ಪುಟಗಳು

ಮಂಗಳವಾರ, ಜನವರಿ 14, 2025

ಜ್ಞಾನೇಶ್ವರಿ ಹಳ್ಳಿಖೇಡ

ಯುವ ಕವಯತ್ರಿಯಾದ ಜ್ಞಾನೇಶ್ವರಿ ಹಳ್ಳಿಖೇಡ್ ರವರು ಚಿಟಗುಪ್ಪ ತಾಲೂಕಿನ ಮನ್ನಾಐಖೇಳಿ ಗ್ರಾಮದ ಮಾಣಿಕಪ್ಪ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೧೫-೮-೧೯೯೮ರಲ್ಲಿ ಜನಿಸಿದ್ದಾರೆ. ಬಿ.ಎ. ಎಂ.ಎಸ್ .ಪದವಿ ವಿದ್ಯಾರ್ಥಿನಿಯಾದ ಇವರು ಶಿವಮೊಗ್ಗದ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕಾಲೇಜು ಸೇರಿದ ನಂತರ ಕತೆ, ಕವನ,ಲೇಖನ, ಹನಿಗವನ ರಚನೆಯಲ್ಲಿ ತೊಡಗಿ ವೈದ್ಯ ಸಾಹಿತ್ಯಕ್ಕೆ ಸಂಬAಧಿಸಿದ ಶಾರೀರಿಕ ಸಮಸ್ಯೆ ಮತ್ತು ಆಹಾರ ಪದ್ದತಿಯ ಕುರಿತಾದ ಲೇಖನಗಳು ಮತ್ತು ಸಾಮಾಜಿಕ ಶೋಷಣೆಯ ವಿರುದ್ಧದ ಕವಿತೆಗಳು ಬರೆಯುತ್ತಿದ್ದಾರೆ. ಮತ್ತು `ಭಾವದಲೆ' ಎಂಬ ಕವನ ಸಂಕಲನವೊAದು ಬರೆದಿದ್ದು ಅದು ಅಪ್ರಕಟಿತವಾಗಿದೆ. ಇವರ ಬರಹಗಳು ಶಿವಮೊಗ್ಗದ `ನಿಮಗಾಗಿ ಆಯುರ್ವೇದ' ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರು ಹಲವಾರು ವಿವಿಧ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ