ಸೋಮವಾರ, ಜನವರಿ 20, 2025
ರಮೇಶ ಸ್ವಾಮಿ ಕನಕಟ್ಟಾ
ಸಾಹಿತಿ ರಮೇಶ ಸ್ವಾಮಿ ಕನಕಟ್ಟಾ, ರವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಕನಕಟ್ಟಾ ಗ್ರಾಮದ ಕಾರ್ತಿಕ ಸ್ವಾಮಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ 1-6-1963ರಲ್ಲಿ
ಜನಿಸಿದ್ದಾರೆ. ಡಿಪ್ಲೊಮಾ ಇನ್ ಎಲೆಕ್ನಿಕಲ್ ಇಂಜಿನಿಯರಿಂಗ್, ಮತ್ತು ಎಂ.ಎ.ಪತ್ರಿಕೋದ್ಯಮ ಪದವಿಧರರಾಗಿದ್ದು, 1983ರಲ್ಲಿ ಜೇವರ್ಗಿಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಸೇವೆಗೆ ಸೇರಿದ ಇವರು ಸದ್ಯ ಬೀದರಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, 2011 ರಲ್ಲಿ 'ವಚನಕ್ಕೊಂದು ಕತೆ', 'ಶ್ರಾವಣ ಸಂಪದ', 2014ರಲ್ಲಿ 'ಸಂಸಾರದಲ್ಲಿ ಸದ್ಧತಿ, 'ಅನುಭವ ಮಂಟಪದಲ್ಲಿ ಸಿದ್ದರಾಮ' 2015ರಲ್ಲಿ 'ಗುರು ಕರುಣೆ, `ಅಕ್ಕನ ದರ್ಶನ' 2016ರಲ್ಲಿ 'ಜೀವನ ದರ್ಶನ', 2017ರಲ್ಲಿ 'ಬಸವದರ್ಶನ', 'ವಚನಾಮೃತಧಾರೆ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಾಗೂ ಇವರ 'ಬಸವ ದರ್ಶನ' ಕೃತಿಗೆ 2017ರಲ್ಲಿ ಬಸವಕಲ್ಯಾಣದ ಅನುಭವ ಮಂಟಪದ ಉತ್ತಮ ಪುಸ್ತಕ ಪ್ರಶಸ್ತಿಯು ಲಭಿಸಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ