ಪುಟಗಳು

ಮಂಗಳವಾರ, ಜನವರಿ 14, 2025

ಪ್ರೊ.ಜೈರಾಜ ಚಿಕ್ಕ ಪಾಟೀಲ್

ದೃಶ್ಯ ಕಲಾವಿದ, ಚಿತ್ರಕಾರ, ಸಾಹಿತಿಯಾದ ಪ್ರೊ.ಜೈರಾಜ ಚಿಕ್ಕ ಪಾಟೀಲ್. ರವರು ಹುಮನಾಬಾದ ತಾಲೂಕಿನ ನಿಂಬೂರು ಗ್ರಾಮದ ಮಡಿವಾಳಪ್ಪ ಮತ್ತು ವಿಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೭೦ರಲ್ಲಿ ಜನಿಸಿದ್ದಾರೆ. ದೃಶ್ಯ ಕಲಾ ವಿಷಯದಲ್ಲಿ ಎಂ.ಎಫ್.ಎ. ಮತ್ತು ಪಿ.ಎಚ್.ಡಿ ಪದವಿ ಪಡೆದ ಇವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ದೃಶ್ಯ ಕಲಾ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರಕಲೆಯೊಂದಿಗೆ ಕಾವ್ಯ ರಚನೆಯಲ್ಲೂ ಇವರದು ಎತ್ತಿದ ಕೈ ನಾಡಿನಾದ್ಯಂತ ಕವನ ಸ್ಪರ್ಧೆಯಲ್ಲಿ ಹಲವಾರು ಬಹುಮಾನ, ಪ್ರಶಸ್ತಿ ಪಡೆದ ಇವರು ಪ್ರತಿ ತಿಂಗಳು ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಗಳಿಗೆ ಕವನ, ಹನಿಗವನಗಳು ಪ್ರಕಟಿಸಿ ಖ್ಯಾತಿ ಹೊಂದಿದ್ದಾರೆ. ತೊಂಬತ್ತರ ದಶಕದಲ್ಲಿಯೇ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡು ನಾಡಿನಾದ್ಯಂತ ಹೆಸರು ಮಾಡಿದ ಬೀದರದ ಕೆಲವೇ ಕೆಲವು ಸಾಹಿತಿಗಳಲ್ಲಿ ಇವರ ಹೆಸರು ಎದ್ದು ತೋರುತ್ತದೆ. ಇವರ ಬರಹಗಳು ಕರ್ಮವೀರ, ತುಷಾರ, ತರಂಗ, ಮಯೂರ, ಸುಧಾ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಮತ್ತು ೧೯೯೧ರಲ್ಲಿ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ `ಜನ್ಮ ಶತಾಬ್ದಿ' ಅಂಗವಾಗಿ ಪ್ರಕಟಿಸಿದ ರಾಜ್ಯ ಮಟ್ಟದ ಕವನ ಸಂಕಲನದಲ್ಲಿ ಇವರ `ಜೀವನದ ಅರ್ಥ, ಎಂಬ ಕವನ ಆಯ್ಕೆಯಾದರೆ ೧೯೯೬ರಲ್ಲಿ ಬೆಂಗಳೂರಿನಿAದ ಪ್ರಕಟವಾದ `ಎರಡು ಬಳ್ಳಿ, ಹೂ ಹಲವು, ಎಂಬ ಕವಿತೆ ಆಯ್ಕೆಯಾಗಿ ಪ್ರಕಟಾಗಿದೆ.ಮತ್ತು ೨೦೦೧ರಲ್ಲಿ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಜ್ಞಾನಸೂರ್ಯ ತರುಣ ಸಂಘ, ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ `ಜಗಳ' ಎಂಬ ಕವಿತೆ ಆಯ್ಕೆಯಾಗಿ `ಜ್ಞಾನಸೂರ್ಯ' ಕವನಸಂಕಲನದಲ್ಲಿ ಪ್ರಕಟವಾಗಿದೆ. ಈ ಕೃತಿ ಮಚ್ಚೇಂದ್ರ ಪಿ ಅಣಕಲ್. ರವರು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ಕೆಲ ಕನ್ನಡಪರ ಸಂಘ ಸಂಸ್ಥೆಗಳ ವತಿಯಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ