ಪುಟಗಳು

ಶನಿವಾರ, ಜನವರಿ 11, 2025

ಸುರಬಿ

`ಸುರಬಿ' ಎಂಬ ಕಾವ್ಯನಾಮದಿಂದ ಸಾಹಿತ್ಯ ರಚನೆ ಮಾಡುತ್ತಿರುವ ಕವಯತ್ರಿಯೆಂದರೆ ಸುಧಾರಾಣಿ ಬಿರಾದಾರ. ಇವರ ವಚನಾಂಕಿತ `ಅಣ್ಣ ಬಸವಣ್ಣ' ಎಂದಾಗಿದೆ. `ಸುರಬಿ' ಎಂದರೆ ಸುಧಾರಾಣಿ ತಂದೆ ರಮೇಶ ಬಿರಾದಾರ.' ಎಂದಾಗಿದೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಮುಸ್ತಾಪೂರ ಗ್ರಾಮದ ರಮೇಶ ಮತ್ತು ಅನೀತಾ ದಂಪತಿಗಳಿಗೆ ದಿನಾಂಕ ೨-೧೦-೧೯೯೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ೨೦೧೮ರಲ್ಲಿ ಮಹಿಳಾ ಪೋಲಿಸ್ ಪೇದೆಯಾಗಿ ಕಮಲನಗರ ಪೋಲಿಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು ೨೦೧೪ರಲ್ಲಿ `ವಚನಾಂಜಲಿ' ಎಂಬ ಆಧುನಿಕ ವಚನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಿಂದಿ ಭಾಷೆಯಲ್ಲಿಯೂ ಕವನ, ಹಾಡು, ಶಾಹಿರಿ, ಲೇಖನಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಅಷ್ಟೇಯಲ್ಲದೆ ಇವರು ರಾಜ್ಯ ಮಟ್ಟದ ಕೆಲ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಇವರಿಗೆ ಕೆಲ ಕನ್ನಡಪರ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ