ಮಂಗಳವಾರ, ಜನವರಿ 14, 2025
ಭಾರತಿ ವಸ್ತ್ರದ
ಸಾಹಿತಿ ಭಾರತಿ ವಸ್ತ್ರದ ರವರು ವಿಜಯಪುರ ಜಿಲ್ಲೆ ಸಿಂದಗಿಯ ಸಿದ್ದಲಿಂಗಯ್ಯಾ ಮತ್ತು ಅನ್ನಪೂರ್ಣದೇವಿ ದಂಪತಿಗಳಿಗೆ ದಿನಾಂಕ ೧-೬-೧೯೫೨ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ. ಎಂ.ಎ.ಇತಿಹಾಸ, ಎಂ.ಎಡ್.ಸ್ನಾತಕೋತ್ತರ ಪದವಿಧರರಾಗಿದ್ದು. ೧೯೮೨ರಿಂದ ಪ್ರೌಢ ಶಾಲಾ ಶಿಕ್ಷಕರಾಗಿ, ಡೈಯಟ್ನ ಪ್ರಾಶಿಕ್ಷಕರಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೧೨ರಲ್ಲಿ ನಿವೃತ್ತರಾಗಿದ್ದಾರೆ. ಸಾಹಿತ್ಯದಲ್ಲಿ ಬಾಲ್ಯದಿಂದಲೂ ತುಂಬ ಆಸಕ್ತರಾಗಿದ್ದ ಇವರು `ನಾನು ನನ್ನ ದೇಶ’ ಎಂಬ ಪರಿಚಯಾತ್ಮಕ ಕೃತಿ. `ಒಡಪು ಹೇಳತ್ತಿಯೇನ ಗೆಳತಿ’ ಎಂಬ ಜಾನಪದ ಸಾಹಿತ್ಯ, `ಹಿಪ್ಪು ನೆರಳೆ’ ಎಂಬ ರೇಷ್ಮೆ ಕುರಿತಾದ ಕೃತಿಯು ಬರೆದು ಪ್ರಕಟಿಸಿದ್ದಾರೆ. ಕಲಬುರಗಿ ಆಕಾಶವಾಣಿಯ ನಾಟಕ ವಿಭಾಗದ ಬಿ.ಗ್ರೇಡ್ ಕಲಾವಿದೆಯಾಗಿ ಕೆಲ ನಾಟಕಗಳಿಗೆ ಧ್ವನಿ ನೀಡಿ, ಮಕ್ಕಳಿಗಾಗಿ `ಕರುಣಾಳು ಬಾ ಬೆಳಕೆ', `ವರದಕ್ಷಿಣೆ, ನಿರ್ಮೂಲನೆ', `ಹರಳಯ್ಯಾ' ಸೇರಿದಂತೆ ಮೊದಲಾದ ರೇಡಿಯೋ ಕಾರ್ಯಕ್ರಮಗಳು ನಾಟಕ ರೂಪಾಂತರವಾಗಿ ಪ್ರಸಾರವಾಗಿವೆ. ಇವರಿಗೆ ೧೯೯೭ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೨ರಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ ಸಾಹಿತ್ಯ ಚೂಡಾಮಣಿ ರತ್ನ, ಪ್ರಶಸ್ತಿಗಳು ಪಡೆದಿದ್ದಾರೆ. ಮತ್ತು ಇವರು ೧೯೯೯ರಲ್ಲಿ ಬೀದರ ಜಿಲ್ಲಾ ಸಾಕ್ಷರತಾ ಸಮಿತಿಯ ಕಾರ್ಯದರ್ಶಿಯಾಗಿ, ೨೦೦೦ರಿಂದ ಮೂರಾರ್ಜಿ ಶಾಲಾ ಪ್ರಾಂಶುಪಾಲರಾಗಿ, ಬೀದರ ಜಿಲ್ಲಾ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯ ಸಹಾಯಕ ನೀರ್ದೆಶಕರಾಗಿ ,ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಮಹಿಳಾ ಸಮಖ್ಯದ ಎಗ್ಜಿಗೇಟಿವ್ ಸದಸ್ಯರಾಗಿ, ವಯಸ್ಕರ ಶಿಕ್ಷಣ ಇಲಾಖೆಯ ಪಠ್ಯ ಪುಸ್ತಕ ಸಮಿತಿಯ ಸದಸ್ಯರಾಗಿ, ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಬೀದರದ ಖಾಯಂ ನಿವಾಸಿಯಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ