ಮಂಗಳವಾರ, ಜನವರಿ 14, 2025
ಮಾಣಿಕಾದೇವಿ ಪಾಟೀಲ್
ಉದಯೋನ್ಮುಖ ಕವಯತ್ರಿ ಮಾಣಿಕಾದೇವಿ ಎಂ.ಪಾಟೀಲ್ ರವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಶರಣಪ್ಪಾ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೯ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೂ ಪ್ರತಿಭಾವಂತರಾದ ಇವರು ಡಿ.ಇಡಿ.ಬಿ.ಇಡಿ ಎಂ.ಎ. ಪದವಿ ಪಡೆದು ಕಪಲಾಪೂರ (ತಿ) ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸದ್ಯ ಮಾಡ್ಯೂಲ್ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯದಲ್ಲಿ ಆಸಕ್ತರಾಗಿ ಹಲವಾರು ಕವಿತೆಗಳನ್ನು ಬರೆದು ಪುಸ್ತಕವೊಂದು ಹೊರ ತರುವ ನಿಟ್ಟಿನಲ್ಲಿದ್ದಾರೆ. ಅಷ್ಟೇಯಲ್ಲದೆ ಇವರ ಕವನ ಚುಟುಕು ಲೇಖನ ಮೊದಲಾದ ಬರಹಗಳು ವಿವಿಧ ಪತ್ರಿಕೆ ಹಾಗೂ ಪ್ರತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರಿಗೆ ವಿವಿಧ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಎನ್.ಪಿ.ಇ.ಜಿ.ಇ.ಎಲ್.ಯೋಜನೆಯಡಿಯಲ್ಲಿ ಬೀದರ ತಾಲೂಕಿನ ಜಂಡರ್ ಕೋ.ಆರ್ಡಿನರಾಗಿ ಪ್ರಾಥಮಿಕ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುವುದರೊಂದಿಗೆ ಸೃಜನಾತ್ಮಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ