ಪುಟಗಳು

ಮಂಗಳವಾರ, ಜನವರಿ 14, 2025

ಡಾ.ಬಂಡೆಪ್ಪಾ ಕಾಳಗಿ.

ಹಿರಿಯ ತಲೆಮಾರಿನ ಸಾಹಿತಿಗಳಲ್ಲಿ ಒಬ್ಬರಾಗಿ ಕೆಲ ಪುಸ್ತಕಗಳು ಪ್ರಕಟಿಸಿದ ಲೇಖಕರೆಂದರೆ, ಡಾ.ಬಂಡೆಪ್ಪಾ ಕಾಳಗಿ. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ನಂದಗಾAವ ಗ್ರಾಮದ ಶ್ರೀ ಭೀಮಣ್ಣಾ ಮತ್ತು ಶರಣಮ್ಮಾ ದಂಪತಿಗಳಿಗೆ ದಿನಾಂಕ ೪-೪-೧೯೫೪ ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾಗಿ ೧೯೮೨ ರಿಂದ ೧೯೮೭ ರವರೆಗೆ ಬೀದರದ ಅಂಬೇಡ್ಕರ ಪ.ಪೂ.ಕಾಲೇಜು, ಬಿ.ವಿ.ಬಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಂತರ ೧೯೮೭ ರಲ್ಲಿ ಬಸವಕಲ್ಯಾಣದ ಎಸ್.ಎಸ್.ಕೆ.ಬಿ.ಕಾಲೇಜಿನ ಸಮಾಜ ಶಾಸ್ತ್ರದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೨೦೧೪ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ, ಹನಿಗವನ,ಲೇಖನ ಬರಹಗಳು ಬರೆದು ೧೯೯೪ರಲ್ಲಿ `ಸಂಘಟನೆಯ ಸಾಫಲ್ಯ’ ಎಂಬ ಲೇಖನ ಸಂಕಲನ ೨೦೦೪ರಲ್ಲಿ `ವೃಕ್ಷ ಗಂಗಾ' ಎಂಬ ಕವನ ಸಂಕಲನ, ಮತ್ತು ೨೦೦೭ರಲ್ಲಿ `ದಿ.ಶೇಡ್ಯೂಲ್ಡ ಟ್ರಬ್ಸ ಇನ್ ಟ್ರಾನಸಿಷನ್’ ಎಂಬ ಮೂರು ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ೨೦೦೪ರಲ್ಲಿ ಬಸವಕಲ್ಯಾಣದ ಕಸಾಪ ಪದಾಧಿಕಾರಿಯಾಗಿ ಲಾಯನ್ಸ ಕ್ಲಬನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ಬಸವಕಲ್ಯಾಣದ ತ್ರೀಪೂರಾಂತದಲ್ಲಿ ತಮ್ಮ ವಿಶ್ರಾಂತಿ ಜೀವನದೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ. ಇವರ ಕುರಿತು ೨೦೧೭ರಲ್ಲಿ ಕನ್ನಡ ಮತ್ತು ಸಾಂಸ್ಕಿçತಿಕ ಇಲಾಖೆ ಬೀದರ ರವರು `ಕವಿ ಮನಸ್ಸಿನ ಸಮಾಜ ಶಾಸ್ತçಜ್ಞ ಡಾ.ಬಂಡಪ್ಪ ಭೀಮಣ್ಣ ಕಾಳಗಿ’ ಎಂಬ ಸಾಕ್ಷö್ಯ ಚಿತ್ರವು ನಿರ್ಮಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ