ಪುಟಗಳು

ಸೋಮವಾರ, ಜನವರಿ 13, 2025

ಭಾನುದಾಸ ಪಾಟೀಲ್

ಸಾಹಿತಿ ಭಾನುದಾಸ ಪಾಟೀಲ್ ರವರು ಕಲಬುರಗಿ ಜಿಲ್ಲೆ ನೂತನ ಕಮಲಾಪೂರ ತಾಲೂಕಿನ ಮಡಕಿ ಗ್ರಾಮದ ಉದ್ದವರಾವ ಪಾಟೀಲ್ ಮತ್ತು ವತ್ಸಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೧ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಪಿಯುಸಿ, ಟಿ.ಸಿ.ಎಚ್ ಶಿಕ್ಷಣ ಪಡೆದು ೧೯೮೩ರಿಂದ ಬಸವಕಲ್ಯಾಣದ ಅನುದಾನಿತ ಜಿಜಾಮಾತಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ೨೦೦೪ರಲ್ಲಿ ಹತ್ತು ಜನ ಲೇಖಕರೊಂದಿಗೆ `ಹತ್ತು ಮುಖಗಳ ನೂರು ಭಾವಗಳು' ಎಂಬ ಕವನ ಸಂಕಲನದಲ್ಲಿ ತಮ್ಮ ಹತ್ತು ಕವನಗಳು ಪ್ರಕಟಿಸಿದ್ದಾರೆ. ಮತ್ತು ಇತ್ತೀಚೆಗೆ `ನಮ್ಮೂರ' ಎಂಬ ಗ್ರಾಮ ಚರಿತ್ರೆಯು ಬರೆದಿದ್ದಾರೆ. ಇವರ ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನ ಮತ್ತು ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. ಇವರಿಗೆ ೧೯೯೨ರಲ್ಲಿ ಬಸವಕಲ್ಯಾಣ ತಾಲೂಕು ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ,ಯು ನೀಡಿ ಗೌರವಿಸಲಾಗಿದೆ. ಮತ್ತು ಹಾರಕೂಡದ ೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಮುಚಳಂಬ, ಹುಲಸೂರು, ಬೆಲೂರು ಮಠಗಳಲ್ಲಿ ನಡೆದ ವಿವಿಧ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿ ಕವನ ವಾಚನ ಮಾಡಿರುವುದರಿಂದ ಸನ್ಮಾನಿಸಿ ಗೌರವಿಸಿದ್ದಾರೆ. ಸದ್ಯ ಇವರು ನಿವೃತ್ತಿಯ ಅಂಚಿನಲ್ಲಿದ್ದು ಬಸವಕಲ್ಯಾಣದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ