ಪುಟಗಳು

ಮಂಗಳವಾರ, ಜನವರಿ 14, 2025

ಡಾ. ಐಶ್ವರಿ ಶಂಭುಶಂಕರ

ಉದಯೋನ್ಮುಖ ಲೇಖಕಿ ಡಾ. ಐಶ್ವರಿ ಶಂಭುಶಂಕರ. ರವರು ಹುಮನಾಬಾದಿನ ರಾಮಚಂದ್ರಪ್ಪ ವೀರಪ್ಪನವರ ಓಣಿಯ ಶಿವರಾಯ ಮತ್ತು ತುಳಸಮ್ಮರ ದಂಪತಿಗಳಿಗೆ ದಿನಾಂಕ ೧೫-೧-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ಹುಮನಾಬಾದಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ಲೇಖನ ಮೊದಲಾದ ಬರಹಗಳು ಬರೆದಿದ್ದು,ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. `ಹೈದ್ರಾಬಾದ ಕರ್ನಾಟಕ ಪ್ರಕಟಿತ ಮಹಿಳಾ ಸಂಶೋಧನೆ, ಬೀದರ ಜಿಲ್ಲೆಯ ದಲಿತ ತತ್ವಪದಕಾರರು, ಹಾಗೂ `ತತ್ವ ಪದ ಸಾಹಿತ್ಯ' ಕುರಿತ ಇವರ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ