವಾರ, ಜನವರಿ 11, 2025

ನಾಗೇಶ್ ಸ್ವಾಮಿ

`ನಾಸಾಕವಿ' ಎಂಬ ಕಾವ್ಯನಾಮ ಹೊಂದಿರುವ ನಾಗೇಶ ಸ್ವಾಮಿಯವರು. ಬೀದರ ಜಿಲ್ಲೆ ಔರಾದ ತಾಲೂಕಿನ ಮಸ್ಕಲ್ ಗ್ರಾಮದ ಮಹಾದಯ್ಯ ಸ್ವಾಮಿ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧೫-೭-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ .ಬಿ.ಎಡ್. ಪದವಿಧರರಾದ ಇವರು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಆದಿಬಸವ' ಎಂಬ ಅಂಕಿತನಾಮದಿAದ ಆಧುನಿಕ ವಚನಗಳು ಬರೆಯುತ್ತಿರುವ ಇವರು `ಸಂಜೀವಿನಿ' ಮತ್ತು `ಮನ ಮೆಚ್ಚಿದ ಹುಡುಗಿ' ಎಂಬ ಕವನ ಸಂಕಲನಗಳು, ಮತ್ತು ೨೦೨೦ರಲ್ಲಿ `ಕೃತಿ ಬಿಂಬ’ ಎಂಬ ವಿಮರ್ಶಾ ಕೃತಿಯು ಪ್ರಕಟಿಸಿದ್ದಾರೆ. `ಭಾರತೀಯ ಸಂಸ್ಕೃತಿಯಲ್ಲಿ ಗೋವು' (ಸಂಶೋಧನೆ) ಅಪ್ರಕಟಿತವಾಗಿದೆ. ಇವರ ಬರಹಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಫೇಸ್ ಬುಕ್ ಮೂಲಕ ಹಲವಾರು ಸಾಹಿತಿಗಳ ಕೃತಿಗಳಿಗೆ ವಿಮರ್ಶೆಯು ಬರೆದಿದ್ದಾರೆ. ನೂರಾರು ಕವಿ ಗೋಷ್ಠಿ ಹಾಗೂ ಅನೇಕ ಸಾಹಿತ್ಯ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ. ಅಷ್ಟೇಯಲ್ಲದೆ ಇವರು ವಿವೇಕ ಗ್ಲೋಬಲ್ ಟ್ರಸ್ಟ್ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿ, ಮಂದಾರ ಕಲಾವಿದರ ವೇದಿಕೆ ಬೀದರದ ಸಂಸ್ಥಾಪಕ ಸದಸ್ಯರಾಗಿ, ಸಿರಿಗನ್ನಡ ವೇದಿಕೆಯ ಜಿಲ್ಲಾ ಸಹ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇವರ ಕಾರ್ಯ ಸಾಧನೆಗೆ ವಿವಿಧ ಸಂಘ ಸಂಸ್ಥೆಗಳಿAದ `ಜನಸೇವಾ ರಾಜ್ಯ ಪ್ರಶಸ್ತಿ. ಕಾವ್ಯ ಚಂದ್ರಿಕೆ, `ಕನ್ನಡ ರತ್ನ' ಪ್ರಶಸ್ತಿ ಪುರಸ್ಕಾರಗಳು ಪಡೆದು ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ