ಪುಟಗಳು

ಮಂಗಳವಾರ, ಜನವರಿ 14, 2025

ನಿರ್ಹಂಕಾರ ಬಂಡಿ

ಹವ್ಯಾಸಿ ಬರಹಗಾರ ನಿರ್ಹಂಕಾರ ಬಂಡಿಯವರು. ಬೀದರದ ವೀರಣ್ಣ ಮತ್ತು ಇಂದುಮತಿ ದಂಪತಿಗಳಿಗೆ ದಿನಾಂಕ ೧೭-೫-೧೯೭೩ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ ಪಡೆದ ಇವರು ಹಾವೇರಿ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಜನಪದ ವೈದ್ಯ ಮತ್ತು ಔದ್ಯೋಗಿಕ ತರಬೇತಿ ಪಡೆದು ಸ್ವಯಂ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತಿ ದಿ. ಇಂದುಮತಿ ಬಂಡಿಯವರ ಪುತ್ರರಾದ ಇವರು ತಮ್ಮ ತಾಯಿಯ ಸಾಹಿತ್ಯದ ಪ್ರೇರಣೆಯಿಂದ ಕತೆ ,ಕವನ ,ಲೇಖನಗಳು ಬರೆದಿದ್ದಾರೆ. ಇವರ ಬರಹಗಳು ಪಬ್ಲಿಕ್, ಉತ್ತರ ಕರ್ನಾಟಕ, ಕಲ್ಯಾಣ ಕಿರಣ, ಪ್ರಪಂಚ ಮೊದಲಾದ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಮತ್ತು ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. ಇವರು ಬೀದರದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಧರಿನಾಡು ಕೇಂದ್ರ ಕನ್ನಡ ಸಂಘದ ಖಜಾಂಚಿಯಾಗಿ, ಕಲ್ಯಾಣ ಕರ್ನಾಟಕ ವಿಭಾಗದ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಕೆಲ ಯೂಟ್ಯೂಬ್‌ನ ಕಿರು ಚಿತ್ರಗಳಲ್ಲಿಯೂ ನಟಿಸಿದ ಇವರಿಗೆ ಯಾದಗಿರಿಯ ಕಲಾನಿಕೇತನ ಟ್ರಸ್ಟ್ ವತಿಯಿಂದ `ಬಸವ ಕಾಯಕ ರತ್ನ ಪ್ರಶಸ್ತಿ, ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕಾವ್ಯ ರತ್ನ ಪ್ರಶಸ್ತಿ, ಮೊದಲಾದವು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ