ಪುಟಗಳು

ಸೋಮವಾರ, ಜನವರಿ 13, 2025

ಡಾ.ಸೋಮನಾಥ ಯಾಳವಾರ

ಹಿರಿಯ ಸಾಹಿತಿ ಡಾ.ಸೋಮನಾಥ ಯಾಳವಾರ ರವರು ವಿಜಯಪುರ ಜಿಲ್ಲೆ ಆಲಮಟ್ಟಿ ಗ್ರಾಮದ ಸಿದ್ದಪ್ಪ ಮತ್ತು ಶಿವನಂದಮ್ಮಾ ದಂಪತಿಗಳಿಗೆ ದಿನಾಂಕ ೧-೫-೧೯೫೩ ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ. ಪದವಿಧರರಾದ ಇವರು ೧೯೭೯ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ, ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೨೦೧೩ರಲ್ಲಿ ನಿವೃತ್ತರಾಗಿದ್ದಾರೆ. ಇವರು `ಹುಮನಾಬಾದ ತಾಲೂಕು ದರ್ಶನ, ಹರಿಶ್ಚಂದ್ರ ಕಾವ್ಯ, ಕಾವ್ಯ ಸಂಗಮ-೨, ಗಿರಿಜಾ ಕಲ್ಯಾಣ, ವಿವೇಕ ವಾಹಿನಿ, ಗೃಹ ಮಂಗಳ, ಉರಿಲಿಂಗಪೆದ್ದಿ, ಬೀದರ ಜಿಲ್ಲಾ ದರ್ಶನ, ಬೀದರ ಜಿಲ್ಲೆಯ ಶರಣರ ಸ್ಮಾರಕಗಳು, ಪುಲಿಗೆರಿಯ ಆದಯ್ಯಾ , ವೀರಭದ್ರ ಸಿರಿ, ಕರಕನಳ್ಳಿ ಬಕ್ಕಪ್ರಭು, ಕುಂಬಾರ ಗುಂಡಯ್ಯಾ, ಕುಮಾರವ್ಯಾಸ, ಶರಣಸಿರಿ, ಮಾಣಿಕ ಪ್ರಭುಗಳು, ಹೊಸಗನ್ನಡ ಕಾವ್ಯ ಸಂಗ್ರಹ, ಸೋಳ್ನುಡಿ ಸಿಂಚನ, ಜಯದೇವಿ ತಾಯಿ ಲಿಗಾಡೆ, ಬಯಲೊಳಗಣ ಬಿಸಿ, ವೈದ್ಯ ಜಾನಪದ, ಡಾ.ಚಂದ್ರಶೇಖರ ಕಂಬಾರ, ಆನು ಒಲಿದಂತೆ ಹಾಡುವೆ, ಹೈದರಾಬಾದ ಕರ್ನಾಟಕ ಶರಣ ಹಾಗೂ ಸೂಫಿ ಚಳವಳಿ, ಅಖಂಡ ಬಿಜಾಪುರ ಜಿಲ್ಲೆಯ ಅನುಭಾವಿ ಕವಿಗಳು, ವಚನದಲ್ಲಿ ನಾಮಾಮೃತ, ಅನನ್ಯ ಅನುಭವ ಮಂಟಪ, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆ, ವಚನ ಸುದ್ಧಿ ಕರಣ ಸೂತ್ರಗಳು, ಕಾಶ್ಮೀರದ ಶರಣರು, ಜಗಜ್ಯೋತಿ, ಯೋಗಿಗಳ ಯೋಗಿ ಶಿವಯೋಗಿ ಸಿದ್ದರಾಮ, ಸತಿ-ಪತಿಗಳೊಂದಾದ ಬದುಕು, ಕಲ್ಯಾಣ ಕ್ರಾಂತಿ, ಶರಣರ ದಂಡಿನ ದಾರಿ, ಅಯ್ಯಗಳಯ್ಯ ಮಾದಾರ ಚನ್ನಯ್ಯ, ದನಿ ಎತ್ತಿ ಹಾಡೇನ, ಚನ್ನಬಸವ, ತ್ರಿಪದಿ ಕಾವ್ಯ ಸೇರಿದಂತೆ ಹಲವಾರು ಪುಸ್ತಕಗಳು ಪ್ರಕಟಿಸಿದ್ದಾರೆ. ಮತ್ತು ೨೦೦ಕ್ಕೂ ಹೆಚ್ಚು ಲೇಖನಗಳು ವಿವಿಧ ಸಂಚಿಕೆ, ಪ್ರಾತಿನಿಧಿಕ ಸಂಕಲನ, ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಹುಮನಾಬಾದ ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೌದ್ಧ ಅಧ್ಯಯನ ಕೇಂದ್ರದ ನೀದೇರ್ಶಕರಾಗಿ, ಅನುಭವ ಮಂಟಪ ಪ್ರಸಾರಾಂಗದ ನೀರ್ದೆಶಕರಾಗಿ, ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸುವರ್ಣ ಕನ್ನಡಿಗ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರಕೂಟ ಸಾಹಿತ್ಯ ಪ್ರಶಸ್ತಿ, ಡಾ.ಬಸವಲಿಂಗ ಪಟ್ಟದ್ದೆವರ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ಬೀದರ ಜಿಲ್ಲಾ ೫ನೇ ಶರಣ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಬಸವನಬಾಗೆವಾಡಿ ತಾಲೂಕಾ ೪ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ, ಬೀದರ ಜಿಲ್ಲಾ ೧೮ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಸದ್ಯ ಇವರು ಹುಮನಾಬಾದಿನ ಖಾಯಂ ನಿವಾಸಿಯಾಗಿದ್ದು, ಇವರ ಕುರಿತು ಕೆಲ ವಿದ್ಯಾರ್ಥಿಗಳು ಎಂ.ಫೀಲ್. ಪಿ.ಎಚ್.ಡಿ.ಅಧ್ಯಯನ ಮಾಡಿ ಪದವಿ ಪಡೆದಿದ್ದಾರೆ. ವೀರಣ್ಣ ಕುಂಬಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ