ಹೊರ ಜಿಲ್ಲೆಗಳಿಂದ ಬೀದರಿಗೆ ಬಂದ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಹೊರ ಜಿಲ್ಲೆಗಳಿಂದ ಬೀದರಿಗೆ ಬಂದ ಸಾಹಿತಿಗಳು ಲೇಬಲ್ನೊಂದಿಗೆ ಪೋಸ್ಟ್ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್ಗಳನ್ನು ತೋರಿಸಿ
ಮಂಗಳವಾರ, ಜನವರಿ 14, 2025
ಪೂಜ್ಯ. ಶ್ರೀ. ಬಸವಪ್ರಭು ಸ್ವಾಮಿಗಳು
ಸಾಹಿತಿಗಳಾದ ಪೂಜ್ಯ. ಶ್ರೀ. ಬಸವಪ್ರಭು ಸ್ವಾಮಿಗಳು. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಉಳೆನೂರು ಗ್ರಾಮದ ದರಗಪ್ಪ ಮತ್ತು ಈರಮ್ಮ ದಂಪತಿಗಳ ಉದರಲ್ಲಿ ದಿನಾಂಕ ೧-೬-೧೯೮೬ರಲ್ಲಿ ಜನಿಸಿದ್ದಾರೆ. ಎಂ.ಎ ಸ್ನಾತಕೋತ್ತರ ಪದವಿಧರರಾದ ಇವರು ಪಿಹೆಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಬಸವಣ್ಣ, ಬುದ್ದ,ಅಂಬೇಡ್ಕರರ ವಿಚಾರಧಾರೆಗೆ ಮಾರುಹೋಗಿ, ಶರಣರ ತತ್ವನಿಷ್ಠೆಯ ಅಧ್ಯಾತ್ಮಿಕ ವೈಚಾರಿಕ ನೆಲೆಗಟ್ಟಿನಲ್ಲಿ, ವಚನ ಸಾಹಿತ್ಯ ಅಧ್ಯಯನ ಮಾಡಿದ ಇವರು ಲಿಂ. ಡಾ.ಮಾತೆ ಮಹಾದೇವಿಯವರಿಂದ ಲಿಂಗದೀಕ್ಷೆ ಮತ್ತು ಜಂಗಮ ದೀಕ್ಷೆ ಪಡೆದು ಬಸವಕಲ್ಯಾಣದ ಬಸವಧರ್ಮ ಪೀಠದ ಬಸವ ಮಹಾಮನೆಯಿಂದ ನಾಡಿನಾದ್ಯಂತ ಬಸವತತ್ವ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತು ಮಾತಾಜಿಯವರ ಸಾಹಿತ್ಯ ಸೇರಿದಂತೆ ಕಲ್ಯಾಣದ ಶರಣರ ವಚನಗಳನ್ನು ಅಧ್ಯಯನ ಮಾಡಿದ ಇವರು `ಚಿಂತನ ತವನಿಧಿ' (ಚಿಂತನ) `ಶೋಧಿಸಿ ನೋಡು' (ಕವನ ಸಂಕಲನ) `ದಾಂಪತ್ಯ ಧರ್ಮ' (ಲೇಖನ ಸಂಕಲನ) `ಮೂಕ ಯೋಗಿ' (ಆತ್ಮಕತೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ.
ಶ್ರೀಗಳು ಧಾರ್ಮಿಕ ಸಾಮಾಜಿಕ ಸಂಘಟಕರು ಆಗಿರುವುದರಿಂದ ಅನ್ಯಾಯ ಅಪಪ್ರಚಾರದ ವಿರುದ್ಧ ಲೇಖನಗಳು ಬರೆದು ಆ ಮೂಲಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ನಾಡಿನಾದ್ಯಂತ ರಾಷ್ಟ್ರೀಯ ಬಸವದಳದ ಶಾಖೆಗಳನ್ನು ತೆರೆದು ಹಳ್ಳಿಗಳಲ್ಲಿ ಬಸವತತ್ವ ಪ್ರಚಾರೋಪನ್ಯಾಸ ಮಾಡುವುದರೊಂದಿಗೆ ಅನಾಥ ಮಕ್ಕಳಿಗೆ ಉಚಿತ ಆಶ್ರಯ ನೀಡಿ `ಬಸವ ಮಹಾಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಥಾಪಿಸಲ್ಪಟ್ಟ ಅಕ್ಕನಾಗಲಾಂಬಿಕ ಮಕ್ಕಳ ಮಹಾಮನೆ' ಎಂಬ ಅನಾಥ, ನಿರ್ಗತಿಕ,ಎಚ್.ಐ.ವಿ.ಪೀಡಿತ ಮಕ್ಕಳಿಗೆ ಸುಮಾರು ೧೫ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ವಿಜಯವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಶ್ವವಾಣಿ, ಹೊಸ ದಿಂಗತ, ದಿ.ಹಿಂದೂ, ಕಲ್ಯಾಣ ಕಿರಣ, ಶೋಧವಾಣಿ ಇತ್ಯಾದಿ ಪತ್ರಿಕೆಗಳು ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್
ಕವಯತ್ರಿ ಡಾ. ಶ್ರೇಯಾ ಯಶಪಾಲ್ ಮಹಿಂದ್ರಕರ್ ರವರು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಪಾಂಡುರAಗರಾವ ಮತ್ತು ನಾಗರತ್ನ ದಂಪತಿಗಳಿಗೆ ದಿನಾಂಕ ೧-೪-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎ.ಎಂ.ಎಸ್.ಡಿ.ಎನ್.ಎಚ್.ಇ. ಎಂ.ಎಸ್.ಡೆಬ್ಲು ಸ್ನಾತಕೋತ್ತರ ಪದರವಿಧರರಾದ ಇವರು ಕೆಲ ವರ್ಷ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಬೆಂಡಿಗಾನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಯ ಮೆಡಿಕಲ್ ಆಫಿಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ವಿವಾಹವಾದ ನಂತರ ಪತಿ ಡಾ. ಯಶಪಾಲ್ ಮಹಿಂದ್ರಕರ್ ರವರೊಂದಿಗೆ ಬೀದರಗೆ ಬಂದು ಇಲ್ಲಿಯು ಕೆಲವರ್ಷ ದಿಲ್ಲಿ ಪ್ಯಾರಾ ಮೇಡಿಕಲ್ ಇನ್ಸ್ಟಿಟ್ಯೂಟ್ನ ಪ್ರಿನ್ಸಿಪಾಲ್ರಾಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಕವಯತ್ರಿಯಾಗಿ ಗುರುತಿಸಿಕೊಂಡ ಇವರು ತಮ್ಮ ಪತಿ ಬ್ರೀಮ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ೧೫ ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಗೃಹಿಣಿಯಾಗಿದ್ದುಕೊಂಡು ೨೦೨೦ರಲ್ಲಿ `ಚೈತ್ರದ ಚಿಗುರು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರಿಗೆ ಬೀದರದ ಮಂದಾರ ಕಲಾವಿದರ ವೇದಿಕೆ ಹಾಗೂ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾವ್ಯ ರತ್ನ, ಇತ್ಯಾದಿ ಪ್ರಶಸ್ತಿಗಳು ಲಭಿಸಿವೆ. ಇವರು ಕವನ ಲೇಖನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಉಮೇಶ ಬಾಬು ಮಠದ
`ಉಬಾಮ' ಎಂಬ ಕಾವ್ಯನಾಮದ ಕವಿ ಉಮೇಶ ಬಾಬು ಮಠದ್ ರವರು ಮೂಲತಃ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಲ್ಲಹಳ್ಳಿ ಗ್ರಾಮದ ಬಸ್ಸಯ್ಯಾ ಮತ್ತು ಏಕಾಂತಮ್ಮ ದಂಪತಿಗಳಿಗೆ ದಿನಾಂಕ ೨೩-೬-೧೯೮೩ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್. ಪದವಿಧರಾದ ಇವರು ಹುಮನಾಬಾದ ನ್ಯಾಯಾಲಯದ ಡಿ.ದರ್ಜೆಯ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೀದರ ಜಿಲ್ಲೆ ಸಾಹಿತಿಗಳ ಒಡನಾಟದಿಂದಲೇ ಸಾಹಿತ್ಯ ರಚಿಸಿ, ಪುಸ್ತಕ ಪ್ರಕಟಿಸಿ ಲೇಖಕರಾಗಿ ಹೊರಹೊಮ್ಮಿದರಿಂದ "ನಾನು ಸಾಹಿತಿಯಾಗಬೇಕಾದರೆ ಬೀದರ ಜಿಲ್ಲೆಯ ಪರಿಸರವೆ ಕಾರಣ ’’ ಎಂದು ಹೇಳುತ್ತಾರೆ. ಮತ್ತು `ವಸುಧೆಯೊಳಗಿನ ಅರ್ಭಟ' (ಕವನಸಂಕಲನ) `ಚಿಗುರೆಲೆಗಳು ' (ಚುಟುಕು ಸಂಕಲನ) `ಸೋತ ಮನಸ್ಸಿಗೆ ಸಮಾಧಾನ' (ಕಥಾಸಂಕಲನ) `ಬೆವರ್ಸಿ ಬದುಕಿನ ಬರಹಗಳು' (ಲೇಖನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು `ನಿತ್ಯ ಸಂಜೀವಿನಿ ಮಂಗಳಾರತಿ' ಎಂಬ ಸಂಪಾದಿತ ಕೃತಿ ಮುದ್ರಣದ ಹಂತದಲ್ಲಿದೆ. ಇವರ ಬರಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಹುಮನಾಬಾದನಲ್ಲಿ ವಾಸವಾಗಿದ್ದಾರೆ.
ಡಾ. ನಿಜಲಿಂಗ ಆರ್ ರಗಟೆ
ಸಾಹಿತಿ ನಿಜಲಿಂಗ ಆರ್.ರಗಟೆ ಯವರು. ಮೂಲತಃ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚುಮ್ಮನಚೋಡ ಗ್ರಾಮದ ರಾಜಗುರು ಮತ್ತು ಇರಮ್ಮಾ ದಂಪತಿಗಳಿಗೆ ದಿನಾಂಕ ೪-೧೧-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಬಿ.ಎ.ಮತ್ತು ಡಿ.ಸಿ.ಎ.ಪದವಿ ಪಡೆದ ಇವರು ಭಾಲ್ಕಿಯ ಡಿ.ಸಿ.ಸಿ ಬ್ಯಾಂಕ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಕನ್ನಡ ಒಡಲು', `ಕನ್ನಡ ಕಣಜ', `ನನ್ನ ಕವನ' (ಕವನ ಸಂಕಲನಗಳು) `ಕಥಾಗುಚ್ಚ' (ಕಥಾ ಸಂಕಲನ) `ಸಿರಿವಂತನ ದರ್ಪ' (ನಾಟಕ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಸಂಯುಕ್ತ ಕರ್ನಾಟಕ, ಬೀದರ ರಹಸ್ಯ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ೨೦೦೧ರಿಂದ ೨೦೦೫ರವರೆಗೆ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸಾಹಿತ್ಯ ಸಿಂಚನ ಬೆಂಗಳೂರು ಮತ್ತು ಬಿಜಾಪುರ ಲೇಖಕರ ಬಳಗದಿಂದ ರಾಜ್ಯ ಮಟ್ಟದ ಪ್ರಶಸ್ತಿ, ಶಹಾಪೂರ ಸಾಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ, ಕಾಸರಗೋಡಿನ ರಾಜ್ಯಮಟ್ಟದ ಕವಿ ಸಮ್ಮೇಳನದಲ್ಲಿ ಕವಿರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ನ್ಯಾಷನಲ್ ವರ್ಚುಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಯು ನೀಡಿ ಗೌರವಿಸಲಾಗಿದೆ. ಹಾಗೂ ನೈಜದೀಪ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ ಹಾಗೂ ಚಿಂಚೋಳಿ ತಾಲೂಕಿನ ಚಿಮ್ಮನಚೋಡದಲ್ಲಿ ಕೆಲವು ಕಾರ್ಯಕ್ರಮಗಳು ಮಾಡಿ ಸಾಹಿತಿ, ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರಗಳು ನೀಡಿ ಪ್ರೊತ್ಸಾಹಿಸುತ್ತಿದ್ದಾರೆ. ಇವರಿಗೆ ೨೦೨೧ ಜನೆವರಿ ೨೧ ರಂದು ಬೀದರ ತಾಲೂಕಾ ೨ನೇ ತಾಲೂಕಾ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ಡಾ.ರಾಮಚಂದ್ರ ಗಣಾಪೂರ
ಸಾಹಿತಿ ಡಾ.ರಾಮಚಂದ್ರ ಗಣಾಪೂರ. ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೆಪೇಟ್ ಗ್ರಾಮದ ಭೀಮಣ್ಣ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧೫-೦೨-೧೯೭೫ರಲ್ಲಿ ತನ್ನ ತಾಯಿ ತವರುಮನೆ ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದಲ್ಲಿ ಜನಿಸಿದ್ದಾರೆ. ಎಂ.ಎ. ಎಂ. ಫೀüಲ್., ಪಿ.ಹೆಚ್.ಡಿ. ಪದವಿಧರರಾದ ಇವರು ಬೀದರದ ಜ್ಞಾನಕಾರಂಜಿ ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂಟು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು `ನಿಮ್ಮೊಡನಿದ್ದೂ ನಿಮ್ಮಂತಾಗದೆ', `ತನುವೆಂಬ ಮನೆಯೊಳಗೆ,' `ಸಾಹಿತ್ಯ ಸಮೀಕ್ಷೆ,' `ಶಿಷ್ಯನೆಂಬಾ ವನಕ್ಕೆ', `ನಿತ್ಯೋತ್ಸವದ ಕವಿ ನಿಸಾರ್ ಅಹಮದ್', `ನಾಗಾರ್ಜುನ ಕಾಳಗ', `ಗುಲಬರ್ಗಾ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ', `ಸುವರ್ಣ ದಾಂಪತ್ಯ', `ಕ್ವಾಟಿ ಜಾನಪದ', `ಸೌಮ್ಯ ಸಿರಿ.’ ಇತ್ಯಾದಿ ೧೪ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕಲಬುರಗಿ ಹಾಗೂ ರಾಯಚೂರು ಆಕಾಶವಾಣಿಯಿಂದ ಅನೇಕ ಕಾರ್ಯಕ್ರಮಗಳು ಬಿತ್ತರಗೊಂಡಿವೆ. ಮತ್ತು ರಾಷ್ಟಿçÃಯ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳು ಸೇರಿದಂತೆ ಹಲವಾರು ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿಯ ವತಿಯಿಂದ ಡಾ. ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ, ಕವಿ ಸೂರ್ಯ ಪ್ರಶಸ್ತಿ, ಕಲ್ಯಾಣ ಚನ್ನಶ್ರೀ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು `ಸ್ನೇಹಗಂಗಾ' ಮಾಸಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಗವಿಸಿದ್ದಪ್ಪ ಎಚ್.ಪಾಟೀಲ್.
`ಗವೀಶ್’ ಎಂಬ ಕಾವ್ಯನಾಮ ಮತ್ತು `ಪಾಟೀಲ ಗವಿಸಿದ್ಧ' ಎಂಬ ವಚನಾಂಕಿತದಿAದ ಬರೆಯುತ್ತಿರುವ ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ರವರು ಮೂಲತಃ ಕೊಪ್ಪಳ ಜಿಲ್ಲೆ ಬಿಸರಹಳ್ಳಿ ಗ್ರಾಮದ ಹನುಮಂತಗೌಡ ಪಾಟೀಲ ಮತ್ತು ಶಾರದಾ ದಂಪತಿಗಳಿಗೆ ದಿನಾಂಕ ೧೬-೬-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ೨೦೦೭ರಿಂದ ಬಸವಕಲ್ಯಾಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ, ಪ್ರಭಾರಿ ಪ್ರಾಂಶುಪಾಲರಾಗಿ, ಸೇವೆ ಸಲ್ಲಿಸಿ, ೨೦೧೭ರಿಂದ ಹುಮನಾಬಾದ ಕಾಲೇಜಿನ ಪಿಜಿ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಆಸಕ್ತರಾದ ಇವರು `ಕನಸುಗಣ್ಣಿನ ಹುಡುಗಿ' (ಕವನಸಂಕಲನ) `ಕಾಗದದ ಚೂರು' (ಕಥಾಸಂಕಲನ). `ಜನಜಾನಪದ', `ಹೊತ್ತರಳಿ', `ಜಾನಪದ ಕೈದೀವಿಗೆ', `ರಂಗ ಸಿರಿ', `ವಚನ ಸಿರಿ’, `ಶಿವದಾಸ ಚಿಂತನೆ', `ಅರಿವಿನ ಬೆಳಕಲ್ಲಿ' ಇವು ಅವರ ಪ್ರಮುಖ ಕೃತಿಗಳಾಗಿವೆ. ಮತ್ತು ವ್ಯಕ್ತಿ ಚಿತ್ರಣ, ಜೀವನ ಚರಿತ್ರೆ, ವಿಮರ್ಶೆ, ,ಪಠ್ಯ ಪುಸ್ತಕ, ಅಭಿನಂದನಾ ಗ್ರಂಥ, ಸ್ಮರಣ ಸಂಚಿಕೆ, ದಾಸ ಸಾಹಿತ್ಯ, ಸಂಪಾದನೆ ಸೇರಿ ಒಟ್ಟು ೯೪ಕೃತಿಗಳಲ್ಲಿ ೫೨ಸೃಜನಶೀಲ ಮತ್ತು ೪೨ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ೫೦ಕ್ಕೂ ಹೆಚ್ಚು ಅಭಿನಂದನ ಗ್ರಂಥ ೧೦೦ಕ್ಕೂ ಹೆಚ್ಚು ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಇವರ ಬರಹಗಳು ಪ್ರಕಟ, ಪ್ರಸಾರವಾಗಿವೆ. ಇವರಿಗೆ ಕರ್ನಾಟಕ ಸರಕಾರದ ಕನಕ ಯುವ ಪುರಸ್ಕಾರ, ಹಾರಕೂಡ ಮಠದಿಂದ ಚನ್ನಶ್ರೀ ಪ್ರಶಸ್ತಿ ಸೇರಿದಂತೆ ಮೊದಲಾದ ೪೦ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಮತ್ತು ಇವರಿಗೆ ಬೇಲೂರಿನಲ್ಲಿ ಜರುಗಿದ `ಹೈದರಾಬಾದ ಕರ್ನಾಟಕ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ ಇವರು ಧರಿನಾಡು ಕನ್ನಡ ಸಂಘ, ದಾಸ ಸಾಹಿತ್ಯ ಪರಿಷತ್ತು, ಲೋಹಿಯಾ ಪ್ರತಿಷ್ಠಾನ, ಬೀದರ ಜಿಲ್ಲಾ ಶರಣು ವಿಶ್ವ ವಚನ ಫೌಂಡೇಷನ್ ಅಧ್ಯಕ್ಷರಾಗಿದ್ದಾರೆ. ಮತ್ತು ಸಾಕ್ಷಿ ಪ್ರತಿಷ್ಠಾನದ ಮೂಲಕ ಅನೇಕ ಸಾಹಿತಿಗಳಿಗೆ ಪ್ರಶಸ್ತಿ ಪುರಸ್ಕಾರವು ನೀಡುತ್ತಿದ್ದಾರೆ.
ಡಾ.ಚಿತ್ರಶೇಖರ ಚಿರಳ್ಳಿ
ಸಾಹಿತಿ ಡಾ.ಚಿತ್ರಶೇಖರ ಚಿರಳ್ಳಿ ಯವರು ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ರಾಜಾಪೂರ ಗ್ರಾಮದ ಸಿದ್ರಾಮಪ್ಪಾ ಮತ್ತು ಸುಂದ್ರಮ್ಮ ದಂಪತಿಗಳಿಗೆ ದಿನಾಂಕ ೧-೭-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ ಪದವಿಧರರಾದ ಇವರು ೧೯೯೯ರಲ್ಲಿ ಕಲಬುರಗಿ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ೨೦೦೧ರಿಂದ ಸೇವೆಗೆ ಸೇರಿ ಎರಡು ವರ್ಷ ಕಾರ್ಯನಿರ್ವಹಿಸಿದ್ದಾರೆ. ಮತ್ತು ಬಾನುಲಿಯಿಂದ ಹಾಸ್ಯ-ಲಾಸ್ಯ, ಮಹಿಳಾ ಕಾರ್ಯಕ್ರಮ, ಸಂದರ್ಶನಗಳು ನಡೆಸಿ ಕೇಳುಗರ ಮನೆ ಮಾತಾಗಿದ್ದರು. ನಂತರ ೨೦೦೧ರಿಂದ ೨೦೦೯ ರವರೆಗೆ ಬಸವಕಲ್ಯಾಣದ ಖಾಸಗಿ ಪದವಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ನಂತರ ೨೦೦೯ರಿಂದ ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದ ಇವರು ಕತೆ, ಕವನ, ಲೇಖನ, ಆಧುನಿಕ ವಚನ ಸೇರಿದಂತೆ ಮೊದಲಾದ ಬರಹಗಳು ಬರೆದಿದ್ದಾರೆ. ಮತ್ತು `ಬಸವೇಶ್ವರ ಮತ್ತು ಅಸ್ಪೃಶ್ಯತೆ ನಿರ್ಮೂಲನೆ' ಎಂಬ ಕೃತಿಯು ರಚಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ಕರ್ಮವೀರ ಇತ್ಯಾದಿ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಮತ್ತು ಆಕಾಶವಾಣಿ ದೂರದರ್ಶನಗಳಲ್ಲಿಯು ಪ್ರಕಟ, ಪ್ರಸಾರವಾಗಿವೆ. ಇವರು ಬಸವಕಲ್ಯಾಣ ತಾಲೂಕಿನ ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಸವರಾಜ ದಯಾಸಾಗರ
ಸಾಹಿತಿ ಬಸವರಾಜ ದಯಸಾಗರ ರವರು ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ನಿಂಬಾಳ ಗ್ರಾಮದ ಅರ್ಜುನ ಮತ್ತು ಸರಸ್ವತಿಬಾಯಿ ದಂಪತಿಗಳಿಗೆ ದಿನಾಂಕ ೫-೨-೧೯೭೨ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿಧರರಾದ ಇವರು ಹುಮನಾಬಾದಿನ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಉಪಗೃಹದ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿದ್ಯಾರ್ಥಿಯಾಗಿದಾಗಲೆ ಸಾಹಿತ್ಯದ ಅಭಿರುಚಿ ಹಚ್ಚಿಕೊಂಡು ಬರವಣಿಗೆಯಲ್ಲಿ ತೊಡಗಿ ಬೆಂಗಳೂರಿನ ಜಾಣಗೆರೆ ವೆಂಕಟರಾಮಯ್ಯನವರ `ಮಾರ್ಧನಿ' ಪತ್ರಿಕೆಯ ವಿಜಯಪುರ ಜಿಲ್ಲಾ ವರದಿಗಾರರಾಗಿ ಸೇವೆಸಲ್ಲಿಸಿದ್ದಾರೆ. ಹಲವಾರು ಬರಹ ಲೇಖನಗಳು ಬರೆದು ಸಾಹಿತಿ ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಮತ್ತು `ಅಪರೂಪದ ಸಾಹಿತಿ ಎಂ.ಜಿ.ದೇಶಪಾAಡೆ' ಎಂಬ ಕೃತಿ ಪ್ರಕಟಿಸಿದ್ದಾರೆ. . ಇವರ ಬರಹಗಳು ಸುಧಾ, ಕರ್ಮವೀರ, ತುಷಾರ, ಇತ್ಯಾದಿಗಳಲ್ಲಿ ಪ್ರಕಟವಾಗಿವೆ. ಮತ್ತು ಬೀದರನಲ್ಲಿ ನಡೆದ ೭೨ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಪ್ರಕಟಿಸಿದ `ಭಾಹತ್ತರ' ಕವನ ಸಂಕಲನದಲ್ಲಿ ಇವರ ಕವಿತೆ ಪ್ರಕಟವಾಗಿದೆ. ಇವರಿಗೆ ಹುಲಸೂರು ತಾಲೂಕಿನ ಬೇಲೂರಿನಲ್ಲಿ ನಡೆದ ಸಾಮಾಜಿಕ ಸಾಮರಸ್ಯ ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಕಾರಾಗೃಹ ರತ್ನ ಪ್ರಶಸ್ತಿ, ಮಂದಾರ ಕಲಾವಿದರ ವೇದಿಕೆಯಿಂದ ಬೇಂದ್ರೆ ಕಾವ್ಯ ರತ್ನ ಪ್ರಶಸ್ತಿ, ಬೀದರನಲ್ಲಿ ನಡೆದ ಅಖಿಲ ಭಾರತ ದ್ವಿತೀಯ ಕವಿಕಾವ್ಯ ಸಮ್ಮೇಳನದಲ್ಲಿ ಕಾವ್ಯ ಕಲಾ ಭೂಷಣ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದಿಂದ ಕಾವ್ಯ ಚೂಡಾಮಣಿ ರತ್ನ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರಾಜರತ್ನಂ ಪ್ರಶಸ್ತಿ’ ಸೇರಿದಂತೆ ಮೊದಲಾದವು ಪಡೆದಿದ್ದಾರೆ. ಇವರು ಬೀದರ ಜಿಲ್ಲೆಯಲ್ಲಿ ೧೨ ವರ್ಷದಿಂದ ಸೇವೆ ಸಲ್ಲಿಸುತ್ತಾ ಇಲ್ಲಿಯ ನಿವಾಸಿಯಾಗಿದ್ದಾರೆ.
ಮಲ್ಲಿನಾಥ ಚಿಂಚೋಳಿ
ಸಾಹಿತಿ ಮಲ್ಲಿನಾಥ ಚಿಂಚೋಳಿ ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚನ್ನೂರು ಗ್ರಾಮದ ಹಣಮಂತರಾವ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೨೫-೯-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ,ಇಡಿ. ಪದವಿಧರರಾದ ಇವರು ೧೯೯೫ರಿಂದ ಹುಮನಾಬಾದಿನ ರಾಮ ಮತ್ತು ರಾಜ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಂಗ್ಲ ಭಾಷಾ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೮೬ರಲ್ಲಿ ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು `ಚಂದ್ರ ಚನ್ನೂರು' ಎಂಬ ಕಾವ್ಯನಾಮದಲ್ಲಿ ಪತ್ರಿಕೆಗಳಲ್ಲಿ ಕವಿತೆಗಳು ಪ್ರಕಟಿಸಿ ಓದುಗರಿಂದ ಮೆಚ್ಚುಗೆಯು ಗಳಿಸಿದ್ದಾರೆ. ಆದರೆ ಬಹಳ ವರ್ಷಗಳಿಂದ ಪುಸ್ತಕ ಪ್ರಕಟಿಸದೆ ಉಳಿದ ಇವರು ೨೦೧೮ರಲ್ಲಿ `ಮುಂಜಾವಿನ ಮಲ್ಲಿಗೆ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಕತೆ, ಕವನ, ಲೇಖನಗಳು ಸಂಯುಕ್ತ ಕರ್ನಾಟಕ, ಕರ್ಮವೀರ, ಮಯೂರ, ಗ್ರೀನೊಬಲ್ಸ್, ಕನ್ನಡ ನಾಡು, ಕೆಸರಿ ಘರ್ಜನೆ, ಸತ್ಯಕಾಮ ಮೊದಲಾದವುಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ರಾಜ್ಯ ಮಟ್ಟದ ಕಮ್ಮಟಗಳಲ್ಲಿ ಪಾಲ್ಗೊಂಡು ಅನೇಕ ಉಪನ್ಯಾಸವು ನೀಡಿದ್ದಾರೆ. ಸದ್ಯ ಇವರು ಹುಮನಾಬಾದಿನ ನಿವಾಸಿಯಾಗಿದ್ದು, ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ತೊಡಗಿಸಿಕೊಂಡು ಸುಮಾರು ಇಲ್ಲಿಯವರೆಗೆ ೧೦೦೦ಕ್ಕಿಂತ ಹೆಚ್ಚು ಕವನಗಳು, ೧೫. ಕತೆಗಳು, ಹಲವಾರು ಲೇಖನ, ಬಿಡಿ ಬರಹಗಳು ಬರೆದಿದ್ದಾರೆ.
ಕರುಣಾ ಸಲಗರ
`ಶಿವಲಿಂಗೇಶ್ವರ' ಎಂಬ ಅಂಕಿತನಾಮದಿAದ ಆಧುನಿಕ ವಚನಗಳನ್ನು ಬರೆದು ಪುಸ್ತಕ ಪ್ರಕಟಿಸಿದ ಲೇಖಕಿಯೆಂದರೆ ಕರುಣಾ ಸಲಗರ. ಇವರು ಕಲಬುರಗಿ ಜಿಲ್ಲೆ ಕುರಿಕೋಟಾ ಗ್ರಾಮದ ಚನ್ನಬಸಪ್ಪ ಮತ್ತು ಹಿರಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೬ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಶಿಕ್ಷಣ ಪಡೆದ ಇವರು ೧೯೮೯ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಸೇವೆಗೆ ಸೇರಿ ಸದ್ಯ ಹುಮನಾಬಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯದ ಗೀಳು ಬೆಳೆಸಿಕೊಂಡ ಇವರು `ಶಿವಲಿಂಗೇಶ್ವರ ವಚನಗಳು' (ಆಧುನಿಕ ವಚನ) `ಭಾವಧಾರೆ'. `ಕಾವ್ಯ ಕಿರಣ' (ಕವನ ಸಂಕಲನಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಮುರುಘಾ ಮಠದ ಶ್ರೀಗಳಿಂದ ಆದರ್ಶ ಶರಣ ಜೀವಿ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ಕಾವ್ಯಾಂಜಲಿ ಪ್ರಶಸ್ತಿ, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಸಂಘದ ಕಾಯಕ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್, ದಲಿತ ಸಾಹಿತ್ಯ ಪರಿಷತ್ ಹಾಗೂ ಧರಿನಾಡು ಕನ್ನಡ ಸಂಘ, ಹುಮನಾಬಾದ್ ವತಿಯಿಂದ `ಕನ್ನಡ ಸೇವಾ ರತ್ನ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ ಮತ್ತು ದಾಸ ಸಾಹಿತ್ಯ ಪರಿಷತ್ ವತಿಯಿಂದ `ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಮತ್ತು ಹುಮನಾಬಾದನಲ್ಲಿ ೨೦೧೭ರಲ್ಲಿ ನಡೆದ ಪ್ರಥಮ ತಾಲೂಕು ಮಹಿಳಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಆಕಾಶವಾಣಿ ಬಸವ ಟಿ.ವಿ.ಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರು ಬಸವ ಸೇವಾ ಪ್ರತಿಷ್ಠಾನದ ಸದಸ್ಯರಾಗಿ ಸಾಹಿತ್ಯ ಕೃಷಿ ಮುಂದುವರೆಸಿದ್ದು ಸದ್ಯ ಹುಮನಾಬಾದನಲ್ಲಿ ವಾಸವಾಗಿದ್ದಾರೆ.
ಗೋಪಾಲಕೃಷ್ಣ ವಂಡ್ಸೆ
ಹಿರಿಯ ಸಾಹಿತಿ ಗೋಪಾಲಕೃಷ್ಣ ವಂಡ್ಸೆಯವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಾಲಿಗ್ರಾಮದ ನಾಗಪ್ಪ ಹೊಳ್ಳ ಮತ್ತು ಮೂಕಾಂಬಿಕಾ ದಂಪತಿಗಳಿಗೆ ದಿನಾಂಕ ೩೧-೧೦-೧೯೬೫ರಲ್ಲಿ ತಮ್ಮ ತಾಯಿ ತವರೂರಾದ `ವಂಡ್ಸೆ' ಗ್ರಾಮದಲ್ಲಿ ಜನಿಸಿದ್ದಾರೆ. ಇವರು ಪದವಿವರೆಗೆ ಮಾತ್ರ ಅಧ್ಯಯನ ಮಾಡಿ ಕೆಲ ವರ್ಷ ಫೋಟೋಗ್ರಾಫರಾಗಿ ಸೇವೆ ಸಲ್ಲಿಸಿ ನಂತರ ಹೋಟೆಲ್ ಉದ್ಯಮಿಯಾಗಿ ಬೀದರನಲ್ಲಿ ನೆಲೆಸಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿಯೇ ಸೃಜನಶೀಲ ಬರವಣಿಗೆಯಲ್ಲಿ ತೊಡಗಿಸಿಕೊಂಡ ಇವರು ೧೯೮೭ರಲ್ಲಿ `ಬಣ್ಣದ ಚಿಟ್ಟೆ' ೧೯೮೮ರಲ್ಲಿ `ನಮ್ಮ ಚಂದಿರ' ೧೯೮೯ರಲ್ಲಿ `ಕಂದನ ಕನಸು' ೧೯೯೦ರಲ್ಲಿ `ತರ ತರ ಹೂಗಳು' (ಮಕ್ಕಳ ಕವನ ಸಂಕಲನಗಳು) ೧೯೯೭ರಲ್ಲಿ `ನಕ್ಷತ್ರ ಕಡ್ಡಿ' (ಹನಿಗವನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ಸುಧಾ, ಮಯೂರ, ಸಂಯುಕ್ತ ಕರ್ನಾಟಕ, ಕರ್ಮವೀರ, ಕಸ್ತೂರಿ, ಉದಯವಾಣಿ, ತರಂಗ, ತುಷಾರ, ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ೨೦೧೬ರಲ್ಲಿ ಬೀದರಿನ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ರಾಜ್ಯ ಮಟ್ಟದ ಕಾವ್ಯ ಚೂಡಾಮಣಿ ರತ್ನ ಪ್ರಶಸ್ತಿ, ೨೦೨೦ರಲ್ಲಿ ಬೀದರನಲ್ಲಿ ನಡೆದ ಅಖಿಲ ಭಾರತ ದ್ವಿತೀಯ ಕವಿ ಕಾವ್ಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ವೇದಿಕೆ (ರಿ) ಬೆಂಗಳೂರಿನ ವತಿಯಿಂದ ಸಿಂಪಿ ಲಿಂಗಣ್ಣ ಪ್ರಶಸ್ತಿ, ಮೊದಲಾದವು ಪಡೆದಿದ್ದಾರೆ. ಲೇಖಕರು ತರುಣರಾಗಿದ್ದಾಗ ಉತ್ತಮ ಫೋಟೋಗ್ರಾಫರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅಷ್ಟೇಯಲ್ಲದೆ ಕೆಲ ಬಡ ದಲಿತ ಯುವಕರಿಗೆ ಪೋಟೋಗ್ರಾಫಿ ಕಲೆಯನ್ನು ಕರಗತ ಮಾಡಿಸಿ, ಅವರಿಗೆ ಸಾಹಿತ್ಯಿಕವಾಗಿಯು ಹುರಿದುಂಬಿಸಿ, ಲೇಖಕ ಪತ್ರಕರ್ತರಾಗಿ ಬೆಳಯಲು ಕಾರಣಿ ಭೂತರಾಗಿದ್ದು, ನೋಡಿದರೆ ಇವರಲ್ಲಿ ದಲಿತಪರ ಕಾಳಜಿ ಇರುವುದು ಎದ್ದು ತೋರುತ್ತದೆ. ೩೫ ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿಕೊಂಡ ಇವರು ಸದ್ಯ ೨೩ ವರ್ಷಗಳಿಂದ ಬೀದರದ ನಿವಾಸಿಯಾಗಿ, ಖಾಸಗಿ ಉದ್ಯಮದೊಂದಿಗೆ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ರಜಿಯಾ ಬಳಬಟ್ಟಿ
ಕವಯತ್ರಿ ರಜಿಯಾ ಬಳಬಟ್ಟಿಯವರು ಬಾಗಲಕೋಟೆಯ ಮಸ್ತಾನಸಾಬ ಮತ್ತು ಅಮಿನಾಬೀ ಎಂಬ ದಂಪತಿಗಳಿಗೆ ದಿನಾಂಕ ೭-೫-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್. ಪದವಿಧರರಾದ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಬ್ದುಲ್ ನಜಿರ್ ಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿಯಾಗಿ ಬೀದರ ಜಿಲ್ಲಾ ಪಂಚಾಯತನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ `ಮೆಹಂದಿ’, `ದಾವಣಿ ಹುಡಗಿ’ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಒಂದು ವರ್ಷ `ಆಸರಕಿ ಬ್ಯಾಸರಕಿ' ಎಂಬ ಅಂಕಣಕಾರರಾಗಿ ಲೇಖನ ಬರೆದು ಖ್ಯಾತರಾಗಿದ್ದಾರೆ. ಇವರ ಬರಹಗಳು ಮಯೂರ, ವಿಜಯ ಕರ್ನಾಟಕದ ಮಹಿಳಾ ಪುರವಣಿ, ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ, ಮತ್ತು ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರ `ದಾವಣಿ ಹುಡಗಿ' ಕವನ ಸಂಕಲನಕ್ಕೆ ಜಿಲ್ಲಾ ಕಸಾಪದ ವತಿಯಿಂದ ಸಮಿರವಾಡಿ ದತ್ತಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿAದ ವಿಶಿಷ್ಠ ಲೇಖಕಿ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಸೃಜನಶೀಲ ಬರಹಗಾರ್ತಿ ಪ್ರಶಸ್ತಿ, ಪಡೆದಿದ್ದಾರೆ. ಮತ್ತು ಮೈಸೂರಿನ ದಸರಾ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ ಇವರು ಸದ್ಯ ಬಿ.ಆರ್.ಜಿ.ಎಫ್. (ಹಿಂದುಳಿದ ಪ್ರದೇಶ ಅನುದಾನ ನಿಧಿ) ಎಂಬ ಕೇಂದ್ರ ಸರ್ಕಾರ ಯೋಜನೆಯ ಮೈಸೂರು ಪ್ರತಿನಿಧಿಯಾಗಿ, ಬೀದರ ಜಿಲ್ಲಾ ಸಂಯೋಜಕಿಯಾಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಭಾರತಿ ವಸ್ತ್ರದ
ಸಾಹಿತಿ ಭಾರತಿ ವಸ್ತ್ರದ ರವರು ವಿಜಯಪುರ ಜಿಲ್ಲೆ ಸಿಂದಗಿಯ ಸಿದ್ದಲಿಂಗಯ್ಯಾ ಮತ್ತು ಅನ್ನಪೂರ್ಣದೇವಿ ದಂಪತಿಗಳಿಗೆ ದಿನಾಂಕ ೧-೬-೧೯೫೨ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ. ಎಂ.ಎ.ಇತಿಹಾಸ, ಎಂ.ಎಡ್.ಸ್ನಾತಕೋತ್ತರ ಪದವಿಧರರಾಗಿದ್ದು. ೧೯೮೨ರಿಂದ ಪ್ರೌಢ ಶಾಲಾ ಶಿಕ್ಷಕರಾಗಿ, ಡೈಯಟ್ನ ಪ್ರಾಶಿಕ್ಷಕರಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೧೨ರಲ್ಲಿ ನಿವೃತ್ತರಾಗಿದ್ದಾರೆ. ಸಾಹಿತ್ಯದಲ್ಲಿ ಬಾಲ್ಯದಿಂದಲೂ ತುಂಬ ಆಸಕ್ತರಾಗಿದ್ದ ಇವರು `ನಾನು ನನ್ನ ದೇಶ’ ಎಂಬ ಪರಿಚಯಾತ್ಮಕ ಕೃತಿ. `ಒಡಪು ಹೇಳತ್ತಿಯೇನ ಗೆಳತಿ’ ಎಂಬ ಜಾನಪದ ಸಾಹಿತ್ಯ, `ಹಿಪ್ಪು ನೆರಳೆ’ ಎಂಬ ರೇಷ್ಮೆ ಕುರಿತಾದ ಕೃತಿಯು ಬರೆದು ಪ್ರಕಟಿಸಿದ್ದಾರೆ. ಕಲಬುರಗಿ ಆಕಾಶವಾಣಿಯ ನಾಟಕ ವಿಭಾಗದ ಬಿ.ಗ್ರೇಡ್ ಕಲಾವಿದೆಯಾಗಿ ಕೆಲ ನಾಟಕಗಳಿಗೆ ಧ್ವನಿ ನೀಡಿ, ಮಕ್ಕಳಿಗಾಗಿ `ಕರುಣಾಳು ಬಾ ಬೆಳಕೆ', `ವರದಕ್ಷಿಣೆ, ನಿರ್ಮೂಲನೆ', `ಹರಳಯ್ಯಾ' ಸೇರಿದಂತೆ ಮೊದಲಾದ ರೇಡಿಯೋ ಕಾರ್ಯಕ್ರಮಗಳು ನಾಟಕ ರೂಪಾಂತರವಾಗಿ ಪ್ರಸಾರವಾಗಿವೆ. ಇವರಿಗೆ ೧೯೯೭ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೨ರಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ ಸಾಹಿತ್ಯ ಚೂಡಾಮಣಿ ರತ್ನ, ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ಇವರು ೧೯೯೯ರಲ್ಲಿ ಬೀದರ ಜಿಲ್ಲಾ ಸಾಕ್ಷರತಾ ಸಮಿತಿಯ ಕಾರ್ಯದರ್ಶಿಯಾಗಿ, ೨೦೦೦ರಿಂದ ಮೂರಾರ್ಜಿ ಶಾಲಾ ಪ್ರಾಂಶುಪಾಲರಾಗಿ, ಬೀದರ ಜಿಲ್ಲಾ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನೀರ್ದೆಶಕರಾಗಿ ,ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಮಹಿಳಾ ಸಮಖ್ಯದ ಎಗ್ಜಿಗೇಟಿವ್ ಸದಸ್ಯರಾಗಿ, ವಯಸ್ಕರ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಬೀದರದ ಖಾಯಂ ನಿವಾಸಿಯಾಗಿದ್ದಾರೆ.
ಸೋಮವಾರ, ಜನವರಿ 13, 2025
ಭಾನುದಾಸ ಪಾಟೀಲ್
ಸಾಹಿತಿ ಭಾನುದಾಸ ಪಾಟೀಲ್ ರವರು ಕಲಬುರಗಿ ಜಿಲ್ಲೆ ನೂತನ ಕಮಲಾಪೂರ ತಾಲೂಕಿನ ಮಡಕಿ ಗ್ರಾಮದ ಉದ್ದವರಾವ ಪಾಟೀಲ್ ಮತ್ತು ವತ್ಸಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೧ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಪಿಯುಸಿ, ಟಿ.ಸಿ.ಎಚ್ ಶಿಕ್ಷಣ ಪಡೆದು ೧೯೮೩ರಿಂದ ಬಸವಕಲ್ಯಾಣದ ಅನುದಾನಿತ ಜಿಜಾಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ೨೦೦೪ರಲ್ಲಿ ಹತ್ತು ಜನ ಲೇಖಕರೊಂದಿಗೆ `ಹತ್ತು ಮುಖಗಳ ನೂರು ಭಾವಗಳು' ಎಂಬ ಕವನ ಸಂಕಲನದಲ್ಲಿ ತಮ್ಮ ಹತ್ತು ಕವನಗಳು ಪ್ರಕಟಿಸಿದ್ದಾರೆ. ಮತ್ತು ಇತ್ತೀಚೆಗೆ `ನಮ್ಮೂರ' ಎಂಬ ಗ್ರಾಮ ಚರಿತ್ರೆಯು ಬರೆದಿದ್ದಾರೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನ ಮತ್ತು ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. ಇವರಿಗೆ ೧೯೯೨ರಲ್ಲಿ ಬಸವಕಲ್ಯಾಣ ತಾಲೂಕು ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ,ಯು ನೀಡಿ ಗೌರವಿಸಲಾಗಿದೆ. ಮತ್ತು ಹಾರಕೂಡದ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಮುಚಳಂಬ, ಹುಲಸೂರು, ಬೆಲೂರು ಮಠಗಳಲ್ಲಿ ನಡೆದ ವಿವಿಧ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವುದರಿಂದ ಸನ್ಮಾನಿಸಿ ಗೌರವಿಸಿದ್ದಾರೆ. ಸದ್ಯ ಇವರು ನಿವೃತ್ತಿಯ ಅಂಚಿನಲ್ಲಿದ್ದು ಬಸವಕಲ್ಯಾಣದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಅರುಂಧತಿ ಚಾಂದಕವಠೆ
ಮಹಿಳಾ ಸಾಹಿತಿ ಅರುಂಧತಿ ಚಾಂದಕವಠೆ ರವರು ಕೊಪ್ಪಳ ಜಿಲ್ಲೆ ಕಿನ್ನಾಳದ ಸೀತಾರಾಮರಾವ ಮತ್ತು ಆರಾಧನಾ ದಂಪತಿಗಳಿಗೆ ದಿನಾಂಕ ೨೨-೬-೧೯೬೦ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಬೀದರದ ಬಿ.ಎಸ್.ಎನ್.ಎಲ್. ನಲ್ಲಿ ಕಛೇರಿಯಲ್ಲಿ ಜ್ಯೂನಿಯರ್ ಟೆಲಿಕಾಂ ಆಫೀಸರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ೨೦೦೪ರಲ್ಲಿ `ಬಾಂಧವ್ಯ' ಎಂಬ ಕಥಾ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ಇದ್ದಿಲು ಪುಡಿ’, `ಮನೆ ಮನೆಯ ಕತೆ’, `ನಿಲ್ಲು’, `ಮಂಗನ ತೀರ್ಪು,’ ಎಂಬ ನಾಟಕಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಆದರೆ, ಆ ನಾಟಕಗಳು ಈಗಾಗಲೇ ಹಲವು ಕಡೆ ಪ್ರದರ್ಶನ ಕಂಡು ತುಂಬ ಜನಪ್ರಿಯತೆಯು ಗಳಿಸಿವೆ.ಮತ್ತು ಇವರು ಒಬ್ಬ ಉತ್ತಮ ಕಲಾವಿದೆಯು ಆಗಿರುವುದರಿಂದ ಕಲಬುರಗಿ ಆಕಾಶವಾಣಿಯಿಂದ ಪ್ರಸಾರವಾದ `ರಾವಿ ನದಿಯ ದಂಡಯಲ್ಲಿ’, `ಛಲ’, `ಸೌಹಾರ್ದ,’ `ಉಡುಗೊರೆ,’ `ಬಯಸದೆ ಬಂದ ಭಾಗ್ಯ,’ `ಬದುಕು ಜಟಕಾ ಬಂಡಿ’ ಎಂಬ ನಾಟಕಗಳಲ್ಲಿ ನಟಿಸಿದ್ದಾರೆ. ಇವರ ಕತೆ, ಕವನ, ಲೇಖನ, ಪ್ರಬಂಧಗಳು ಪ್ರಮುಖ ಪತ್ರಿಕೆ, ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ೨೦೦೧ರಲ್ಲಿ ಬೀದರ ಜಿಲ್ಲಾ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ `ಮನೆ ಮನೆ ಕತೆ’ ,ನಾಟಕ ರಚಿಸಿ ಕುಟುಂಬ ಸದಸ್ಯರೊಂದಿಗೆ ಪ್ರದರ್ಶನ ಮಾಡಿದ್ದರಿಂದ ಗೌರವ ಸನ್ಮಾನ, ೨೦೦೯ರಲ್ಲಿ ಧರಿನಾಡು ಕನ್ನಡ ಸಾಹಿತ್ಯ ಸಂಘ ಮತ್ತು ಹುಮನಾಬಾದಿನ ಸಾಕ್ಷಿ ಪ್ರತಿಷ್ಠಾನದಿಂದ ಧರಿನಾಡು ಸಿರಿ ಪ್ರಶಸಿಯು ನೀಡಿ ಗೌರವಿಸಿದ್ದಾರೆ. ಹಾಗೂ ೨೦೦೬ರಲ್ಲಿ ಬೀದರ ೭೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಸೇರಿದಂತೆ ಮೊದಲಾದ ಜಿಲ್ಲಾ, ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಕವನ ವಾಚನವು ಮಾಡಿದ್ದಾರೆ. ಇವರಿಗೆ ೨೦೦೯ರಲ್ಲಿ ಬೀದರ ತಾಲೂಕಿನ ಅಣದೂರದಲ್ಲಿ ನಡೆದ ವಲಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ವೀರಣ್ಣ ಕುಂಬಾರ
ಸಾಹಿತಿ ವೀರಣ್ಣ ಕುಂಬಾರ ರವರು ಕಲಬುರಗಿ ಜಿಲ್ಲೆ ಶಹಾಬಾದ ತಾಲ್ಲೂಕಿನ ಭಂಕೂರು ಗ್ರಾಮದ ಬಸಣ್ಣ ಮತ್ತು ಬಸಮ್ಮ ದಂಪತಿಗಳಿಗೆ ದಿನಾಂಕ ೨೫-೨-೧೯೫೪ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಇಂಜಿನಿಯರಿAಗ್ ಪದವೀಧರರಾದ ಇವರು ಕೆಲವರ್ಷ ಶಹಾಬಾದಿನ ಎ.ಬಿ.ಎಲ್. ಸಿಮೆಂಟ್ ಕಾರ್ಖಾನೆಯಲ್ಲಿ ಇಂಜಿನಿಯರಿAಗ್ ಸೇವೆ ಸಲ್ಲಿಸಿ ೧೯೯೮ರಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಸೋಲಾರ್ ಎನರ್ಜಿ ಪ್ರೊಜೆಕ್ಟ್ ನಿಮಿತ್ತವಾಗಿ ಬೀದರಿಗೆ ಆಗಮಿಸಿದ ಇವರು ಇಲ್ಲಿಯ ಕಲೆ ಸಾಹಿತ್ಯ ಬಸವ ಸಂಸ್ಕೃತಿ ಮೈಗೂಡಿಸಿಕೊಂಡು, `ಶರಣ ಕುಂಬಾರ ಗುಂಡಯ್ಯ, ಗುರುಪಾದ ಗಂಗೆ, ಶೀವರೇಖಾ, ಚೆನ್ನಯ್ಯನ ಮಗ ನಾನಯ್ಯ, ಸಾತ್ವಿಕ,' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಭಾಲ್ಕಿಯ ಶಾಂತಿ ಕಿರಣ (ದ್ವೈಮಾಸಿಕ) ಜ್ಯೋತಿ ಮುಟ್ಟಿದ ಬುತ್ತಿ, ಬಸವ ಬಳ್ಳಿ, ಇವು ಇವರ ಸಹ ಸಂಪಾದಕತ್ವದಲ್ಲಿ ಪ್ರಕಟಿಸಿದ್ದಾರೆ. ಹಾಗೂ `ಹಿರೇಮಠ ಸಂಸ್ಥಾನ ಒಂದು ಅಧ್ಯಯನ, ಬೀದರ ಜಿಲ್ಲೆಯ ತಾಡೋಲೆ ಮತ್ತು ಹಸ್ತಪ್ರತಿ ಸಂಗ್ರಹ, ಬೀದರ ಜಿಲ್ಲೆಯ ತತ್ವ ಪದಕಾರರ ತತ್ವ ಪದಗಳು,’ ಎಂಬ ಕೃತಿಗಳು ಸಂಪಾದಿಸಿ ನೂರಾರು ಶರಣರ ವಚನಗಳಿಗೆ ವ್ಯಾಖ್ಯಾನಗಳು ಬರೆದಿದ್ದಾರೆ. ಸದ್ಯ ಇವರು ಭಾಲ್ಕಿಯ ನಿವಾಸಿಯಾಗಿದ್ದಾರೆ.
ಡಾ.ಸೋಮನಾಥ ಯಾಳವಾರ
ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ರವರು ವಿಜಯಪುರ ಜಿಲ್ಲೆ ಆಲಮಟ್ಟಿ ಗ್ರಾಮದ ಸಿದ್ದಪ್ಪ ಮತ್ತು ಶಿವನಂದಮ್ಮಾ ದಂಪತಿಗಳಿಗೆ ದಿನಾಂಕ ೧-೫-೧೯೫೩ ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ. ಪದವಿಧರರಾದ ಇವರು ೧೯೭೯ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ.
ಇವರು `ಹುಮನಾಬಾದ ತಾಲೂಕು ದರ್ಶನ, ಹರಿಶ್ಚಂದ್ರ ಕಾವ್ಯ, ಕಾವ್ಯ ಸಂಗಮ-೨, ಗಿರಿಜಾ ಕಲ್ಯಾಣ, ವಿವೇಕ ವಾಹಿನಿ, ಗೃಹ ಮಂಗಳ, ಉರಿಲಿಂಗಪೆದ್ದಿ, ಬೀದರ ಜಿಲ್ಲಾ ದರ್ಶನ, ಬೀದರ ಜಿಲ್ಲೆಯ ಶರಣರ ಸ್ಮಾರಕಗಳು, ಪುಲಿಗೆರಿಯ ಆದಯ್ಯಾ , ವೀರಭದ್ರ ಸಿರಿ, ಕರಕನಳ್ಳಿ ಬಕ್ಕಪ್ರಭು, ಕುಂಬಾರ ಗುಂಡಯ್ಯಾ, ಕುಮಾರವ್ಯಾಸ, ಶರಣಸಿರಿ, ಮಾಣಿಕ ಪ್ರಭುಗಳು, ಹೊಸಗನ್ನಡ ಕಾವ್ಯ ಸಂಗ್ರಹ, ಸೋಳ್ನುಡಿ ಸಿಂಚನ, ಜಯದೇವಿ ತಾಯಿ ಲಿಗಾಡೆ, ಬಯಲೊಳಗಣ ಬಿಸಿ, ವೈದ್ಯ ಜಾನಪದ, ಡಾ.ಚಂದ್ರಶೇಖರ ಕಂಬಾರ, ಆನು ಒಲಿದಂತೆ ಹಾಡುವೆ, ಹೈದರಾಬಾದ ಕರ್ನಾಟಕ ಶರಣ ಹಾಗೂ ಸೂಫಿ ಚಳವಳಿ, ಅಖಂಡ ಬಿಜಾಪುರ ಜಿಲ್ಲೆಯ ಅನುಭಾವಿ ಕವಿಗಳು, ವಚನದಲ್ಲಿ ನಾಮಾಮೃತ, ಅನನ್ಯ ಅನುಭವ ಮಂಟಪ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ, ವಚನ ಸುದ್ಧಿ ಕರಣ ಸೂತ್ರಗಳು, ಕಾಶ್ಮೀರದ ಶರಣರು, ಜಗಜ್ಯೋತಿ, ಯೋಗಿಗಳ ಯೋಗಿ ಶಿವಯೋಗಿ ಸಿದ್ದರಾಮ, ಸತಿ-ಪತಿಗಳೊಂದಾದ ಬದುಕು, ಕಲ್ಯಾಣ ಕ್ರಾಂತಿ, ಶರಣರ ದಂಡಿನ ದಾರಿ, ಅಯ್ಯಗಳಯ್ಯ ಮಾದಾರ ಚನ್ನಯ್ಯ, ದನಿ ಎತ್ತಿ ಹಾಡೇನ, ಚನ್ನಬಸವ, ತ್ರಿಪದಿ ಕಾವ್ಯ ಸೇರಿದಂತೆ ಹಲವಾರು ಪುಸ್ತಕಗಳು ಪ್ರಕಟಿಸಿದ್ದಾರೆ. ಮತ್ತು ೨೦೦ಕ್ಕೂ ಹೆಚ್ಚು ಲೇಖನಗಳು ವಿವಿಧ ಸಂಚಿಕೆ, ಪ್ರಾತಿನಿಧಿಕ ಸಂಕಲನ, ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಇವರು ಹುಮನಾಬಾದ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೌದ್ಧ ಅಧ್ಯಯನ ಕೇಂದ್ರದ ನೀದೇರ್ಶಕರಾಗಿ, ಅನುಭವ ಮಂಟಪ ಪ್ರಸಾರಾಂಗದ ನೀರ್ದೆಶಕರಾಗಿ, ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಕೂಟ ಸಾಹಿತ್ಯ ಪ್ರಶಸ್ತಿ, ಡಾ.ಬಸವಲಿಂಗ ಪಟ್ಟದ್ದೆವರ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ಬೀದರ ಜಿಲ್ಲಾ ೫ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಬಸವನಬಾಗೆವಾಡಿ ತಾಲೂಕಾ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಬೀದರ ಜಿಲ್ಲಾ ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಸದ್ಯ ಇವರು ಹುಮನಾಬಾದಿನ ಖಾಯಂ ನಿವಾಸಿಯಾಗಿದ್ದು, ಇವರ ಕುರಿತು ಕೆಲ ವಿದ್ಯಾರ್ಥಿಗಳು ಎಂ.ಫೀಲ್. ಪಿ.ಎಚ್.ಡಿ.ಅಧ್ಯಯನ ಮಾಡಿ ಪದವಿ ಪಡೆದಿದ್ದಾರೆ.
ವೀರಣ್ಣ ಕುಂಬಾರ
ಪೂಜ್ಯ. ಶ್ರೀ.ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು
ಸಾಹಿತಿ ಹಾಗೂ ಮಠಾದೀಶರಾದ ಪೂಜ್ಯ. ಶ್ರೀ.ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ನಿಂಗಾಪೂರ ಗ್ರಾಮದ ಶ್ರೀ ಗುರುಪಾದಯ್ಯ ಮತ್ತು ಶ್ರೀಮತಿ ಕಾಶಮ್ಮ ದಂಪತಿಗಳ ಉದರದಲ್ಲಿ ದಿನಾಂಕ ೨-೧೨-೧೯೫೨ರಲ್ಲಿ ಜನ್ಮ ತಳೆದಿದ್ದಾರೆ. ಎಸ್.ಎಸ್.ಎಲ್.ಸಿ ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಧಾರ್ಮಿಕ ಶಿಕ್ಷಣವು ಬಾದಾಮಿ ಶಿವಯೋಗಿ ಮಂದಿರ ಮತ್ತು ಹುಬ್ಬಳ್ಳಿಯಲ್ಲಿರುವ ಮೂರು ಸಾವಿರ ಮಠದಲ್ಲಿ ಅಧ್ಯಯನ ಮಾಡಿ ಮೃತುಂಜಯ ಮಹಾಸ್ವಾಮಿಗಳಿಂದ ಶರಣಧರ್ಮ ತರಬೇತಿಯನ್ನು ಪಡೆದಿದ್ದಾರೆ.
ಶ್ರೀಗಳು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ೧೯೭೬ರಲ್ಲಿ `ಕನ್ನಡ ಕೋಗಿಲೆ' (ಕವನ ಸಂಕಲನ) ೧೯೮೧ರಲ್ಲಿ `ಶಿವಾನಂದ ಸ್ವಾಮಿಗಳ ವಚನಗಳು' (ಆಧುನಿಕ ವಚನ ಸಂಕಲನ) ೨೦೧೩ರಲ್ಲಿ `ಬಸವ ಭಾರತ' (ಪಾದಯಾತ್ರೆ ಮಾಡಿದ ಚಿಂತನಾ ಕೃತಿ) ಕಲ್ಯಾಣ ಕೈಲಾಸ, ಇಷ್ಟಲಿಂಗ ಪೂಜಾ ವಿಧಾನ, ಸಾಮೂಹಿಕ ಪ್ರಾರ್ಥನೆ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಹಾಗೂ ೧೯೭೮ರಲ್ಲಿ ಬರೆದ `ಪತಿವೃತೆಯ ಪ್ರಭಾವ' (ನಾಟಕ) `ಲಿಂಗಾಯತ ಧರ್ಮ ಮತಸ್ಥಾಪಕಕರು: ಬಸವಣ್ಣನವರು.' ಎಂಬ ಕೃತಿಗಳು ಬರೆದಿದ್ದು, ಅವು ಅಪ್ರಕಟಿತವಾಗಿವೆ. ಮತ್ತು ವಿಶ್ವಗುರು ಬಸವಧರ್ಮ ಪ್ರಸಾರ ಕೇಂದ್ರ ಎಂಬ ಪ್ರಕಾಶನದ ವತಿಯಿಂದ ಕೆಲ ಲೇಖಕರ ಕೃತಿಗಳು ಕೂಡ ಪ್ರಕಟಿಸಿದ್ದಾರೆ. ಶ್ರೀಗಳ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ಸಾಹಿತ್ಯಿಕವಾಗಿ ಮಾಡಿದ ಸಾಧನೆಯನ್ನು ಕಂಡು ೨೦೨೦ರಲ್ಲಿ ಚಿತ್ರದುರ್ಗದ ಶ್ರೀ ಮುರುರಾಜೇಂದ್ರ ಮಠದಿಂದ ಶ್ರೀಮುರುಘಶ್ರೀ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ೨೦೧೮ರಲ್ಲಿ ಹಾರಕೂಡದಲ್ಲಿ ನಡೆದ ಬಸವಕಲ್ಯಾಣದ ೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.
ಎಸ್.ಬಿ.ಕುಚಬಾಳ
ಸಾಹಿತಿ ಎಸ್.ಬಿ.ಕುಚಬಾಳ ರವರು ಮೂಲತಃ ವಿಜಾಪುರ ಜಿಲ್ಲೆ ಸಿಂದಗಿಯ ಭೀಮರಾವ ಮತ್ತು ಶಿವನಂದಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೫೧ರಲ್ಲಿ ಜನಿಸಿದ್ದಾರೆ. ಇವರ ಪೂರ್ಣನಾಮ `ಶಿವರಾಯ ತಂದೆ ಭೀಮರಾವ ಕುಚಬಾಳ' ಎಂದಾಗಿದೆ. ಬಿ.ಎ.ಬಿ.ಎಡ್.ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ, ಬೀದರದ ಎಸ್.ಎಸ್.ಎ. ಯೋಜನೆಯ ಸಹಾಯಕ ಸಮನ್ವಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ `ಜನಪದ ಜ್ಯೋತಿ', `ಭೀಮ ಕಿರಣ', `ಸರ್ವ ಶಿಕ್ಷಣ ಅಭಿಯಾನ', `ತಿಳಿದು ನಡಿರಿ ಇನ್ನ', `ರೈತ ಚೂಡಾಮಣಿ', (ಕವನ ಸಂಕಲನಗಳು) `ಅಚ್ಚು ಮೆಚ್ಚಿನ ಬಿಚ್ಚು ಹೂಗಳು' (ಹನಿಗವನ ಸಂಕಲನ) `ಕಲಿಯುಗದ ಕಾಲೇಜಿನ ಹುಡಗಿ' (ಕಾದಂಬರಿ) `ಜಾಗೃತಿ ಜೀವಿ ಪಂಚಶೀಲ ಗವಾಯಿ' ಮತ್ತು `ಜಾನಪದ ದುಂದುಬಿ ಕುಚಬಾಳ' (ತತ್ವಪದ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇಲ್ಲಿಯ `ತಿಳಿದು ನಡಿರಿ ಇನ್ನ' ಕೃತಿ ಕರ್ನಾಟಕ ಸರ್ಕಾರ ಪುಸ್ತಕ ಪ್ರಾಧಿಕಾರದ ಅನುದಾನ ಪಡೆದು ಪ್ರಕಟವಾಗಿದೆ. ಇವರ ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಗೆ ತಾಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಶಿಕ್ಷಣ ರತ್ನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ದುಂದುಬಿ ಪ್ರಶಸ್ತಿ, ಸಂಗೀತ ಶ್ರೀ ಪ್ರಶಸ್ತಿ, ನಾಟಕ ರತ್ನಕರ ಪ್ರಶಸ್ತಿ, ಸಂಗೀತ ಕಲಾ ರತ್ನ ಪ್ರಶಸ್ತಿ, ಜಾನಪದ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಪಂಚಾಕ್ಷರಿ ಜಿ.ಹಿರೇಮಠ
ಹಿರಿಯ ಸಾಹಿತಿ ಪಂಚಾಕ್ಷರಿ ಜಿ.ಹಿರೇಮಠ. ರವರು ಬಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಗರಸಂಗಿ ಗ್ರಾಮದ ಗುರುಸಂಗಯ್ಯಾ ಮತ್ತು ಸಂಗನಬಸ್ಸಮ್ಮಾ ದಂಪತಿಗಳಿಗೆ ದಿನಾಂಕ ೨೧-೧೨-೧೯೫೦ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿಧರರಾಗಿದ್ದು, ೧೯೭೪ರಲ್ಲಿ ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ಗುರುಪಾದ ಶಿವಾಚಾರ್ಯ ಪ್ರೌಢ ಶಾಲೆ ಮುಖ್ಯೋಪಾಧ್ಯಾಯರಾಗಿ ಸೇವೆಗೆ ಸೇರಿ ೨೦೧೦ರಲ್ಲಿ ನಿವೃತ್ತರಾಗಿದ್ದಾರೆ. ಇವರು ೧೯೯೧ರಲ್ಲಿ `ಇಷ್ಟಲಿಂಗ ವೈಜ್ಞಾನಿಕ ಸಮೀಕ್ಷೆ’ ೨೦೦೧ರಲ್ಲಿ `ಮಿನುಗು ನಕ್ಷತ್ರಗಳು’ ೨೦೦೪ರಲ್ಲಿ `ನಮ್ಮ ಶೈಕ್ಷಣಿಕ ಸಮೀಕ್ಷೆ’ (ಲೇಖನ) ೨೦೦೪ರಲ್ಲಿ `ಧರಿನಾಡಿನ ಕಥನ ಗೀತೆಗಳು’ (ಸಂಪಾದನೆ) `ಬಸವಕಲ್ಯಾಣ ಬೆಳಗು’ ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ೧೯೯೦ರಲ್ಲಿ ನವದೆಹಲಿಯಿಂದ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ, ೨೦೨೦ರಲ್ಲಿ ಹಾರಕೂಡ ಸಂಸ್ಥಾನದಿAದ ಕಲ್ಯಾಣ ಕರ್ನಾಟಕ ಶಿಕ್ಷಕ ರತ್ನ ಪ್ರಶಸ್ತಿಗಳು ಪಡೆದಿದ್ದು, ೨೦೦೪ರಲ್ಲಿ ಬಸವಕಲ್ಯಾಣ ತಾಲೂಕಿನ ಧರಿನಾಡು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರ ಲೇಖನ, ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬಸವಕಲ್ಯಾಣದ ಖಾಯಂ ನಿವಾಸಿಯಾಗಿದ್ದಾರೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)