ಮಂಗಳವಾರ, ಜನವರಿ 14, 2025
ಕನ್ಯಾಕುಮಾರಿ
ಕವಯತ್ರಿಯಾದ ಕನ್ಯಾಕುಮಾರಿ ಯವರು. ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದ ಶಾಂತಪ್ಪಾ ದೇವರಾಯ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೨-೭-೧೯೬೯ರಲ್ಲಿ ಜನಿಸಿದ್ದಾರೆ. ಎಂ. ಎ ಸ್ನಾತಕೋತ್ತರ ಪದವಿಧರರಾಗಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಶಾಂತಪ್ಪ ದೇವರಾಯ `ದೇಶಾಂಶ ಹುಡಗಿ' ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿ ಖ್ಯಾತರಾಗಿದ್ದಾರೆ. ಅವರ ಮಗಳಾದ ಇವರು ಕತೆ, ಕವನ, ಚುಟುಕು, ಲೇಖನ, ಆಧುನಿಕ ವಚನ ಮೊದಲಾದ ಪ್ರಕಾರದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಇವರ ಬರಹಗಳು ರಾಜ್ಯ ಮಟ್ಟದ ಕೆಲ ಪತ್ರಿಕೆ ಹಾಗೂ ಪ್ರಾತಿನಿಧೀಕ ಸಂಕಲನ ಮತ್ತು ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಬೀದರ ಜಿಲ್ಲೆಯ ವಿವಿಧ ಸಾಹಿತ್ಯಕ ಸಭೆ ಸಮಾರಂಭದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಉತ್ತಮ ನಿರೂಪಕಿಯಾಗಿಯು ಗುರುತಿಸಿಕೊಂಡಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ