ಮಂಗಳವಾರ, ಜನವರಿ 14, 2025
ಉಮೇಶ ಬಾಬು ಮಠದ
`ಉಬಾಮ' ಎಂಬ ಕಾವ್ಯನಾಮದ ಕವಿ ಉಮೇಶ ಬಾಬು ಮಠದ್ ರವರು ಮೂಲತಃ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಲ್ಲಹಳ್ಳಿ ಗ್ರಾಮದ ಬಸ್ಸಯ್ಯಾ ಮತ್ತು ಏಕಾಂತಮ್ಮ ದಂಪತಿಗಳಿಗೆ ದಿನಾಂಕ ೨೩-೬-೧೯೮೩ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್. ಪದವಿಧರಾದ ಇವರು ಹುಮನಾಬಾದ ನ್ಯಾಯಾಲಯದ ಡಿ.ದರ್ಜೆಯ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೀದರ ಜಿಲ್ಲೆ ಸಾಹಿತಿಗಳ ಒಡನಾಟದಿಂದಲೇ ಸಾಹಿತ್ಯ ರಚಿಸಿ, ಪುಸ್ತಕ ಪ್ರಕಟಿಸಿ ಲೇಖಕರಾಗಿ ಹೊರಹೊಮ್ಮಿದರಿಂದ "ನಾನು ಸಾಹಿತಿಯಾಗಬೇಕಾದರೆ ಬೀದರ ಜಿಲ್ಲೆಯ ಪರಿಸರವೆ ಕಾರಣ ’’ ಎಂದು ಹೇಳುತ್ತಾರೆ. ಮತ್ತು `ವಸುಧೆಯೊಳಗಿನ ಅರ್ಭಟ' (ಕವನಸಂಕಲನ) `ಚಿಗುರೆಲೆಗಳು ' (ಚುಟುಕು ಸಂಕಲನ) `ಸೋತ ಮನಸ್ಸಿಗೆ ಸಮಾಧಾನ' (ಕಥಾಸಂಕಲನ) `ಬೆವರ್ಸಿ ಬದುಕಿನ ಬರಹಗಳು' (ಲೇಖನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು `ನಿತ್ಯ ಸಂಜೀವಿನಿ ಮಂಗಳಾರತಿ' ಎಂಬ ಸಂಪಾದಿತ ಕೃತಿ ಮುದ್ರಣದ ಹಂತದಲ್ಲಿದೆ. ಇವರ ಬರಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಹುಮನಾಬಾದನಲ್ಲಿ ವಾಸವಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ