ಪುಟಗಳು

ಮಂಗಳವಾರ, ಜನವರಿ 14, 2025

ರಜಿಯಾ ಬಳಬಟ್ಟಿ

ಕವಯತ್ರಿ ರಜಿಯಾ ಬಳಬಟ್ಟಿಯವರು ಬಾಗಲಕೋಟೆಯ ಮಸ್ತಾನಸಾಬ ಮತ್ತು ಅಮಿನಾಬೀ ಎಂಬ ದಂಪತಿಗಳಿಗೆ ದಿನಾಂಕ ೭-೫-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಎಡ್. ಪದವಿಧರರಾದ ಇವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಬ್ದುಲ್ ನಜಿರ್ ಸಾಬ ರಾಜ್ಯ ಗ್ರಾಮೀಣಾಭಿವೃದ್ಧಿ ಯೋಜನೆಯ ಸಂಪನ್ಮೂಲ ವ್ಯಕ್ತಿಯಾಗಿ ಬೀದರ ಜಿಲ್ಲಾ ಪಂಚಾಯತನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ `ಮೆಹಂದಿ’, `ದಾವಣಿ ಹುಡಗಿ’ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಒಂದು ವರ್ಷ `ಆಸರಕಿ ಬ್ಯಾಸರಕಿ' ಎಂಬ ಅಂಕಣಕಾರರಾಗಿ ಲೇಖನ ಬರೆದು ಖ್ಯಾತರಾಗಿದ್ದಾರೆ. ಇವರ ಬರಹಗಳು ಮಯೂರ, ವಿಜಯ ಕರ್ನಾಟಕದ ಮಹಿಳಾ ಪುರವಣಿ, ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ, ಮತ್ತು ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರ `ದಾವಣಿ ಹುಡಗಿ' ಕವನ ಸಂಕಲನಕ್ಕೆ ಜಿಲ್ಲಾ ಕಸಾಪದ ವತಿಯಿಂದ ಸಮಿರವಾಡಿ ದತ್ತಿ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿAದ ವಿಶಿಷ್ಠ ಲೇಖಕಿ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಸೃಜನಶೀಲ ಬರಹಗಾರ್ತಿ ಪ್ರಶಸ್ತಿ, ಪಡೆದಿದ್ದಾರೆ. ಮತ್ತು ಮೈಸೂರಿನ ದಸರಾ ಕವಿಗೊಷ್ಠಿಯಲ್ಲಿ ಕವನ ವಾಚನ ಮಾಡಿದ ಇವರು ಸದ್ಯ ಬಿ.ಆರ್.ಜಿ.ಎಫ್. (ಹಿಂದುಳಿದ ಪ್ರದೇಶ ಅನುದಾನ ನಿಧಿ) ಎಂಬ ಕೇಂದ್ರ ಸರ್ಕಾರ ಯೋಜನೆಯ ಮೈಸೂರು ಪ್ರತಿನಿಧಿಯಾಗಿ, ಬೀದರ ಜಿಲ್ಲಾ ಸಂಯೋಜಕಿಯಾಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ