ಸೋಮವಾರ, ಜನವರಿ 13, 2025
ಪೂಜ್ಯ. ಶ್ರೀ.ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು
ಸಾಹಿತಿ ಹಾಗೂ ಮಠಾದೀಶರಾದ ಪೂಜ್ಯ. ಶ್ರೀ.ಮ.ನಿ.ಪ್ರ.ಶಿವಾನಂದ ಮಹಾಸ್ವಾಮಿಗಳು. ಇವರು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ನಿಂಗಾಪೂರ ಗ್ರಾಮದ ಶ್ರೀ ಗುರುಪಾದಯ್ಯ ಮತ್ತು ಶ್ರೀಮತಿ ಕಾಶಮ್ಮ ದಂಪತಿಗಳ ಉದರದಲ್ಲಿ ದಿನಾಂಕ ೨-೧೨-೧೯೫೨ರಲ್ಲಿ ಜನ್ಮ ತಳೆದಿದ್ದಾರೆ. ಎಸ್.ಎಸ್.ಎಲ್.ಸಿ ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಧಾರ್ಮಿಕ ಶಿಕ್ಷಣವು ಬಾದಾಮಿ ಶಿವಯೋಗಿ ಮಂದಿರ ಮತ್ತು ಹುಬ್ಬಳ್ಳಿಯಲ್ಲಿರುವ ಮೂರು ಸಾವಿರ ಮಠದಲ್ಲಿ ಅಧ್ಯಯನ ಮಾಡಿ ಮೃತುಂಜಯ ಮಹಾಸ್ವಾಮಿಗಳಿಂದ ಶರಣಧರ್ಮ ತರಬೇತಿಯನ್ನು ಪಡೆದಿದ್ದಾರೆ.
ಶ್ರೀಗಳು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ೧೯೭೬ರಲ್ಲಿ `ಕನ್ನಡ ಕೋಗಿಲೆ' (ಕವನ ಸಂಕಲನ) ೧೯೮೧ರಲ್ಲಿ `ಶಿವಾನಂದ ಸ್ವಾಮಿಗಳ ವಚನಗಳು' (ಆಧುನಿಕ ವಚನ ಸಂಕಲನ) ೨೦೧೩ರಲ್ಲಿ `ಬಸವ ಭಾರತ' (ಪಾದಯಾತ್ರೆ ಮಾಡಿದ ಚಿಂತನಾ ಕೃತಿ) ಕಲ್ಯಾಣ ಕೈಲಾಸ, ಇಷ್ಟಲಿಂಗ ಪೂಜಾ ವಿಧಾನ, ಸಾಮೂಹಿಕ ಪ್ರಾರ್ಥನೆ' (ಸಂಪಾದನೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಹಾಗೂ ೧೯೭೮ರಲ್ಲಿ ಬರೆದ `ಪತಿವೃತೆಯ ಪ್ರಭಾವ' (ನಾಟಕ) `ಲಿಂಗಾಯತ ಧರ್ಮ ಮತಸ್ಥಾಪಕಕರು: ಬಸವಣ್ಣನವರು.' ಎಂಬ ಕೃತಿಗಳು ಬರೆದಿದ್ದು, ಅವು ಅಪ್ರಕಟಿತವಾಗಿವೆ. ಮತ್ತು ವಿಶ್ವಗುರು ಬಸವಧರ್ಮ ಪ್ರಸಾರ ಕೇಂದ್ರ ಎಂಬ ಪ್ರಕಾಶನದ ವತಿಯಿಂದ ಕೆಲ ಲೇಖಕರ ಕೃತಿಗಳು ಕೂಡ ಪ್ರಕಟಿಸಿದ್ದಾರೆ. ಶ್ರೀಗಳ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಮತ್ತು ಸಾಹಿತ್ಯಿಕವಾಗಿ ಮಾಡಿದ ಸಾಧನೆಯನ್ನು ಕಂಡು ೨೦೨೦ರಲ್ಲಿ ಚಿತ್ರದುರ್ಗದ ಶ್ರೀ ಮುರುರಾಜೇಂದ್ರ ಮಠದಿಂದ ಶ್ರೀಮುರುಘಶ್ರೀ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು ೨೦೧೮ರಲ್ಲಿ ಹಾರಕೂಡದಲ್ಲಿ ನಡೆದ ಬಸವಕಲ್ಯಾಣದ ೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿಯೂ ಆಯ್ಕೆ ಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ