ಪುಟಗಳು

ಶನಿವಾರ, ಫೆಬ್ರವರಿ 8, 2025

ಅಶ್ವಜೀತ ದಂಡಿನ್.



  ಉದಯೋನ್ಮುಖ ಯುವ ಬರಹಗಾರರಾದ  ಅಶ್ವಜೀತ ದಂಡಿನ   ರವರು ಬೀದರ ತಾಲ್ಲೂಕಿನ ಮಾಳೆಗಾಂವ ಗ್ರಾಮದವರು. ತಂದೆ ಬಕ್ಕಪ್ಪ ತಾಯಿ ಪಾರ್ವತಿಯವರ ಸುಪತ್ರನಾಗಿ ದಿನಾಂಕ 5-12-1996 ರಲ್ಲಿ ಜನಿಸಿದ್ದಾರೆ. ಪಿಯುಸಿ ಮತ್ತು ಐಟಿಐ ವರೆಗೆ ಅಧ್ಯಯನ ಮಾಡಿದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ.

 ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೇ ಇವರು ಬರೆದ 'ಚಿಮ್ಮಿದ ಬುಗ್ಗೆ, (ಕವನ ಸಂಕಲನ) ಬುದ್ದ ಭೀಮರ ಭಜನೆಹಾಡುಗಳು, ಧರಿನಾಡ ಸಿರಿ, ನೆಲದ ಅಳಲು '' ಎಂಬ ಕೆಲ  ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.

ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಆದರೆ  ಸಾಹಿತಿ ಅಶ್ವಜೀತ ದಂಡಿನ ರವರು ಬಾಲ್ಯದಲ್ಲಿ ಅಪಘಾತಕ್ಕೆ ಈಡಾಗಿ ಕಾಲಿನ ಮೂಳೆ ಮುರಿದಿದಕ್ಕಾಗಿ ಚಿಕಿತ್ಸೆ ಪಡೆದು ಮಾತ್ರೆ ಸೇವಿಸಿದಕ್ಕಾಗಿ ಅದು ಅವರ ಕಿವಿಗಳ ಮೇಲೆ ಅಡ್ಡಪರಿಣಾಮ ಬಿರಿ ಶೇ.೬೯% ಕೇಳುವ ಶಕ್ತಿ ಕಳೆದುಕೊಂಡು ಕೇಳಿಸುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದು ನೋವಿನ ಸಂಗತಿಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ