ಪುಟಗಳು

ಮಂಗಳವಾರ, ಜನವರಿ 14, 2025

ವಿಜಯಕುಮಾರ ಚಟ್ಟಿ

ಹವ್ಯಾಸಿ ಬರಹಗಾರ ವಿಜಯಕುಮಾರ ಚಟ್ಟಿ ಯವರು `ವಿಚಂಚೆ’ ಎಂಬ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿದ್ದಾರೆ. ಮತ್ತು `ಶ್ರೀವಿಜಯಾನಂದ’ ಎಂಬ ಅಂಕಿತನಾಮದಲ್ಲಿ ಆಧುನಿಕ ವಚನಗಳು ಬರೆದಿದ್ದಾರೆ. ಹುಮನಾಬಾದಿನ ಚಂದ್ರಶೇಖರ ಚಟ್ಟಿ ಮತ್ತು ಜಯಶ್ರೀ ದಂಪತಿಗಳಿಗೆ ದಿನಾಂಕ-೧೧-೭-೧೯೭೪ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಪದವಿಧರರಾದ ಇವರು ಬೋಧಿವೃಕ್ಷ ಪದವಿ ಮಹಾವಿದ್ಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಹನಿಗವನ ಲೇಖನಗಳನ್ನು ಬರೆದಿದ್ದಾರೆ. ಅವು ಕರ್ಮವೀರ, ಸಂಯುಕ್ತ ಕರ್ನಾಟಕ, ವಿಜಯವಾಣಿ ಈ ಭಾನುವಾರ, ಜನಪದ ಮುಂತಾದ ಪತ್ರಿಕೆಯಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ