ಭಾನುವಾರ, ಜನವರಿ 19, 2025
ಜಗನ್ನಾಥ ಕಮಲಾಪೂರೆ
ಸಾಹಿತಿ ಜಗನ್ನಾಥ ಕಮಲಾಪೂರೆ ಯವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಶರಣಪ್ಪ ಮತ್ತು ಸರಸ್ವತಿ ದಂಪತಿ ಗಳಿಗೆ ದಿನಾಂಕ 1-6-1970 ರಲ್ಲಿ ಜನಿಸಿದ್ದಾರೆ. ಎಂ.ಎ.ಎಂ.ಎಡ್.
ಎಂ.ಫಿಲ್, ಪಿ.ಜಿ.ಬಿ. ಎಚ್.ಇ.ಪದವೀಧರರಾದ ಇವರು ಬೀದರದ ಕರ್ನಾಟಕ ಬಿ.ಇಡಿ.ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಪುಸ್ತಕಗಳು ಹೊರ ತಂದಿದ್ದಾರೆ. 'ಬುಲಾಯಿ ಹಾಡುಗಳು ಒಂದು ಅಧ್ಯಯನ' ಎಂಬುದು ಇವರ ಎಂ.ಫಿಲ್. ಪ್ರಬಂಧವಾಗಿದೆ. ಮತ್ತು 2017 ರಲ್ಲಿ 'ಅಕ್ಷರ ಕಾರಂಜಿ', 2018 ರಲ್ಲಿ 'ದಾಂಪತ್ಯ ಗೀತೆ,' (ಸಂಪಾದನೆ) 2019 ರಲ್ಲಿ 'ಡಾ.ರಾಜೇಂದ್ರ ಯರನಾಳೆ' (ಬದುಕು ಬರಹ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಪ್ರಬಂಧ, ಸೇರಿದಂತೆ ಮೊದಲಾದ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ