ಪುಟಗಳು

ಶನಿವಾರ, ಜನವರಿ 11, 2025

ಡಾ.ಮನ್ಮಥ ಎಚ್.ಡೊಲೆ.

ಸಾಹಿತಿ ಡಾ.ಮನ್ಮಥ ಎಚ್.ಡೊಲೆಯವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾರಾಯಣಪುರ ಗ್ರಾಮದ ಹುಲ್ಲಪ್ಪಾ ಡೊಳೆ ಮತ್ತು ಜೀಜಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ ಪದವೀಧರರಾದ ಇವರು ಎಂ.ಎ, ಪಿ.ಎಚ್.ಡಿ ಪದವಿ ಪದವಿಧರರಾಗಿದ್ದು, `ಬಸವೇಶ್ವರ ಅಂಬೇಡ್ಕರ್ ಒಂದು ತೌಲನಿಕ ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಬಾಲ್ಯದಲ್ಲಿಯೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು `ಮಿಡಿ ಮಾವು' ಎಂಬ ಹನಿಗವನ ಸಂಕಲನ ಪ್ರಕಟಿಸಿ ನಂತರ `ಬಸವೇಶ್ವರ, ಅಂಬೇಡ್ಕರ್ ಚಿಂತನೆಯ ನೆಲೆ ಮತ್ತು ನಿಲುವು' ಎಂಬ ಚಿಂತನಾತ್ಮಕ ಸಂಶೋಧನಾ ಕೃತಿಯೊಂದು ಹೊರ ತಂದಿದ್ದಾರೆ. ಇವರ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬಂಡಾಯ ಸಾಹಿತ್ಯ ಪರಿಷತ್ತಿನಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಇವರು ಬೀದರ ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ೨೦೦೯ರಲ್ಲಿ ಅರವಿಂದ ಮಾಲಗತ್ತಿಯವರ ಸರ್ವಾಧ್ಯಕ್ಷತೆಯಲ್ಲಿ ಬೀದರನಲ್ಲಿ ನಡೆದ ೨ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವು ಯಶಸ್ವಿಯಾಗಿ ನಡೆಯಲು ಶ್ರಮಿಸಿದ್ದಾರೆ. ಮತ್ತು ಇವರ ಸಾಹಿತ್ಯ ಸಾಧನೆಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಕೂಡ ಲಭಿಸಿವೆ. ಸದ್ಯ ಇವರು ಔರಾದನಲ್ಲಿ ವಾಸವಾಗಿದ್ದು ಅಲ್ಲಿಯ ನಳಂದಾ ಪದವಿ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ