ಪುಟಗಳು

ಮಂಗಳವಾರ, ಜನವರಿ 14, 2025

ದಿ.ತುಕಾರಾಮ ಅಲ್ಲೂರ

ಕಾವ್ಯ, ತತ್ವಪದ, ಮೊಹರಮ್ ಪದಗಳು ರಚನೆ ಮಾಡಿರುವ ಸಾಹಿತಿ ದಿ.ತುಕಾರಾಮ ಅಲ್ಲೂರ್. ಇವರು ಹುಮನಾಬಾದ ತಾಲೂಕಿನ ಅಲ್ಲೂರ್ ಗ್ರಾಮದ ಸಾಯಬಣ್ಣಾ ಮತ್ತು ರೇವಮ್ಮಾ ದಂಪತಿಗಳಿಗೆ ೧೯೩೫ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಆಂಧ್ರಪ್ರದೇಶದ ಪಂಚಾಯತ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ೧೯೯೦ರಲ್ಲಿ ನಿಧನರಾಗಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳೆರಡರಲ್ಲೂ ಪಾಂಡಿತ್ಯ ಹೊಂದಿದ ಇವರು ಕನ್ನಡದಲ್ಲಿ ತತ್ವಪದ, ಭಜನೆ ಪದ, ಜಾನಪದ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ