ಶನಿವಾರ, ಜನವರಿ 11, 2025
ರಮೇಶ ಬಿರಾದಾರ
ಅನೇಕ ಹೋರಾಟಗಳ ಮೂಲಕ ಬರೆವಣಿಗೆಯಲ್ಲಿ ತೊಡಗಿಸಿಕೊಂಡ ಸಾಹಿತಿಯೆಂದರೆ ರಮೇಶ ಬಿರಾದಾರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಗಡಿಕುಶನೂರು ಗ್ರಾಮದ ವೀರಬಸಪ್ಪ ಮತ್ತು ಲಕ್ಷ್ಮಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೧೯೮೪ರಿಂದ ಪೋಟೊಗ್ರಾಫರ್ ಆಗಿ, ಪತ್ರಕರ್ತ, ಸಾಹಿತಿಯಾಗಿ ಗುರ್ತಿಸಿಕೊಂಡು ೨೦೦೯ರಲ್ಲಿ `ಜೀವನದಿ ಬತ್ತಿದಾಗ' (ಕವನಸಂಕಲನ) ೨೦೧೬ರಲ್ಲಿ `ನೀಲಮ್ಮನ ಬಳಗದ ವಚನಗಳು' (ಸಂಪಾದನೆ) ಎಂಬ ಕೃತಿಗಳು ಹೊರತಂದಿದ್ದಾರೆ. ಮತ್ತು `ಪಾಪನಾಶ ಲಿಂಗದೇವನ ವಚನಗಳು', `ಗವೀರನ ತತ್ವಗಳು', 'ಮುಂಜಾವಿಗೆ ಮಂಜು ಕವಿದಾಗ', `ಬಾಬಾಸಾಹೆಬ ಅಂಬೇಡ್ಕರ್, ಹಿಂದು ಕೊಡ್ ಬಿಲ್ (ಹಿಂದಿ ಅನುವಾದ) `ಬೀದರ ತಾಲೂಕು ದರ್ಶನ' ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ದೂರದರ್ಶನ, ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಹಾಗೂ `ಬಿರಾದಾರ' ಎಂಬ ವಾರಪತ್ರಿಕೆಯು ಸ್ಥಾಪಿಸಿದ ಇವರು ಅದರ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಇತ್ತಿಚಿಗೆ ಬಿ.ಜೆ.ವಿಷ್ಣುಕಾಂತ ನಿರ್ದೇಶನದ ಚಲನಚಿತ್ರವೊಂದರಲ್ಲಿ ನಟಿಸಿದ್ದಾರೆ. ಬೀದರ ಜಿಲ್ಲಾ ವಿಕಾಸ ವೇದಿಕೆಯ ವತಿಯಿಂದ ಅನೇಕ ಹೋರಾಟಗಳನ್ನು ಮಾಡಿ ಅಕ್ರಮವಾದ ಭೂ ಕಬಳಿಕೆಯನ್ನು ತಡೆದಿದ್ದಾರೆ. ಇವರಿಗೆ ೧೯೯೩ರಲ್ಲಿ `ಜಿಲ್ಲಾ ಸಾಮಾಜಿಕ ಸೇವಾ ಪ್ರಶಸ್ತಿ, ಮತ್ತು ೧೯೯೭ರಲ್ಲಿ `ಕನ್ನಡ ಯುವ ಹೋರಾಟಗಾರ ಪ್ರಶಸ್ತಿ, ಭಾಲ್ಕಿ ಮಠದಿಂದ ೧೯೯೭ರಲ್ಲಿ 'ಕನ್ನಡ ಸೇವಕ ಪ್ರಶಸ್ತಿ, ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ೨೦೧೫ರಲ್ಲಿ ಬೀದರದ ೩ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರು ರಾಜ್ಯ ಮಟ್ಟದ ಅನೇಕ ಕವಿಗೊಷ್ಠಿ, ಕಮ್ಮಟ, ಸಮ್ಮೇಳನಗಳಲ್ಲಿಯೂ ಭಾಗವಹಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ