ಶನಿವಾರ, ಜನವರಿ 11, 2025
ವಿದ್ಯಾವತಿ ಬಿ.ಬಲ್ಲೂರ್
ಕವಯತ್ರಿಯಾದ ವಿದ್ಯಾವತಿ ಬಿ.ಬಲ್ಲೂರ್. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಠಾಣಾಕುಸನೂರು ಗ್ರಾಮದ ಚಂದ್ರಪ್ಪಾ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜ£ಸಿದ್ದಾರೆ. ಎಂ.ಎ.ಎA.ಇಡಿ.ಸ್ನಾತಕೋತ್ತರ ಪದವಿಧರರಾದ ಇವರು ಸಾಹಿತಿ ಡಾ.ಬಸವರಾಜ ಬಲ್ಲೂರ್ ಅವರ ಧರ್ಮ ಪತ್ನಿಯಾಗಿದ್ದು, ೧೯೯೬ರಿಂದ ಉಪನ್ಯಾಸಕ ವೃತ್ತಿಯಲ್ಲಿ ತೊಡಗಿಕೊಂಡು ಕಲಬುರ್ಗಿಯ ಮೊಹಮ್ಮದಿ ಬಿ.ಇಡಿ ಮತ್ತು ಆಶಾಜ್ಯೋತಿ ಟಿ.ಸಿ.ಹೆಚ್ ಹಾಗೂ ಬಸವಕಲ್ಯಾಣದ ಖೂಬಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ ಇವರು ಸದ್ಯ ಬೀದರದ ಎಂ.ಎಸ್.ಮುದ್ದಣ್ಣ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಬಾಲ್ಯದಿಂದಲೂ ಓದು ಬರಹಗಳ ಕಡೆಗೆ ಹೆಚ್ಚು ಆಸಕ್ತಿ ತೋರಿ ಅಧ್ಯಾತ್ಮಿಕ ತಳಹದಿಯ ಶರಣರ ಕಾಯಕ ಜೀವನ, ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಬದುಕು ಸಾಗಿಸುವುದರೊಂದಿಗೆ, ಕವನ ಲೇಖನ, ಚಿಂತನ, ವಿಮರ್ಶೆ ಮೊದಲಾದವು ಬರೆಯುತ್ತಿದ್ದಾರೆ. ಮತ್ತು ‘ಅಕ್ಷರ ಕಲ್ಯಾಣ’ ಎಂಬ ಪುಸ್ತಕ ಪ್ರಕಟಿಸಿ, ನಾಗಶೆಟ್ಟಿ ಪಾಟೀಲರ ‘ಪವಾಡಗಳು ನಿಜವೆ ?’ ಎಂಬ ಕೃತಿಗೆ ವಿಮರ್ಶೆಯು ಬರೆದಿದ್ದಾರೆ. ಇವರಿಗೆ ೨೦೧೮ರಲ್ಲಿ ಬೀದರನಲ್ಲಿ ನಡೆದ ಅಖಿಲ ಭಾರತ ಕವಯತ್ರಿಯರ ಸಾಹಿತ್ಯ ಸಮ್ಮೇಳನದಲ್ಲಿ ‘ಅಮೃತ ಪ್ರಿತಮ್’ ಪ್ರಶಸ್ತಿ , ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ‘ಕಾವ್ಯ ರತ್ನಾಂಜಲಿ’ ಪ್ರಶಸ್ತಿಗಳು ಲಭೀಸಿವೆ. ಸದ್ಯ ಇವರು ತಮ್ಮ ವೃತ್ತಿಯೊಂದಿಗೆ ಬೀದರ ಜಿಲ್ಲಾ ಮಹಿಳಾ ಬಸವ ಕೇಂದ್ರದ ಅಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ