ಪುಟಗಳು

ಸೋಮವಾರ, ಜನವರಿ 13, 2025

ಎಸ್.ಬಿ.ಕುಚಬಾಳ

ಸಾಹಿತಿ ಎಸ್.ಬಿ.ಕುಚಬಾಳ ರವರು ಮೂಲತಃ ವಿಜಾಪುರ ಜಿಲ್ಲೆ ಸಿಂದಗಿಯ ಭೀಮರಾವ ಮತ್ತು ಶಿವನಂದಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೫೧ರಲ್ಲಿ ಜನಿಸಿದ್ದಾರೆ. ಇವರ ಪೂರ್ಣನಾಮ `ಶಿವರಾಯ ತಂದೆ ಭೀಮರಾವ ಕುಚಬಾಳ' ಎಂದಾಗಿದೆ. ಬಿ.ಎ.ಬಿ.ಎಡ್.ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ, ಮುಖ್ಯ ಗುರುಗಳಾಗಿ, ಬೀದರದ ಎಸ್.ಎಸ್.ಎ. ಯೋಜನೆಯ ಸಹಾಯಕ ಸಮನ್ವಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ `ಜನಪದ ಜ್ಯೋತಿ', `ಭೀಮ ಕಿರಣ', `ಸರ್ವ ಶಿಕ್ಷಣ ಅಭಿಯಾನ', `ತಿಳಿದು ನಡಿರಿ ಇನ್ನ', `ರೈತ ಚೂಡಾಮಣಿ', (ಕವನ ಸಂಕಲನಗಳು) `ಅಚ್ಚು ಮೆಚ್ಚಿನ ಬಿಚ್ಚು ಹೂಗಳು' (ಹನಿಗವನ ಸಂಕಲನ) `ಕಲಿಯುಗದ ಕಾಲೇಜಿನ ಹುಡಗಿ' (ಕಾದಂಬರಿ) `ಜಾಗೃತಿ ಜೀವಿ ಪಂಚಶೀಲ ಗವಾಯಿ' ಮತ್ತು `ಜಾನಪದ ದುಂದುಬಿ ಕುಚಬಾಳ' (ತತ್ವಪದ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇಲ್ಲಿಯ `ತಿಳಿದು ನಡಿರಿ ಇನ್ನ' ಕೃತಿ ಕರ್ನಾಟಕ ಸರ್ಕಾರ ಪುಸ್ತಕ ಪ್ರಾಧಿಕಾರದ ಅನುದಾನ ಪಡೆದು ಪ್ರಕಟವಾಗಿದೆ. ಇವರ ಸಾಹಿತ್ಯ ಮತ್ತು ಶೈಕ್ಷಣಿಕ ಸಾಧನೆಗೆ ತಾಲೂಕು, ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಶಿಕ್ಷಣ ರತ್ನ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಜಾನಪದ ದುಂದುಬಿ ಪ್ರಶಸ್ತಿ, ಸಂಗೀತ ಶ್ರೀ ಪ್ರಶಸ್ತಿ, ನಾಟಕ ರತ್ನಕರ ಪ್ರಶಸ್ತಿ, ಸಂಗೀತ ಕಲಾ ರತ್ನ ಪ್ರಶಸ್ತಿ, ಜಾನಪದ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ