ಪುಟಗಳು

ಮಂಗಳವಾರ, ಜನವರಿ 14, 2025

ಚನ್ನಪ್ಪ ಸಂಗೂಳಗಿ

ಉದಯೋನ್ಮುಖ ಬರಹಗಾರ ಚನ್ನಪ್ಪ ಸಂಗೂಳಗಿಯವರು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಗಣಪತರಾವ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೫-೫-೧೯೭೭ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿಧರರಾದ ಇವರು ೧೯೯೬ರಿಂದ ಬೀದರದ ಚಿದಂಬರ ಆಶ್ರಮ ಸಂಸ್ಥೆಯ ಎನ್.ಕೆ.ಜೆ.ಆಯುರ್ವೇದಿಕ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕತೆ, ಕವನ, ಚುಟುಕು, ಲೇಖನ, ಹನಿಗವನಗಳ ರಚನೆಯಲ್ಲಿ ತೊಡಗಿ `ಪ್ರೇಮ ಕಾರಂಜಿ' ಎಂಬ ಕವನ ಸಂಕಲನ ಮತ್ತು `ನೆನಪಿನ ಅಂಗಳ' ಎಂಬ ಕಥಾ ಸಂಕಲನ ಬರೆದಿದ್ದು, ಅವು ಅಪ್ರಕಟಿತವಾಗಿವೆ. ಇವರು ಬೆಂಗಳೂರಿನ ಸ್ವರಾಜ ಪತ್ರಿಕೆಯ ಜಿಲ್ಲಾ ವರದಿಗಾರರಾಗಿಯು ಸೇವೆ ಸಲ್ಲಿಸಿದ್ದು ಆ ಪತ್ರಿಕೆ ಸೇರಿದಂತೆ ವಚನ ಕ್ರಾಂತಿ, ಪಬ್ಲಿಕ್ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮತ್ತು ಇವರು ಅಖಿಲ ಸಾಹಿತ್ಯ ಶರಣ ಸಾಹಿತ್ಯ ಪರಿಷತ್ತು ಹಾಗೂ ಧರಿನಾಡು ಕನ್ನಡ ಸಂಘದ ಕಾರ್ಯದರ್ಶಿಯಾಗಿ, ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಲ್ಯಾಣ ಕರ್ನಾಟಕ ವಿಭಾಗಿಯ ಕಾರ್ಯಾಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದಾರೆ. ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ಸಲ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರಿಗೆ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಿದೆ. ಮತ್ತು ವಿವಿಧ ಕನ್ನಡ ಪರ ಸಂಘ ಸಂಸ್ಥೆಯವರು ಸೇವಾ ರತ್ನ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಆರೂಢ ಪ್ರಶಸ್ತಿ, ಚುಟುಕು ಮಂದಾರ ರತ್ನ ಪ್ರಶಸ್ತಿ, ಚುಟುಕು ಚಂದ್ರಿಕೆ ಪ್ರಶಸ್ತಿ, ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ