ಮಂಗಳವಾರ, ಜನವರಿ 14, 2025
ಶಿವರಾಜ ಪಿ.ಕಿಣಗಿ
ಅಧ್ಯಾತ್ಮಿಕ ತಳಹದಿಯಲ್ಲಿ ಬರೆಯುತ್ತಿರುವ ಶಿವರಾಜ ಪಿ.ಕಿಣಗಿಯವರು ಹುಮನಾಬಾದ್ ತಾಲೂಕಿನ ಕಲ್ಲೂರು ಗ್ರಾಮದ ಪೀರಪ್ಪ ಮತ್ತು ಕಾಶಮ್ಮ ದಂಪತಿಗಳಿಗೆ ದಿನಾಂಕ ೧-೨-೧೯೫೮ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಹುಮನಾಬಾದಿನ ಶ್ರೀ ಬೀರಲಿಂಗೇಶ್ವರ ಪ.ಪಂ.ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತರಾಗಿರುವುದರಿಂದ ಭಜನೆ ಪದಗಳನ್ನು ಹಾಡುತ್ತಾ ಬೆಳೆದವರು. ಬರು ಬರುತ್ತಾ ಭಜನೆ ಹಾಡುಗಳನ್ನು ಬರೆಯಲು ಸುರುಮಾಡಿ ತಮ್ಮದೆ ರಾಗ ಧಾಟಿಯಲ್ಲಿ ಹಾಡಿ ಅನೇಕ ವೈಚಾರಿಕ ಲೇಖನಗಳು ಬರೆದಿದ್ದಾರೆ. `ಕೇಳಿಸುತ್ತಿದೆಯೇ ಧರ್ಮದ ಹೂಂಕಾರ', `ಗುರುವಿನ ಗುರುತು', `ಯುವಕರಿಗೆ ಕರೆ', `ಜಾತಿ ವ್ಯವಸ್ಥೆ ಒಂದು ಸಮಸ್ಯೆಯೇ?', `ದೇವರಾಗುವ ದಾರಿ', `ನಾನು ಯಾರು?', `ಪ್ರೇಮವೇ ಪರಮೇಶ್ವರ', `ಭಜನೆ ಪದಗಳು' ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ