ಭಾನುವಾರ, ಜನವರಿ 19, 2025
ಡಾ.ಜಗದೇವಿ ತಿಬಶೆಟ್ಟಿ.
ಸಾಹಿತಿ ಡಾ.ಜಗದೇವಿ ತಿಬಶೆಟ್ಟಿ ಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಬಸವಣಪ್ಪ ಮತ್ತು ಗೋದಾವರಿ ದಂಪತಿಗಳಿಗೆ ದಿನಾಂಕ ೧೭-೯-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪಿ.ಎಚ್.ಡಿ. ನೆಟ್. ಪದವಿಧರರಾದ ಇವರು ಹಾಲಹಳ್ಳಿ ಜ್ನಾನ ಕಾರಂಜಿ ಪಿ.ಜಿ.ಸೆಂಟರ್ ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಅನರ್ಘ್ಯ ರತ್ನ' (ಲೇಖನ ಸಂಕಲನ) `ಸೋಮನಾಥ ಯಾಳವಾರ' ( ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಶರಣರ ದಾಂಪತ್ಯ ದರ್ಶನ' ಎಂಬುದು ಇವರ ಪಿ.ಎಚ್.ಡಿ.ಪ್ರಬಂಧವಾಗಿದೆ. ಇವರ ಬರಹಗಳು ಬಸವಪಥ, ಲೋಕಸಿರಿ, ಶರಣರ ದರ್ಶನ, ವಚನ ಚಂದ್ರಿಕೆ, ಬಸವ ಪರಿಶೋಧ, ಶರಣ ಸೌರಭ, ಮೊದಲಾದ ಮಾಸಪತ್ರಿಕೆ ಹಾಗೂ ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಾಗೂ ಕಸಾಪ ಸಮ್ಮೇಳನಗಳಲ್ಲಿ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಚೇತನ ಪ್ರಕಾಶನ ಬೆಂಗಳೂರಿನಿAದ `ಸರೋಜಿನಿ ಚವಲಾರ' ರಾಜ್ಯ ಪ್ರಶಸ್ತಿ, ಹಾಗೂ ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರಿನಿAದ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ, ಮತ್ತು ೨೦೧೯ರಲ್ಲಿ ಹಾಸ್ಯ ತರಂಗ ಕಲಾ ಸಂಸ್ಥೆ ಬೆಂಗಳೂರಿನಿAದ ಕಾವ್ಯ ಶಾರದೆ ರಾಜ್ಯ ಪ್ರಶಸ್ತಿ, ೨೦೧೮ರಲ್ಲಿ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಸಮಾಜ ಕಲಾ ರತ್ನ' ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ