ಪುಟಗಳು

ಮಂಗಳವಾರ, ಜನವರಿ 14, 2025

ಪೂಜ್ಯ. ಶ್ರೀ. ಬಸವಪ್ರಭು ಸ್ವಾಮಿಗಳು

ಸಾಹಿತಿಗಳಾದ ಪೂಜ್ಯ. ಶ್ರೀ. ಬಸವಪ್ರಭು ಸ್ವಾಮಿಗಳು. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಉಳೆನೂರು ಗ್ರಾಮದ ದರಗಪ್ಪ ಮತ್ತು ಈರಮ್ಮ ದಂಪತಿಗಳ ಉದರಲ್ಲಿ ದಿನಾಂಕ ೧-೬-೧೯೮೬ರಲ್ಲಿ ಜನಿಸಿದ್ದಾರೆ. ಎಂ.ಎ ಸ್ನಾತಕೋತ್ತರ ಪದವಿಧರರಾದ ಇವರು ಪಿಹೆಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಬಸವಣ್ಣ, ಬುದ್ದ,ಅಂಬೇಡ್ಕರರ ವಿಚಾರಧಾರೆಗೆ ಮಾರುಹೋಗಿ, ಶರಣರ ತತ್ವನಿಷ್ಠೆಯ ಅಧ್ಯಾತ್ಮಿಕ ವೈಚಾರಿಕ ನೆಲೆಗಟ್ಟಿನಲ್ಲಿ, ವಚನ ಸಾಹಿತ್ಯ ಅಧ್ಯಯನ ಮಾಡಿದ ಇವರು ಲಿಂ. ಡಾ.ಮಾತೆ ಮಹಾದೇವಿಯವರಿಂದ ಲಿಂಗದೀಕ್ಷೆ ಮತ್ತು ಜಂಗಮ ದೀಕ್ಷೆ ಪಡೆದು ಬಸವಕಲ್ಯಾಣದ ಬಸವಧರ್ಮ ಪೀಠದ ಬಸವ ಮಹಾಮನೆಯಿಂದ ನಾಡಿನಾದ್ಯಂತ ಬಸವತತ್ವ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತು ಮಾತಾಜಿಯವರ ಸಾಹಿತ್ಯ ಸೇರಿದಂತೆ ಕಲ್ಯಾಣದ ಶರಣರ ವಚನಗಳನ್ನು ಅಧ್ಯಯನ ಮಾಡಿದ ಇವರು `ಚಿಂತನ ತವನಿಧಿ' (ಚಿಂತನ) `ಶೋಧಿಸಿ ನೋಡು' (ಕವನ ಸಂಕಲನ) `ದಾಂಪತ್ಯ ಧರ್ಮ' (ಲೇಖನ ಸಂಕಲನ) `ಮೂಕ ಯೋಗಿ' (ಆತ್ಮಕತೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಶ್ರೀಗಳು ಧಾರ್ಮಿಕ ಸಾಮಾಜಿಕ ಸಂಘಟಕರು ಆಗಿರುವುದರಿಂದ ಅನ್ಯಾಯ ಅಪಪ್ರಚಾರದ ವಿರುದ್ಧ ಲೇಖನಗಳು ಬರೆದು ಆ ಮೂಲಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ನಾಡಿನಾದ್ಯಂತ ರಾಷ್ಟ್ರೀಯ ಬಸವದಳದ ಶಾಖೆಗಳನ್ನು ತೆರೆದು ಹಳ್ಳಿಗಳಲ್ಲಿ ಬಸವತತ್ವ ಪ್ರಚಾರೋಪನ್ಯಾಸ ಮಾಡುವುದರೊಂದಿಗೆ ಅನಾಥ ಮಕ್ಕಳಿಗೆ ಉಚಿತ ಆಶ್ರಯ ನೀಡಿ `ಬಸವ ಮಹಾಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಥಾಪಿಸಲ್ಪಟ್ಟ ಅಕ್ಕನಾಗಲಾಂಬಿಕ ಮಕ್ಕಳ ಮಹಾಮನೆ' ಎಂಬ ಅನಾಥ, ನಿರ್ಗತಿಕ,ಎಚ್.ಐ.ವಿ.ಪೀಡಿತ ಮಕ್ಕಳಿಗೆ ಸುಮಾರು ೧೫ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ವಿಜಯವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಶ್ವವಾಣಿ, ಹೊಸ ದಿಂಗತ, ದಿ.ಹಿಂದೂ, ಕಲ್ಯಾಣ ಕಿರಣ, ಶೋಧವಾಣಿ ಇತ್ಯಾದಿ ಪತ್ರಿಕೆಗಳು ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ