ಮಂಗಳವಾರ, ಜನವರಿ 14, 2025
ದಿ.ಸಿದ್ರಾಮಪ್ಪ ಹೊಸಮನಿ
ಮೊಹರಮ್ ಮತ್ತು ತತ್ವಪದಗಳನ್ನು ಬರೆದ ಸಿದ್ರಾಮಪ್ಪ ಹೊಸಮನಿಯವರು ಬೀದರದ ಹಾರೂರಗೇರಿಯ ಭೀಮಣ್ಣ ಮತ್ತು ಜ್ಯೋತೆಮ್ಮ ದಂಪತಿಗಳಿಗೆ ೧೯೩೭ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೇ ಹಾಡುವುದನ್ನು ರೂಢಿಸಿಕೊಂಡ ಇವರು ತಿಪರಂತಿ ಮಾಸ್ತರರಿಂದ ಹಾಡು ಕಲಿತು ಸ್ವತಃ ಬರೆದು ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಮತ್ತು ತತ್ವಪದ, ಭಜನೆ, ಮೊಹರಮ್ ಪದಗಳನ್ನು ಬರೆದಿದ್ದು ಅವು ಕೆಲವು ಕಡೆ ಪ್ರಕಟವಾಗಿದ್ದು ಅಷ್ಟೇಯಲ್ಲದೆ ಇವರ ಹಾಡುಗಳು ಇಂದಿಗೂ ಕೆಲ ಗ್ರಾಮೀಣ ಪ್ರದೇಶದಲ್ಲಿ ಹಾಡುತ್ತಾರೆ. ಇವರ ಮಗ ಈಶ್ವರ ಹೊಸಮನಿ ಕೂಡ ಉತ್ತಮ ಕವಿ ಗಾಯಕರಾಗಿದ್ದಾರೆ. ಇವರು ೧೯೭೬ರಲ್ಲಿ ನಿಧನರಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ