ಪುಟಗಳು

ಮಂಗಳವಾರ, ಜನವರಿ 14, 2025

ಡಾ. ಗವಿಸಿದ್ದಪ್ಪ ಎಚ್.ಪಾಟೀಲ್.

`ಗವೀಶ್’ ಎಂಬ ಕಾವ್ಯನಾಮ ಮತ್ತು `ಪಾಟೀಲ ಗವಿಸಿದ್ಧ' ಎಂಬ ವಚನಾಂಕಿತದಿAದ ಬರೆಯುತ್ತಿರುವ ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ರವರು ಮೂಲತಃ ಕೊಪ್ಪಳ ಜಿಲ್ಲೆ ಬಿಸರಹಳ್ಳಿ ಗ್ರಾಮದ ಹನುಮಂತಗೌಡ ಪಾಟೀಲ ಮತ್ತು ಶಾರದಾ ದಂಪತಿಗಳಿಗೆ ದಿನಾಂಕ ೧೬-೬-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ೨೦೦೭ರಿಂದ ಬಸವಕಲ್ಯಾಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ, ಪ್ರಭಾರಿ ಪ್ರಾಂಶುಪಾಲರಾಗಿ, ಸೇವೆ ಸಲ್ಲಿಸಿ, ೨೦೧೭ರಿಂದ ಹುಮನಾಬಾದ ಕಾಲೇಜಿನ ಪಿಜಿ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಆಸಕ್ತರಾದ ಇವರು `ಕನಸುಗಣ್ಣಿನ ಹುಡುಗಿ' (ಕವನಸಂಕಲನ) `ಕಾಗದದ ಚೂರು' (ಕಥಾಸಂಕಲನ). `ಜನಜಾನಪದ', `ಹೊತ್ತರಳಿ', `ಜಾನಪದ ಕೈದೀವಿಗೆ', `ರಂಗ ಸಿರಿ', `ವಚನ ಸಿರಿ’, `ಶಿವದಾಸ ಚಿಂತನೆ', `ಅರಿವಿನ ಬೆಳಕಲ್ಲಿ' ಇವು ಅವರ ಪ್ರಮುಖ ಕೃತಿಗಳಾಗಿವೆ. ಮತ್ತು ವ್ಯಕ್ತಿ ಚಿತ್ರಣ, ಜೀವನ ಚರಿತ್ರೆ, ವಿಮರ್ಶೆ, ,ಪಠ್ಯ ಪುಸ್ತಕ, ಅಭಿನಂದನಾ ಗ್ರಂಥ, ಸ್ಮರಣ ಸಂಚಿಕೆ, ದಾಸ ಸಾಹಿತ್ಯ, ಸಂಪಾದನೆ ಸೇರಿ ಒಟ್ಟು ೯೪ಕೃತಿಗಳಲ್ಲಿ ೫೨ಸೃಜನಶೀಲ ಮತ್ತು ೪೨ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ೫೦ಕ್ಕೂ ಹೆಚ್ಚು ಅಭಿನಂದನ ಗ್ರಂಥ ೧೦೦ಕ್ಕೂ ಹೆಚ್ಚು ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಇವರ ಬರಹಗಳು ಪ್ರಕಟ, ಪ್ರಸಾರವಾಗಿವೆ. ಇವರಿಗೆ ಕರ್ನಾಟಕ ಸರಕಾರದ ಕನಕ ಯುವ ಪುರಸ್ಕಾರ, ಹಾರಕೂಡ ಮಠದಿಂದ ಚನ್ನಶ್ರೀ ಪ್ರಶಸ್ತಿ ಸೇರಿದಂತೆ ಮೊದಲಾದ ೪೦ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಮತ್ತು ಇವರಿಗೆ ಬೇಲೂರಿನಲ್ಲಿ ಜರುಗಿದ `ಹೈದರಾಬಾದ ಕರ್ನಾಟಕ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ ಇವರು ಧರಿನಾಡು ಕನ್ನಡ ಸಂಘ, ದಾಸ ಸಾಹಿತ್ಯ ಪರಿಷತ್ತು, ಲೋಹಿಯಾ ಪ್ರತಿಷ್ಠಾನ, ಬೀದರ ಜಿಲ್ಲಾ ಶರಣು ವಿಶ್ವ ವಚನ ಫೌಂಡೇಷನ್ ಅಧ್ಯಕ್ಷರಾಗಿದ್ದಾರೆ. ಮತ್ತು ಸಾಕ್ಷಿ ಪ್ರತಿಷ್ಠಾನದ ಮೂಲಕ ಅನೇಕ ಸಾಹಿತಿಗಳಿಗೆ ಪ್ರಶಸ್ತಿ ಪುರಸ್ಕಾರವು ನೀಡುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ