ಮಂಗಳವಾರ, ಜನವರಿ 14, 2025
ಪ್ರಭು ಬಿ ಮಾಲೆ
ಉದಯೋನ್ಮುಖ ಕವಿ, ಕಲಾವಿದರಾದ ಪ್ರಭು ಬಿ.ಮಾಲೆ ರವರು ಹುಮನಾಬಾದ ತಾಲೂಕಿನ ಹುಡುಗಿ ಗ್ರಾಮದ ಬಂಡೆಪ್ಪಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ವೃತ್ತಿಪರ ಕಲಾವಿದರಾಗಿದ್ದಾರೆ. ಸಾಹಿತ್ಯದಲ್ಲಿಯು ಆಸಕ್ತರಾಗಿ ಕವನ, ಹಾಡು, ವಚನ, ಪದ್ಯಗಳನ್ನು ರಚನೆ ಮಾಡಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಇವರು ಕೆಲ ವರ್ಷ ಸಾಕ್ಷರತಾ ಸಂಯೋಜಕರಾಗಿ, ನವಚೇತನ ಕಲಾ ತಂಡದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸರ್ಕಾರಿ ಇಲಾಖೆಗಳ ವತಿಯಿಂದ ಜನಜಾಗೃತಿಗಾಗಿ ಬೀದಿ ನಾಟಕ, ಹಾಡು, ರೂಪಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಆರೋಗ್ಯ, ಕೃಷಿ, ಶಿಕ್ಷಣ, ಸಾಕ್ಷರತೆ, ಚುನಾವಣೆ, ನೀರು ಮತ್ತು ನೈರ್ಮಲ್ಯ, ಬಾಲ್ಯ ವಿವಾಹ, ವರದಕ್ಷಿಣೆ, ಬಾಲ ಕಾರ್ಮಿಕ, ಜೀತ ಪದ್ಧತಿ, ಮೂಢನಂಬಿಕೆ ಮೊದಲಾದ ವಿಷಯಗಳ ಕುರಿತಾದ ಬೀದಿ ನಾಟಕಗಳನ್ನು ರಚಿಸಿ ಸ್ವತಃ ಪಾತ್ರವನ್ನು ಮಾಡಿದ್ದಾರೆ. `ಅಪ್ಪ ನನ್ನ ಹೊಡೆಯಬೇಡಪ್ಪ' ಎಂಬ ಶಿಕ್ಷಣ ಇಲಾಖೆಯಡಿ ಪ್ರದರ್ಶಿಸಿದ ಬೀದಿ ನಾಟಕ ಸೇರಿದಂತೆ ಮೊದಲಾದ ಕವನ, ಲೇಖನ, ಬರಹಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ