ಮಂಗಳವಾರ, ಜನವರಿ 14, 2025
ಓಂಕಾರ ಎನ್. ಮಠಪತಿ
ಯುವ ಬರಹಗಾರ, ಪತ್ರಕರ್ತರಾದ ಓಂಕಾರ ಮಠಪತಿಯವರು. ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದ ವೇದಮೂರ್ತಿ ನಾಗಯ್ಯ ಸ್ವಾಮಿ ಮಠಪತಿ ಮತ್ತು ಸಂಗಮ್ಮ ನಾಗಯ್ಯ ಸ್ವಾಮಿ ಮಠಪತಿ ದಂಪತಿಗಳಿಗೆ ದಿನಾಂಕ ೨೫-.೬-೧೯೭೬ರಲ್ಲಿ ಜನಿಸಿದ್ದಾರೆ. ಡಿ.ಫಾರ್ಮಸಿ, ಎಂ.ಎ ಪತ್ರಿಕೋದ್ಯಮ ಪದವಿಧರರಾದ ಇವರು ಕೆಲ ವರ್ಷ ಸಂಯುಕ್ತ ಕರ್ನಾಟಕ, ಸಂಜೆವಾಣಿ, ಪತ್ರಿಕೆಯ ವರದಿಗಾರರಾಗಿ, ನಂತರ ಸುವರ್ಣ, ಸಮಯ ಚಾನಲ್ಗಳ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿ ಸದ್ಯ ಬಿ.ಟಿವಿಯ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ ಲೇಖನ ಇತ್ಯಾದಿ ಬರಹಗಳು ಬರೆದಿದ್ದು ಅವು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ ಮತ್ತು ಪತ್ರಿಕಾ ರಂಗದ ಸೇವೆಯನ್ನು ಕಂಡು ರಾಜ್ಯದಾದ್ಯಂತ ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ತೀರ ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿರುವ ಇವರು ಸುದ್ದಿ ವಿಷಯದಲ್ಲಿ ಎಂದೂ ರಾಜಿಮಾಡಿಕೊಂಡಿಲ್ಲ ಎಂಬುದು ಮೆಚ್ಚುವಂತಹದ್ದು. ಯಾವುದೇ ವಿಷಯ ಇದ್ದರೂ ತೀರ ಹರಿತವಾಗಿ ಬರೆದು ಬಿತ್ತರಿಸುತ್ತಿರುವುದು ರಾಜ್ಯದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇವರು ಬರೆದ ಬರಹಗಳು ಪುಸ್ತಕ ರೂಪದಲ್ಲಿ ಹೊರತರುವ ನಿಟ್ಟಿನಲ್ಲಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ