ಪುಟಗಳು

ಮಂಗಳವಾರ, ಜನವರಿ 14, 2025

ಪ್ರಶಾಂತ ಹೊಸಮನಿ.

ಪತ್ರಕರ್ತ ಹಾಗೂ ಯುವ ಬರಹಗಾರರಾದ ಪ್ರಶಾಂತ ಹೊಸಮನಿ ಯವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೋರಾಳ ಗ್ರಾಮದ ಮಾರುತಿರಾವ ಮತ್ತು ಸುಂದ್ರಮ್ಮ ದಂಪತಿಗಳಿಗೆ ದಿನಾಂಕ ೫-೬-೧೯೮೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೨೦೦೨ರಿಂದ ಪತ್ರಕರ್ತರಾಗಿ ವಚನಕ್ರಾಂತಿ, ಬೀದರ ಕ್ರಾಂತಿ, ಸಂಜೆವಾಣಿ, ಜನದನಿ, ವಿಶ್ವವಾಣಿ, ಪ್ರಜಾವಾಣಿ, ಕರ್ನಾಟಕ ಸಂದ್ಯಾ ಕಾಲ ಪತ್ರಿಕೆಗಳ ವರದಿಗಾರರಾಗಿ, ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಅನೇಕ ಕವನ, ಲೇಖನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ