ಶನಿವಾರ, ಜನವರಿ 11, 2025
ಚನ್ನಮ್ಮಾ ವಲ್ಲೆಪೂರೆ
`ಚಿನ್ನಾ' ಎಂಬ ಕಾವ್ಯನಾಮ ಮತ್ತು `ಚನ್ನಬಸವ ಲಿಂಗೇಶ್ವರ’ ಎಂಬ ವಚನಾಂಕಿತದಲ್ಲಿ ಬರೆಯುತ್ತಿರುವ ಲೇಖಕಿಯೆಂದರೆ ಚನ್ನಮ್ಮಾ ವಲ್ಲೆಪೂರೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಕೋಟಗ್ಯಾಳ ಗ್ರಾಮದ ಕಾಶೆಪ್ಪ ಕಾಡೊದೆ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೦-೧೦-೧೯೭೦ರಲ್ಲಿ ಜನಿಸಿದ್ದಾರೆ.. ಬಿ.ಎ.ಬಿ.ಎಡ್.ಪದವಿಧರರಾಗಿರುವ ಇವರು ಸಾಹಿತಿ ಹಂಶಕವಿಯವರ ಧರ್ಮಪತ್ನಿಯಾಗಿದ್ದು, ಕಂಪ್ಯೂಟರ್ ಆಪರೇಟರ್ ಆಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ ೨೦೦೫ರಲ್ಲಿ `ಬೆಳಕು' ೨೦೧೬ರಲ್ಲಿ `ಬದುಕು ಬೆಳಕು’ (ಕವನ ಸಂಕಲನಗಳು) ೨೦೦೮ರಲ್ಲಿ `ಸಿದ್ದೇಶ್ವರ ಉವಾಚ' ಎಂಬ ಸಿದ್ದೇಶ್ವರ ಶ್ರೀಗಳ ಸಂದೇಶ ಕೃತಿ, ೨೦೧೫ರಲ್ಲಿ `ಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯರು' (ಚರಿತ್ರೆ) ೨೦೧೬ರಲ್ಲಿ `ಚಂದ್ರಬಿAಬ' ಎಂಬ ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ರ ಜೀವನ ಚರಿತ್ರೆಯನ್ನು ಬರೆದು, `ಸಮಕಾಲೀನ ಹಿರಿಯ ಸಾಹಿತಿಗಳು' ಎಂಬ ಸಂಪಾದಿತ ಕೃತಿಯೊಂದು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ `ಆಧುನಿಕ ವಚನಗಳು' ಕೂಡ ಬರೆದಿದ್ದು ಅವು ಕೆಲ ಸಂಪುಟಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೦೮ರಲ್ಲಿ ಹುಮನಾಬಾದಿನ ಧರಿನಾಡು ಕನ್ನಡ ಸಾಹಿತ್ಯ ಸಂಘದಿAದ ಸುವರ್ಣ ಕನ್ನಡಿಗ, ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಬೆಳಕು ಶ್ರೀ ' ೨೦೧೧ರಲ್ಲಿ ಭಾಲ್ಕಿ ಶ್ರೀಗಳಿಂದ `ಸಾಹಿತ್ಯ ಜ್ಯೋತಿ' ೨೦೧೭ರಲ್ಲಿ ಪಂಜಾಬಿನ ಚಂಡಿಗಡದಲ್ಲಿ ನಡೆದ ಅಖಿಲ ಭಾರತ ಕವಯತ್ರಿ ಸಮ್ಮೇಳನದಲ್ಲಿ `ಮೈತ್ರೇಯಿ ಪ್ರಶಸ್ತಿ, ೨೦೧೯ರಲ್ಲಿ ನಡೆದ ಅಖಿಲ ಭಾರತೀಯ ಕವಯತ್ರಿ ಸಮ್ಮೇಳನದಲ್ಲಿ `ಲಾಲದೇನ್ ' ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಬೀದರ ಮಹಿಳಾ ಲೇಖಕಿಯರ ಸಂಘದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮರಣದ ನಂತರ ತಮ್ಮ ದೇಹದಾನ ಮಾಡಿರುವುದು ನೋಡಿದರೆ, `ಪರೋಪಕಾರಂ ಇದಂ ಶರೀರಂ’ ಎನ್ನುವಂತ ಇವರ ತ್ಯಾಗ ಮೆಚ್ಚುವಂತಹದ್ದು.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ