ಮಂಗಳವಾರ, ಜನವರಿ 14, 2025
ಡಾ.ಮಹಾನಂದಾ ಮಡಕೆ
ಉದಯೋನ್ಮುಖ ಬರಹಗಾರ್ತಿಯಾದ ಡಾ.ಮಹಾನಂದಾ ಮಡಕೆ ಯವರು ಕಲಬುರಗಿಯ ಶಿವಶರಣಪ್ಪ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೯-೯-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಇಡಿ. ಎಂ.ಫೀಲ್. ಪಿಎಚ್.ಡಿ ಪದವಿಧರರಾದ ಇವರು ಬೀದರದ ಕರ್ನಾಟಕ ಪದವಿ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕವನ, ಲೇಖನ, ಹನಿಗವನಗಳು ಬರೆದು ಕವಯತ್ರಿಯಾಗಿ ಗುರುತಿಸಿಕೊಂಡಿದ್ದಾರೆ. `ಜಾನಪದ ಮಹಿಳೆ', `ಪ್ರೊ.ವೀರೇಂದ್ರ ಸಿಂಪಿ’, `ಬೆಳ್ಳಿ ದಾಂಪತ್ಯ.'. ಎಂಬ ಕೃತಿಗಳು ರಚಿಸಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳು ಮಂಡಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಿಂದ ಶಿಕ್ಷಣ ಶ್ರೀ ಪ್ರಶಸ್ತಿ, ಶಿಕ್ಷಣ ರತ್ನ ಪ್ರಶಸ್ತಿ, ಕಮಲಾಪೂರದಿಂದ ಮನುಕುಲ ರತ್ನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಕೆ.ಖಂಡೊಬಾ ಪ್ರಶಸ್ತಿ, ಮತ್ತು ಚಿನ್ನದ ಪದಕ, ಮತ್ತು ಎಂ.ಎ. ಸ್ನಾತಕ್ಕೊತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಇವರು ಅಣ್ಣಾ ಹಜಾರೆ ರಾಷ್ಟ್ರೀಯ ಪ್ರಶಸ್ತಿ. ಆರ್.ವಿ.ಬಿಡಪ್ ಶಿಷ್ಯ ವೇತನ ಪ್ರಶಸ್ತಿಗಳು ಪಡೆದಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ