ಮಂಗಳವಾರ, ಜನವರಿ 14, 2025
ಸೂರ್ಯಕಲಾ ಎಸ್. ಹೊಡಮನಿ
ಕವಯತ್ರಿ ಸೂರ್ಯಕಲಾ ಎಸ್.ಹೊಡಮನಿ. ರವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಚಾಂಡೆಶ್ವರಿ ಗ್ರಾಮದ ಶಿವಲಿಂಗಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೨-೨-೧೯೬೬ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎ. ಪದವಿಧರರಾದ ಇವರು ೧೯೯೨ರಿಂದ ಹುಮನಾಬಾದ ತಾಲೂಕಿನ ಹಳ್ಳಿಖೇಡ್ (ಬಿ) ಗ್ರಾಮದ ಅನುದಾನಿತ ಭಾಯಿ ಬನ್ಸಿಲಾಲ್ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಇವರು ವಿವಾಹವಾದ ನಂತರ ತಮ್ಮ ಪತಿ ಎಸ್.ಎಸ್.ಹೊಡಮನಿಯವರ ಸಾಹಿತ್ಯಕ್ಕೆ ಮಾರುಹೋಗಿ ಕವಿತೆ ಬರೆಯಲು ಪ್ರಾರಂಭಿಸಿರುವುದು ಅವರ ಉತ್ತಮ ಸಾಹಿತ್ಯಿಕ ಬೆಳವಣಿಗೆಯಾಗಿದೆ. ಈ ಇಬ್ಬರು ಸತಿಪತಿಗಳು ಕೂಡಿಕೊಂಡು ಹಲವಾರು ಕವನಗಳು ರಚಿಸಿದ್ದು, ಅವು ಓದುಗರ ಮನಸೂರೆಗೊಳಿಸಿವೆ. ಇವರು `ಅಮ್ಮಾ' ಎಂಬ ಕವನ ಸಂಕಲನವನ್ನು ಬರೆದಿದ್ದು, ಅಲ್ಲದೆ ಇನ್ನೂ ಹಲವಾರು ಕವನ,ಲೇಖನ, ಜಾನಪದ ಸಂಪಾದಿತ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಮತ್ತು ಜನಪದ ಶೈಲಿಯಲ್ಲಿ ಕೆಲ ಕತೆಗಳು ಕೂಡ ಬರೆದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ