ಮಂಗಳವಾರ, ಜನವರಿ 14, 2025
ಸದಾಶಿವಯ್ಯಾ ಎಸ್. ಹಿರೇಮಠ
ಹವ್ಯಾಸಿ ಬರಹಗಾರ ಸದಾಶಿವಯ್ಯಾ ಎಸ್.ಹಿರೇಮಠ ರವರು ಹುಮನಾಬಾದ ತಾಲೂಕಿನ ಕಠಳ್ಳಿ ಗ್ರಾಮದ ಸೋಮಶೇಖರಯ್ಯಾ ಮತ್ತು ಶಕುಂತಲಾಬಾಯಿ ದಂಪತಿಗಳಿಗೆ ದಿನಾಂಕ ೪-೧೧-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಕೆಲಕಾಲ ಸಿ.ಆರ್.ಪಿ.ಯಾಗಿ, ಡಿ.ಪಿ.ಇ.ಪಿ.ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ಸೇವೆ ಸಲ್ಲಿಸಿದ ಇವರು ಹಳ್ಳಿ ಖೇಡ (ಕೆ) ವಲಯ ಕಸಾಪ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದಾರೆ. ಮತ್ತು ಸದ್ಯ ಶಿಕ್ಷಣ ಇಲಾಖೆಯ ಆರ್.ಪಿ.ಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕವನ , ಲೇಖನ, ಹನಿಗವನ, ಪ್ರಬಂಧ, ಮೊದಲಾದವು ರಚಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ