ಪುಟಗಳು

ಶನಿವಾರ, ಜನವರಿ 11, 2025

ಬಾಲಾಜಿ ಕುಂಬಾರ

ಉದಯೋನ್ಮುಖ ಯುವ ಬರಹಗಾರರ ಬಾಲಾಜಿ ಕುಂಬಾರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಚಟ್ನಾಳ ಗ್ರಾಮದ ಅಮೃತ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೫-೭-೧೯೯೦ರಲ್ಲಿ ಜನಿಸಿದ್ದಾರೆ. ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ.ಕಂಪ್ಯೂಟರ್ ಪದವಿಧರರಾದ ಇವರ ಮಾತೃಭಾಷೆ ತೆಲುಗುವಾಗಿದ್ದು, ವ್ಯಾವಹಾರಿಕ ಭಾಷೆ ಕನ್ನಡವಾಗಿದೆ . ಆದರೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿದ ಇವರು ಕಾಲೇಜು ದಿನಗಳಲ್ಲಿಯೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು `ಪ್ರೀತಿ ಹುಟ್ಟುವ ಹೊತ್ತು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಸುಮಾರು ೫೦ಕಿಂತಲೂ ಹೆಚ್ಚು ಶರಣರ ವಚನ ವಿಶ್ಲೇಷಣೆ ಮಾಡುತ್ತಿದ್ದು, ಅವುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. `ಇವ ನಮ್ಮವ ಎಂದೇನಿಸಯ್ಯಾ' ಎಂಬ ಸಂಪಾದಿತ ಕೃತಿಯೊಂದಿಗೆ ಕೆಲ ಕವನÀಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕನ್ನೆಳ್ಳಿ ಗ್ರಾಮದಿಂದ `ಸಗರನಾಡು ಯುವ ಚೇತನ' ಪ್ರಶಸ್ತಿಯು ಪಡೆದಿರುವ ಇವರು `ಉದಯಕಾಲ, ವಿಜಯ ಕರ್ನಾಟಕ.ಉದಯವಾಣಿ, ಪ್ರಜಾವಾಣಿ. ವಿಶ್ವವಾಣಿ, ಬಿಂದಾಸ ಬೀದರ, ಕಣ್ಣಿದ್ದು ಕುರುಡ, ನ್ಯಾಯಪಥ, ಜಾಗೃತಿ ನ್ಯೂಜ್. ಮೊದಲಾದವುಗಳಲ್ಲಿ ಕವನ, ಲೇಖನ, ಬರಹಗಳು ಬರೆದು ಚಿರಪರಿಚಿತರಾಗಿದ್ದಾರೆ. ಮತ್ತು ಔರಾದ ತಾಲೂಕಿನ ಸಂತಪೂರ ವಲಯದ ಕಸಾಪ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಕಲಬುರಗಿಯಲ್ಲಿ ಏರ್ಪಡಿಸಿದ ಕಾವ್ಯ ಕಮ್ಮಟದಲ್ಲಿ ಭಾಗವಹಿಸಿದ್ದಾರೆ. ಹಾಗೂ ವಿವಿಧ ತಾಲೂಕು, ಜಿಲ್ಲೆ, ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ, ಕವಿ ಗೊಷ್ಠಿಯಲ್ಲಿಯೂ ಪಾಲ್ಗೊಂಡಿದ್ದಾರೆ. ಹೀಗೆ ಇವರು ಕ್ರಿಯಾಶೀಲ ಸೃಜನಾತ್ಮಕ ಬರಹಗಳ ಮೂಲಕ ಗುರುತ್ತಿಸಿಕೊಂಡು ಗ್ರಾಮ ಪಂಚಾಯಿತ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಖಾಸಗಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ