ತತ್ವಪದಕಾರ ಹಾಗೂ ಗಾಯಕ ಗುಂಡಪ್ಪ ಬೆಳ್ಳೂರು ರವರು ಬೀದರದ ಹಾರೂರಗೇರಿಯ ಭೀಮಣ್ಣ ಮತ್ತು ಕಲ್ಲಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ೧೯೩೦ರಲ್ಲಿ ಜನಿಸಿದ್ದಾರೆ. ತುಂಬ ಬಡತನದಲ್ಲಿ ಹುಟ್ಟಿ ಬೆಳೆದ ಇವರು ಹಳ್ಳಿಯಲ್ಲಿ ಕೆಲಸವಿಲ್ಲದೆ ಬದುಕು ದುಸ್ಥರವಾದಾಗ ಬೇರೆ ಊರಿನಿಂದ ಬೀದರಗೆ ವಲಸೆ ಬಂದು ಹಾರೂರಗೇರಿಯಲ್ಲಿ ನೆಲೆಸಿದ್ದಾರೆ. ಇವರು ತಿಪರಂತಿ ಮಾಸ್ತರರ ಶಿಷ್ಯರಾಗಿದ್ದು ಅನೇಕ ಹಾಡು, ಪದ್ಯ, ಅಧ್ಯಾತ್ಮಿಕ ಅನುಭಾವ ಗೀತೆಗಳನ್ನು ರಚಿಸಿದ್ದಾರೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ