ಸೋಮವಾರ, ಜನವರಿ 13, 2025
ವೀರಣ್ಣ ಕುಂಬಾರ
ಸಾಹಿತಿ ವೀರಣ್ಣ ಕುಂಬಾರ ರವರು ಕಲಬುರಗಿ ಜಿಲ್ಲೆ ಶಹಾಬಾದ ತಾಲ್ಲೂಕಿನ ಭಂಕೂರು ಗ್ರಾಮದ ಬಸಣ್ಣ ಮತ್ತು ಬಸಮ್ಮ ದಂಪತಿಗಳಿಗೆ ದಿನಾಂಕ ೨೫-೨-೧೯೫೪ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಇಂಜಿನಿಯರಿAಗ್ ಪದವೀಧರರಾದ ಇವರು ಕೆಲವರ್ಷ ಶಹಾಬಾದಿನ ಎ.ಬಿ.ಎಲ್. ಸಿಮೆಂಟ್ ಕಾರ್ಖಾನೆಯಲ್ಲಿ ಇಂಜಿನಿಯರಿAಗ್ ಸೇವೆ ಸಲ್ಲಿಸಿ ೧೯೯೮ರಲ್ಲಿ ಸ್ವಯಂ ನಿವೃತ್ತಿ ಹೊಂದಿದ್ದಾರೆ. ಸೋಲಾರ್ ಎನರ್ಜಿ ಪ್ರೊಜೆಕ್ಟ್ ನಿಮಿತ್ತವಾಗಿ ಬೀದರಿಗೆ ಆಗಮಿಸಿದ ಇವರು ಇಲ್ಲಿಯ ಕಲೆ ಸಾಹಿತ್ಯ ಬಸವ ಸಂಸ್ಕೃತಿ ಮೈಗೂಡಿಸಿಕೊಂಡು, `ಶರಣ ಕುಂಬಾರ ಗುಂಡಯ್ಯ, ಗುರುಪಾದ ಗಂಗೆ, ಶೀವರೇಖಾ, ಚೆನ್ನಯ್ಯನ ಮಗ ನಾನಯ್ಯ, ಸಾತ್ವಿಕ,' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಭಾಲ್ಕಿಯ ಶಾಂತಿ ಕಿರಣ (ದ್ವೈಮಾಸಿಕ) ಜ್ಯೋತಿ ಮುಟ್ಟಿದ ಬುತ್ತಿ, ಬಸವ ಬಳ್ಳಿ, ಇವು ಇವರ ಸಹ ಸಂಪಾದಕತ್ವದಲ್ಲಿ ಪ್ರಕಟಿಸಿದ್ದಾರೆ. ಹಾಗೂ `ಹಿರೇಮಠ ಸಂಸ್ಥಾನ ಒಂದು ಅಧ್ಯಯನ, ಬೀದರ ಜಿಲ್ಲೆಯ ತಾಡೋಲೆ ಮತ್ತು ಹಸ್ತಪ್ರತಿ ಸಂಗ್ರಹ, ಬೀದರ ಜಿಲ್ಲೆಯ ತತ್ವ ಪದಕಾರರ ತತ್ವ ಪದಗಳು,’ ಎಂಬ ಕೃತಿಗಳು ಸಂಪಾದಿಸಿ ನೂರಾರು ಶರಣರ ವಚನಗಳಿಗೆ ವ್ಯಾಖ್ಯಾನಗಳು ಬರೆದಿದ್ದಾರೆ. ಸದ್ಯ ಇವರು ಭಾಲ್ಕಿಯ ನಿವಾಸಿಯಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ