ಮಂಗಳವಾರ, ಜನವರಿ 14, 2025
ಜಗನ್ನಾಥ ಬೇಂದ್ರೆ
ಕವಿ ಕಲಾವಿದರು ಹಾಗೂ ಹವ್ಯಾಸಿ ಬರಹರಾದ ಜಗನ್ನಾಥ ಬೇಂದ್ರೆಯವರು ಹುಮನಾಬಾದ ತಾಲೂಕಿನ ಮೋಳಕೇರಾ ಗ್ರಾಮದ ಸಂಬಣ್ಣ ಮತ್ತು ಶಾಂತಾಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ್ದಾರೆ. ಎಂ.ಎ.ಕನ್ನಡ ಹಿಂದೂಸ್ತಾನಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಮಂಠಾಳ ಪ್ರೌಢಶಾಲಾ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವರಚಿತ ಹಾಡು ಪದ್ಯಗಳನ್ನು ಬರೆದು ಹಾಡುವ ಆಕಾಶವಾಣಿ ಕಲಾವಿದರಾಗಿ ಹೆಸರು ವಾಸಿಯಾಗಿದ್ದಾರೆ. ಇವರು ಕಲಬುರಗಿ ಆಕಾಶವಾಣಿಯಿಂದ ಅನೇಕ ಭಾವ ಗೀತೆ, ಭಕ್ತಿ ಗೀತೆಗಳನ್ನು ಹಾಡಿ ಕೇಳುಗರ ಮನರಂಜಿಸಿದ್ದಾರೆ. ಇವರಿಗೆ ೨೦೦೬ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ರತ್ನ, ಸಂಗೀತ ಶ್ರೀ, ಬಸವ ಬೆಳಗು, ಕನ್ನಡ ಸೇವಾ ರತ್ನ' ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ