ಪುಟಗಳು

ಶನಿವಾರ, ಜನವರಿ 11, 2025

ಸುನೀತಾ ಬಿರಾದಾರ

ಕವಯತ್ರಿ ಸುನೀತಾ ಬಿರಾದಾರ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಚಾಂದೊರಿ ಗ್ರಾಮದ ಉದಯಭಾನು ಮತ್ತು ಸುಶಿಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಟಿ.ಸಿ.ಎಚ್ ವರೆಗೆ ಅಧ್ಯಯನ ಮಾಡಿದ ಇವರು ೧೯೯೩ರಲ್ಲಿ ಮಹಿಳಾ ಪೋಲಿಸ್ ಪೇದೆಯಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ ನಂತರ ೧೯೯೭ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನೇಮಕಗೊಂಡು ಔರಾದ ತಾಲೂಕಿನ ಠಾಣಾ ಕುಸನೂರಿನ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಸಿದ ಇವರು ಸದ್ಯ ಬೀದರ ತಾಲೂಕಿನ ಆನಂದನಗರ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ `ಒಲಿದ ಜೀವ' (ಕಾದಂಬರಿ) `ಹೂದೋಟ' (ಮಕ್ಕಳ ಕವನ ಸಂಕಲನ) ಪ್ರಕಟಿಸಿದ್ದಾರೆ. ಇವರ ಕತೆ ಕವನ ಲೇಖನಗಳು ನಾಡಿನ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ, ಶೈಕ್ಷಣಿಕ ಸಾಧನೆಗೆ ೨೦೦೫ರಲ್ಲಿ ಠಾಣಾ ಕುಸನೂರು ಗ್ರಾಮಸ್ಥರಿಂದ ನಿಂದ `ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ' ಔರಾದ ತಾಲೂಕಿನ `ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೨ರಲ್ಲಿ ಉತ್ತಮ ಮಹಿಳಾ ಬರಹಗಾರ್ತಿಯರಿಗೆ ನೀಡುವ `ಸುರಬಿ’ü ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ