ಮಂಗಳವಾರ, ಜನವರಿ 14, 2025
ಅನುರಾಧ ಕೆ.ಪೊದ್ದಾರ
ಉದಯೋನ್ಮುಖ ಕವಯತ್ರಿಯಾದ ಅನುರಾಧ ಕೆ.ಪೊದ್ದಾರ ರವರು ಹುಮನಾಬಾದ ತಾಲೂಕಿನ ಕಂದಗೂಳ ಗ್ರಾಮದ ಗೋಪಾಳರಾವ ಕುಲಕರ್ಣಿ ಮತ್ತು ಶೈಲಜಾ ಕುಲಕರ್ಣಿ ದಂಪತಿಗಳಿಗೆ ದಿನಾಂಕ ೨೭-೧೦-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ. ಬಿಎಡ್. ಪದವಿಧರರಾದ ಇವರು ಹುಮನಾಬಾದಿನ ಶ್ರೀ ಕಾಳೂರ ಲಿಂಗೇಶ್ವರ (ಸಿ.ಬಿ.ಎಸ್.ಸಿ) ಶಾಲೆಯ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿಯನ್ನು ಹೊಂದಿದ ಇವರು ವಿಶೇಷವಾಗಿ ಕಾವ್ಯ ರಚನೆ ಮಾಡುವುದರಲ್ಲಿ ತೊಡಗಿ ನೂರಾರು ಕವನ, ಆಧುನಿಕ ವಚನ ಲೇಖನಗಳನ್ನು ಬರೆದಿದ್ದಾರೆ. ಇವರ ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಸಾಹಿತ್ಯ ಸಮ್ಮೇಳನದಲ್ಲಿಯು ಪಾಲ್ಗೊಂಡು ತಮ್ಮ ಕವನಗಳ ವಾಚನ ಮಾಡಿದ್ದಾರೆ. ಆದ್ದರಿಂದ ಇವರಿಗೆ ವಿವಿಧ ಸಂಘ ಸಂಸ್ಥೆಯವರು ಇವರ ಕಾವ್ಯ ಕೃಷಿಯನ್ನು ಕಂಡು ಹಲವು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ